ಬುಧವಾರ, 15 ಅಕ್ಟೋಬರ್ 2025
×
ADVERTISEMENT
ADVERTISEMENT

ಮೈಸೂರು | ಬೌದ್ಧ ಸಮ್ಮೇಳನ: ಹರಿದು ಬಂದ ಜನ

ಅಂಬೇಡ್ಕರ್‌, ಗೌತಮ ಬುದ್ಧನ ಗುಣಗಾನ ಹಾರಾಡಿದ ಪಂಚಶೀಲ ಬಾವುಟ
Published : 15 ಅಕ್ಟೋಬರ್ 2025, 2:18 IST
Last Updated : 15 ಅಕ್ಟೋಬರ್ 2025, 2:18 IST
ಫಾಲೋ ಮಾಡಿ
Comments
ಆಕರ್ಷಿದ ಪೂಜಾ ಕುಣಿತ
ಆಕರ್ಷಿದ ಪೂಜಾ ಕುಣಿತ
57 ಕೋಟಿ ಅನುಯಾಯಿಗಳು: ಮೂಡ್ನಾಕೂಡು
  ‘ಬೌದ್ಧ ಧರ್ಮವು ತನ್ನ ತತ್ವ ಶಕ್ತಿಯ ಮೇಲೆ ನಿಂತಿದ್ದು ಬೆಳೆಯುತ್ತಲೇ ಇದೆ. ವಿಶ್ವದಲ್ಲಿ 57 ಕೋಟಿ ಪರಿಪಾಲಕರಿದ್ದಾರೆ. 32 ದೇಶಗಳಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದಾರೆ. ಇಹಲೋಕದ ಜೀವನ ಹೇಗಿರಬೇಕು ಎಂಬ ಜೀವನ ತತ್ವವನ್ನು ಮನುಷ್ಯರಿಗೆ ಬುದ್ಧ ಕಲಿಸಿದ’ ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.  ನಳಂದ ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ಮಾತನಾಡಿ ‘ಬುದ್ಧ ಮಾತ್ರವೇ ದೇವರಿಲ್ಲದ ಧರ್ಮ ಮಾರ್ಗವನ್ನು ತೋರಿದನು’ ಎಂದರು.  ನಿವೃತ್ತ ಐಪಿಎಸ್‌ ಅಧಿಕಾರಿ ಮರಿಸ್ವಾಮಿ ‘ತಳ ಸಮುದಾಯಗಳ ಸಾಮಾಜಿಕ ಉನ್ನತಿಗೆ ಬೌದ್ಧ ಧರ್ಮದ ಸ್ವೀಕಾರ ಅತ್ಯಂತ ಮುಖ್ಯ’ ಎಂದು ಅಭಿಪ್ರಾಯಪಟ್ಟರು. ಚಿಂತಕ ಕಾಂಚಾ ಐಲಯ್ಯ ಅಂತರಸಂತೆ ಬುದ್ಧ ವಿಹಾರದ ಭಂತೆ ಮಾತೆ ಗೌತಮಿ ಪಾಲ್ಗೊಂಡಿದ್ದರು. 
ಮೂಡ್ನಾಕೂಡು ಚಿನ್ನಸ್ವಾಮಿ
ಮೂಡ್ನಾಕೂಡು ಚಿನ್ನಸ್ವಾಮಿ
ಬುದ್ಧ, ಅಂಬೇಡ್ಕರ್‌ಮಯ
ಮಹಾರಾಜ ಕಾಲೇಜು ಮೈದಾನವು ಬುದ್ಧಮಯವಾಗಿತ್ತು. ಮಳಿಗೆಗಳಲ್ಲಿ ಬುದ್ಧ ಹಾಗೂ ಅಂಬೇಡ್ಕರ್ ಕುರಿತ ಪುಸ್ತಕಗಳ ಪ್ರದರ್ಶನ ಮಾರಾಟ ನಡೆಯಿತು.  ಬುದ್ಧನ ಪ್ರತಿಮೆಯಿದ್ದ ರಥ ಅಂಬೇಡ್ಕರ್‌ ಭಾವಚಿತ್ರದ ರಥದ ಎದುರು ಜನ ಸೆಲ್ಫಿ ತೆಗೆದುಕೊಂಡರು. ಗೌತಮ ಬುದ್ಧ ಹಾಗೂ ಅಂಬೇಡ್ಕರ್‌ ಕುರಿತು ಐನ್‌ಸ್ಟೀನ್ ಪೆರಿಯಾರ್ ಗಾಂಧೀಜಿ ಪೂರ್ಣಚಂದ್ರ ತೇಜಸ್ವಿ ಕುವೆಂಪು ಸೇರಿ ಮಹನೀಯರ ನುಡಿಫಲಕಗಳಿಂದ ತುಂಬಿದ್ದವು.   ಭಂತೆ ಮಾತೆ ಸಂಘಮಿತ್ರೆ ಹನಸೋಗೆ ಸೋಮಶೇಖರ್‌ ದಸಂಸ ಮುಖಂಡ ವೆಂಕಟರಮಣಸ್ವಾಮಿ ಕವಿ ಗೋವಿಂದಸ್ವಾಮಿ ಗುಂಡಾಪುರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ನಡೆಯಿತು. 
