<p><strong>ಮೈಸೂರು</strong>: ‘ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲೂ ಸಿನಿಮಾ ಮತ್ತು ರಂಗಭೂಮಿ ಕ್ಷೇತ್ರಗಳು ಶಕ್ತಿಯುತವಾಗಿ ಬೆಳೆಯುತ್ತಿರುವುದು ಆಶಾದಾಯಕ’ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು. </p>.<p>ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಭಾನುವಾರ ನಡೆದ ‘ಹರಿಶ್ಚಂದ್ರ’ ಕಿರುಚಿತ್ರದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಸಿನಿಮಾ, ರಂಗಭೂಮಿಗಳು ಮಾನವ ಸಂಪನ್ಮೂಲ ಹಾಗೂ ಸೃಜನಶೀಲತೆ ಬೇಡುತ್ತವೆ. ‘ಎಐ’ ಪ್ರಭಾವ ಇವುಗಳಿಗೆ ಬೀರುವುದಿಲ್ಲ. ಲೇಖಕ ರಾಜಪ್ಪ ದಳವಾಯಿ ನಿರ್ದೇಶನದ ಹರಿಶ್ಚಂದ್ರ ಚಿತ್ರವು ಕೋಲ್ಕತ್ತದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಯಲ್ಲಿ 8 ಪ್ರಶಸ್ತಿ ಪಡೆದಿರುವುದು ಪ್ರಶಂಸನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>‘ಕಿರುಚಿತ್ರಗಳು ಕಡಿಮೆ ಸಮಯದಲ್ಲಿ ಬದುಕಿನ ತತ್ವವನ್ನು ಗಾಢವಾಗಿ ಕಟ್ಟಿಕೊಡುತ್ತವೆ. ಬದುಕನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ’ ಎಂದು ಹೇಳಿದರು. </p>.<p>ಲೇಖಕ ಬಿ.ಎ.ಮಧು ಮಾತನಾಡಿ, ‘ಕಿರುಚಿತ್ರಗಳೇ ಇಂದು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ರಾಜಪ್ಪ ದಳವಾಯಿ ಅವರು ಆಯ್ಕೆ ಮಾಡಿಕೊಂಡಿರುವ ಮಾರ್ಗ ಸುಂದರವಾಗಿದೆ. ಹರಿಶ್ಚಂದ್ರ ಕಿರುಚಿತ್ರದಲ್ಲಿ ಬರುವ ಸ್ಮಶಾನದ ದೃಶ್ಯವೊಂದರಲ್ಲೇ ಇಡೀ ಜೀವನದ ಕಥೆಯನ್ನೇ ಹೇಳಲಾಗಿದೆ’ ಎಂದರು. </p>.<p>‘ಬೆಂಕಿ ಎಂಬುದು ಜೀವನ; ಬೂದಿ ಎಂಬುದು ಸಾವು. ಎಷ್ಟೇ ಸಂಪಾದನೆ, ಏನೇ ಸಾಧನೆ ಮಾಡಿದರೂ ಕಡೆಗೆ ಒಂದು ದಿನ ಸ್ಮಶಾನಕ್ಕೆ ಬರಬೇಕು ಎಂಬುದನ್ನು ಸರಳವಾಗಿ ಹೇಳಲಾಗಿದೆ’ ಎಂದು ತಿಳಿಸಿದರು. </p>.<p>ನಿರ್ದೇಶಕ ರಾಜಪ್ಪ ದಳವಾಯಿ, ಕಲಾವಿದರಾದ ನಾಗರಾಜ ಆದವಾನಿ, ಎಸ್.ಜಿ.ಸೋಮಶೇಖರ್ ರಾವ್ ಅವರನ್ನು ಗೌರವಿಸಲಾಯಿತು.</p>.