ಮೈಸೂರು: ಸಂಕ್ರಾಂತಿಯ ನಂತರ ಕಾಂಗ್ರೆಸ್ ಪಕ್ಷ ಸೇರುವುದಾಗಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಇಲ್ಲಿ ತಿಳಿಸಿದರು. ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಪಕ್ಷ ಸೇರಲು ಸರಿಯಾದ ಕಾಲ ಕೂಡಿಬಂದಿಲ್ಲ. ಒಳ್ಳೆಯ ದಿನಕ್ಕಾಗಿ ಕಾಯುತ್ತಿದ್ದೇನೆ. ನಾನು ಮೂಲ ಕಾಂಗ್ರೆಸಿಗನಾಗಿದ್ದು, ನನ್ನ ಸ್ವಾಭಿಮಾನ, ಆತ್ಮವಿಶ್ವಾಸಕ್ಕೆ ಧಕ್ಕೆ ಬಂದ ಕಾರಣ ಬಿಜೆಪಿಯಿಂದ ಹೊರಬಂದೆ’ ಎಂದು ಅವರು ಹೇಳಿದರು.