‘ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಪ್ರೌಢಶಾಲೆಯೊಂದರಲ್ಲಿ ಬಿಸಿಯೂಟ ಕಾರ್ಯಕರ್ತೆ ಗೌರಮ್ಮ ಎನ್ನುವವರು ಅಡುಗೆ ಮಾಡುವ ವೇಳೆ ಬಿಸಿಬೇಳೆ ಬಾತ್ ಚೆಲ್ಲಿ ತೀವ್ರವಾಗಿ ಸುಟ್ಟ ಗಾಯಗಳಾಗಿ ಮೃತಪಟ್ಟಿದ್ದಾರೆ. ಇತರ ಅಡುಗೆ ಸಹಾಯಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದೇ ರೀತಿ ಲಕ್ಷಾಂತರ ಬಿಸಿ ಊಟ ಕಾರ್ಯಕರ್ತೆಯರು ಸೂಕ್ತ ಭದ್ರತೆ, ರಕ್ಷಣೆ ಇಲ್ಲದೆ ಯಾವುದೇ ಕಾರ್ಮಿಕ ಕಾಯ್ದೆಗೂ ಒಳಪಡದೇ ಕೆಲಸ ಮಾಡುತ್ತಿದ್ದಾರೆ. ಅತ್ಯಲ್ಪ ದುಡಿಮೆಯ ಹಣವನ್ನು ಗೌರವಧನದ ಹೆಸರಿನಲ್ಲಿ ಪಡೆಯುತ್ತಿದ್ದಾರೆ. ರಾಜ್ಯ ಕನಿಷ್ಠ ವೇತನ ಕಾಯ್ದೆಯ ಅನ್ವಯ ಬಿಸಿಯೂಟ ಕಾರ್ಯಕರ್ತೆಯರನ್ನು ಶೆಡ್ಯೂಲ್ಗೆ ಒಳಪಡಿಸಬೇಕು’ ಎಂದು ಕೋರಿದ್ದಾರೆ.