<p>ರಂಗಕರ್ಮಿ ರಾಜಶೇಖರ ಕದಂಬ, ನಟರಾಜ್ ಶಿವು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲೂ ಸಿನಿಮಾ ಮತ್ತು ರಂಗಭೂಮಿ ಕ್ಷೇತ್ರಗಳು ಶಕ್ತಿಯುತವಾಗಿ ಬೆಳೆಯುತ್ತಿರುವುದು ಆಶಾದಾಯಕ’ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು. </p>.<p>ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಭಾನುವಾರ ನಡೆದ ‘ಹರಿಶ್ಚಂದ್ರ’ ಕಿರುಚಿತ್ರದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಸಿನಿಮಾ, ರಂಗಭೂಮಿಗಳು ಮಾನವ ಸಂಪನ್ಮೂಲ ಹಾಗೂ ಸೃಜನಶೀಲತೆ ಬೇಡುತ್ತವೆ. ‘ಎಐ’ ಪ್ರಭಾವ ಇವುಗಳಿಗೆ ಬೀರುವುದಿಲ್ಲ. ಲೇಖಕ ರಾಜಪ್ಪ ದಳವಾಯಿ ನಿರ್ದೇಶನದ ಹರಿಶ್ಚಂದ್ರ ಚಿತ್ರವು ಕೋಲ್ಕತ್ತದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಯಲ್ಲಿ 8 ಪ್ರಶಸ್ತಿ ಪಡೆದಿರುವುದು ಪ್ರಶಂಸನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>‘ಕಿರುಚಿತ್ರಗಳು ಕಡಿಮೆ ಸಮಯದಲ್ಲಿ ಬದುಕಿನ ತತ್ವವನ್ನು ಗಾಢವಾಗಿ ಕಟ್ಟಿಕೊಡುತ್ತವೆ. ಬದುಕನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ’ ಎಂದು ಹೇಳಿದರು. </p>.<p>ಲೇಖಕ ಬಿ.ಎ.ಮಧು ಮಾತನಾಡಿ, ‘ಕಿರುಚಿತ್ರಗಳೇ ಇಂದು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ರಾಜಪ್ಪ ದಳವಾಯಿ ಅವರು ಆಯ್ಕೆ ಮಾಡಿಕೊಂಡಿರುವ ಮಾರ್ಗ ಸುಂದರವಾಗಿದೆ. ಹರಿಶ್ಚಂದ್ರ ಕಿರುಚಿತ್ರದಲ್ಲಿ ಬರುವ ಸ್ಮಶಾನದ ದೃಶ್ಯವೊಂದರಲ್ಲೇ ಇಡೀ ಜೀವನದ ಕಥೆಯನ್ನೇ ಹೇಳಲಾಗಿದೆ’ ಎಂದರು. </p>.<p>‘ಬೆಂಕಿ ಎಂಬುದು ಜೀವನ; ಬೂದಿ ಎಂಬುದು ಸಾವು. ಎಷ್ಟೇ ಸಂಪಾದನೆ, ಏನೇ ಸಾಧನೆ ಮಾಡಿದರೂ ಕಡೆಗೆ ಒಂದು ದಿನ ಸ್ಮಶಾನಕ್ಕೆ ಬರಬೇಕು ಎಂಬುದನ್ನು ಸರಳವಾಗಿ ಹೇಳಲಾಗಿದೆ’ ಎಂದು ತಿಳಿಸಿದರು. </p>.<p>ನಿರ್ದೇಶಕ ರಾಜಪ್ಪ ದಳವಾಯಿ, ಕಲಾವಿದರಾದ ನಾಗರಾಜ ಆದವಾನಿ, ಎಸ್.ಜಿ.ಸೋಮಶೇಖರ್ ರಾವ್ ಅವರನ್ನು ಗೌರವಿಸಲಾಯಿತು.</p>.<p>ರಂಗಕರ್ಮಿ ರಾಜಶೇಖರ ಕದಂಬ, ನಟರಾಜ್ ಶಿವು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>