ಅರ್ಧಮಂಡಲೋತ್ಸವ; ಉಪನ್ಯಾಸ ನಾಳೆ
ಭಾರತೀ ಯೋಗಧಾಮ ಸಂಸ್ಥೆಗೆ 24 ವರ್ಷ ತುಂಬಿದ್ದು ಅರ್ಧಮಂಡಲೋತ್ಸವ ಆಚರಣೆ ನಡೆಯುತ್ತಿದೆ. ಅದರ ಪ್ರಯುಕ್ತ ಜ.6ರಂದು ಸಂಜೆ 6ರಿಂದ ರಾತ್ರಿ 8.30ರವರೆಗೆ ಸಂಸ್ಥೆಯಲ್ಲಿ ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಔಚಿತ್ಯ’ ಕುರಿತು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವರು. ವಿದ್ಯಾನಂದಿನೀ ಗುರುಕುಲದ ವೆಬ್ಸೈಟ್ ಬಿಡುಗಡೆಯೂ ನಡೆಯಲಿದೆ’ ಎಂದು ಸಂಸ್ಥೆ ಟ್ರಸ್ಟಿ ಗಣಪತಿ ಭಟ್ ತಿಳಿಸಿದರು.