ನಂದ ಮೇ 13ರಂದು ನಂದಿಶ್ ಅವರಿಗೆ ಕರೆ ಮಾಡಿ, ‘ನಾನು ಲ್ಯಾಂಡ್ ಆರ್ಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಾಮಗಾರಿಗೆ ತಂದಿರುವ ಕಬ್ಬಿಣ ಹಾಗೂ ಸಿಮೆಂಟ್ ಅನ್ನು ಕಡಿಮೆ ಬೆಲೆಗೆ ಕೊಡುತ್ತೇನೆ’ ಎಂದು ನಂಬಿಸಿ, ಫೋನ್ ಪೇ ಮೂಲಕ ₹80 ಸಾವಿರವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ನಂತರ ಆರೋಪಿ ಸಂಪರ್ಕಕ್ಕೆ ಸಿಗದಿದ್ದಾಗ ನಂದೀಶ್ ಅವರ ಸಂಸ್ಥೆಗೆ ತೆರಳಿ ವಿಚಾರಿಸಿದ್ದು, ಆತ ಅಲ್ಲಿ ಇದೇ ಮಾದರಿಯ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತ್ತಾಗಿರುವುದು ತಿಳಿದುಬಂದಿದೆ.