ಒಂದು ಕಾಲದಲ್ಲಿ ಬುದ್ಧಮಯವಾಗಿದ್ದ ಭಾರತ ನಂತರ ಪ್ರತಿವಾದಿಗಳ ದಾಳಿಗೆ ಸಿಲುಕಿದೆ. ಆದರೆ ಅದರ ಬೀಜ ಹಾಗೆಯೇ ಇದ್ದು, ಅದನ್ನು ಬೆಳೆಸಬೇಕಿದೆಡಿ.
ಎಸ್. ವೀರಯ್ಯ, ಚಿಂತಕ
‘ವರ್ತಮಾನಕ್ಕೆ ತಕ್ಕಂತೆ ಮೌಲ್ಯ ಬಳಸಿ’
ಮೈಸೂರು: ‘ಪರಂಪರೆ ಹಾಗೂ ಸಂಪ್ರದಾಯದ ಉತ್ತಮ ಮೌಲ್ಯ ಗಳನ್ನು ವರ್ತಮಾನದ ಅಗತ್ಯಕ್ಕೆ ಅನುಗುಣ ವಾಗಿ ಬಳಸ ಬೇಕಿದೆ. ಮರುಹುಟ್ಟು ಧಮ್ಮದ ಹೊಸ ಅನುಸಂಧಾನ’ ಎಂದು ವಿಮರ್ಶಕ ರಹಮತ್‌ ತರೀಕೆರೆ ಪ್ರತಿಪಾದಿಸಿದರು. ಬೌದ್ಧ ಮಹಾ ಸಮ್ಮೇಳನದಲ್ಲಿ ‘ಪರಂಪರೆಯ ಕೊಳಕು ಹಾಗೂ ಆಧುನಿಕ ವಿಕಾರಗಳೆರಡಕ್ಕೂ ಬುದ್ಧನೇ ದಿವ್ಯೌಷಧ’ ಉಪನ್ಯಾಸದಲ್ಲಿ ಮಾತನಾಡಿದರು. ‘ಸಂಪ್ರದಾಯದೊಂದಿಗೆ ಎಲ್ಲಾ ಕಾಲದಲ್ಲೂ ಜಗಳಗಳು ನಡೆದಿವೆ. ಕೊಳಕಿನ ವಿರುದ್ಧ ಆಯಾಯ ದೇಶದ ಚಿಂತಕರು ಹೋರಾಡಿ ದ್ದಾರೆ. ಬುದ್ಧ ತಿಳಿಸಿದ ಪ್ರಜ್ಞೆ ಹಾಗೂ ಮೈತ್ರಿಯು ಸಮಾಜವನ್ನು ಅರ್ಥೈಸಲು ಸಹಾಯಕ. ಮೈತ್ರಿ ಕಳೆದುಕೊಂಡ ಜನ ಇರುವ ದೇಶ ಮುಂದುವರಿಯುವುದು ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು. ತಿ.ನರಸೀಪುರದ ಭಂತೆ ಬೋಧಿ ರತ್ನ, ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್, ಚಿಂತಕ ಬಸವರಾಜ್ ದೇವನೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT