<p><strong>ಮೈಸೂರು: </strong>ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೋಮವಾರ ಪುನರಾರಂಭಗೊಂಡಿದ್ದು, ಮೊದಲ ದಿನ 216 ಪ್ರವಾಸಿಗರು ವೀಕ್ಷಿಸಿದರು.</p>.<p>ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು 50 ಟಿಕೆಟ್ ಖರೀದಿಸಿ ತಮ್ಮ ಜತೆಯಲ್ಲಿದ್ದ ಶಾಸಕರು, ಸಂಸದರು, ಬೆಂಬಲಿಗರಿಗೆ ನೀಡಿದರು.</p>.<p>‘ಈ ಹಿಂದೆ ನಿತ್ಯ ಎರಡು ಸಾವಿರಕ್ಕೂ ಅಧಿಕ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಜೂನ್ 9ರ ಮಂಗಳವಾರವೂ ಮೃಗಾಲಯ, ಕಾರಂಜಿ ಉದ್ಯಾನ ತೆರೆದಿರಲಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತೆರೆದ ಅರಮನೆ: ಮೈಸೂರು ಅರಮನೆಯೂ ಸಾರ್ವಜನಿಕರ ವೀಕ್ಷಣೆಗೆ ಪುನರಾರಂಭಗೊಂಡಿದ್ದು, ಮೊದಲ ದಿನ ಕೇವಲ 58 ಮಂದಿ ವೀಕ್ಷಿಸಿದರು.</p>.<p>ಸಫಾರಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ, ನಾಗರಹೊಳೆ, ದಮನಕಟ್ಟೆ, ಅಂತರಸಂತೆ ಸಫಾರಿ ಕೇಂದ್ರ ಆರಂಭಗೊಂಡಿದ್ದು, 35 ಜನರು ಸಫಾರಿ ಮಾಡಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಿಗ್ಗೆ 11 ಜನರು, ಮಧ್ಯಾಹ್ನ 36 ಮಂದಿ ಸಫಾರಿಗೆ ತೆರಳಿ ವನ್ಯಜೀವಿಗಳನ್ನು ವೀಕ್ಷಿಸಿದರು. ರಂಗನತಿಟ್ಟು ಪಕ್ಷಿಧಾಮಕ್ಕೆ ಬೆರಳೆಣಿಕೆ ಪ್ರವಾಸಿಗರು ಭೇಟಿ ನೀಡಿದರು.</p>.<p class="Briefhead"><strong><span class="Bullet">₹ 3.23 ಕೋಟಿ ದೇಣಿಗೆ</span></strong></p>.<p>ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ನೆರವಿಗಾಗಿ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಗೆಳೆಯರ ಬಳಗದಿಂದ, ಹಂತ ಹಂತವಾಗಿ ಒಟ್ಟು ₹ 3.23 ಕೋಟಿ ದೇಣಿಗೆ ನೀಡಿದ್ದಾರೆ.</p>.<p>ಕನ್ನಡ ಚಿತ್ರರಂಗದ ಮೇರು ನಟರಾದ ರಾಜ್ಕುಮಾರ್, ಅಂಬರೀಷ್ ಹಾಗೂ ವಿಷ್ಣುವರ್ಧನ್ ಹೆಸರಿನಲ್ಲಿ ಎರಡು ಆನೆಗಳು ಹಾಗೂ ಒಂದು ಸಿಂಹವನ್ನು ಸಚಿವರು ದತ್ತು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೋಮವಾರ ಪುನರಾರಂಭಗೊಂಡಿದ್ದು, ಮೊದಲ ದಿನ 216 ಪ್ರವಾಸಿಗರು ವೀಕ್ಷಿಸಿದರು.</p>.<p>ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು 50 ಟಿಕೆಟ್ ಖರೀದಿಸಿ ತಮ್ಮ ಜತೆಯಲ್ಲಿದ್ದ ಶಾಸಕರು, ಸಂಸದರು, ಬೆಂಬಲಿಗರಿಗೆ ನೀಡಿದರು.</p>.<p>‘ಈ ಹಿಂದೆ ನಿತ್ಯ ಎರಡು ಸಾವಿರಕ್ಕೂ ಅಧಿಕ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಜೂನ್ 9ರ ಮಂಗಳವಾರವೂ ಮೃಗಾಲಯ, ಕಾರಂಜಿ ಉದ್ಯಾನ ತೆರೆದಿರಲಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತೆರೆದ ಅರಮನೆ: ಮೈಸೂರು ಅರಮನೆಯೂ ಸಾರ್ವಜನಿಕರ ವೀಕ್ಷಣೆಗೆ ಪುನರಾರಂಭಗೊಂಡಿದ್ದು, ಮೊದಲ ದಿನ ಕೇವಲ 58 ಮಂದಿ ವೀಕ್ಷಿಸಿದರು.</p>.<p>ಸಫಾರಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ, ನಾಗರಹೊಳೆ, ದಮನಕಟ್ಟೆ, ಅಂತರಸಂತೆ ಸಫಾರಿ ಕೇಂದ್ರ ಆರಂಭಗೊಂಡಿದ್ದು, 35 ಜನರು ಸಫಾರಿ ಮಾಡಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಿಗ್ಗೆ 11 ಜನರು, ಮಧ್ಯಾಹ್ನ 36 ಮಂದಿ ಸಫಾರಿಗೆ ತೆರಳಿ ವನ್ಯಜೀವಿಗಳನ್ನು ವೀಕ್ಷಿಸಿದರು. ರಂಗನತಿಟ್ಟು ಪಕ್ಷಿಧಾಮಕ್ಕೆ ಬೆರಳೆಣಿಕೆ ಪ್ರವಾಸಿಗರು ಭೇಟಿ ನೀಡಿದರು.</p>.<p class="Briefhead"><strong><span class="Bullet">₹ 3.23 ಕೋಟಿ ದೇಣಿಗೆ</span></strong></p>.<p>ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ನೆರವಿಗಾಗಿ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಗೆಳೆಯರ ಬಳಗದಿಂದ, ಹಂತ ಹಂತವಾಗಿ ಒಟ್ಟು ₹ 3.23 ಕೋಟಿ ದೇಣಿಗೆ ನೀಡಿದ್ದಾರೆ.</p>.<p>ಕನ್ನಡ ಚಿತ್ರರಂಗದ ಮೇರು ನಟರಾದ ರಾಜ್ಕುಮಾರ್, ಅಂಬರೀಷ್ ಹಾಗೂ ವಿಷ್ಣುವರ್ಧನ್ ಹೆಸರಿನಲ್ಲಿ ಎರಡು ಆನೆಗಳು ಹಾಗೂ ಒಂದು ಸಿಂಹವನ್ನು ಸಚಿವರು ದತ್ತು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>