<p><strong>ಮೈಸೂರು</strong>: ‘ಮಕ್ಕಳ ಸಂವೇದನೆ ಜಾಗೃತಗೊಳಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ತರಬೇತಿ ಕಾರ್ಯಗಾರ ಅಗತ್ಯ’ ಎಂದು ಇಂಡಿಯನ್ ಥಿಯೇಟರ್ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಪ್ರಸನ್ನ ತಿಳಿಸಿದರು.</p>.<p>ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ವರ್ಣ ಕಲೆಕ್ಟಿವ್ ಮತ್ತು ಮೈಸೂರು ಆರ್ಟ್ ಸೆಂಟರ್ ವತಿಯಿಂದ ಸೋಮವಾರದಿಂದ ಆರಂಭವಾದ ‘ಆರ್ಟ್ ಇಂಟ್ರೋ’ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>‘ಕಲಾ ಶಿಕ್ಷಣದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆಯಿದೆ. ಕಲಾ ಪ್ರಕಾರವನ್ನು ಗಮನಿಸುವುದು, ಸಿನಿಮಾ, ಚಿತ್ರ ನೋಡುವುದು, ಸಂಗೀತ ಕೇಳುವುದು ಹೇಗೆ ಎಂದು ಕಳಿಸುವುದಷ್ಟೇ ಶಿಕ್ಷಣವೆಂದು ನಾವು ನಂಬಿದ್ದೇವೆ. ಆದರೆ ಮಕ್ಕಳಲ್ಲಿನ ಸಂವೇದನೆ ಜಾಗೃತಗೊಳಿಸದಿದ್ದರೆ ಕಲಾ ಶಿಕ್ಷಣ ನೀಡುವುದು ಅಸಾಧ್ಯ’ ಎಂದರು.</p>.<p>‘ಈಚೆಗೆ ಅನೇಕ ಕಡೆ ಬೇಸಿಗೆ ತರಬೇತಿಗಳು ಚಿಗುರೊಡೆದಿದೆ. ಅಲ್ಲಿನ ಶಿಕ್ಷಣ ಮಕ್ಕಳ ಕೌಶಲ ಅರಳಿಸುವಂತಿರಬೇಕು. ಕಲೆಯೊಂದಿಗೆ ಬದುಕನ್ನು ಸವಿಯುವ ಪಾಠವನ್ನು ಪರಿಚಯಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಕಡಿಮೆಯಾಗಿರುವುದರಿಂದ ತರಬೇತಿ ಶಿಬಿರಗಳ ಆಯೋಜನೆ ಅನಿವಾರ್ಯವಾಗಿದೆ’ ಎಂದು ಹೇಳಿದರು.</p>.<p>ಶಿಕ್ಷಣ ತಜ್ಞ ಎಚ್.ಎಸ್.ಉಮೇಶ್ ಮಾತನಾಡಿ, ‘ಮಕ್ಕಳಲ್ಲಿ ಹೊಸತನ ತುಂಬುವ ಪಠ್ಯೇತರ ಚಟುವಟಿಕೆಯ ಜಾಗವನ್ನು ಮೊಬೈಲ್ ಆಕ್ರಮಿಸಿದೆ. ಹೀಗಾಗಿ ಅವರಲ್ಲಿ ಸೃಜನಶೀಲತೆ ಹೆಚ್ಚಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕಾದ ಅವಶ್ಯಕತೆಯಿದೆ’ ಎಂದು ತಿಳಿಸಿದರು.</p>.<p>ಪ್ರಸನ್ನ ಅವರು ರಚಿಸಿ, ನಿರ್ದೇಶಿಸಿದ ‘ಪಿಪ್ಪಿಗೊಂದು ಪಪ್ಪಿ’ ನಾಟಕವನ್ನು ಸಂಸ್ಥೆಯ ಕಲಾವಿದರು ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಮಕ್ಕಳ ಸಂವೇದನೆ ಜಾಗೃತಗೊಳಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ತರಬೇತಿ ಕಾರ್ಯಗಾರ ಅಗತ್ಯ’ ಎಂದು ಇಂಡಿಯನ್ ಥಿಯೇಟರ್ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಪ್ರಸನ್ನ ತಿಳಿಸಿದರು.</p>.<p>ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ವರ್ಣ ಕಲೆಕ್ಟಿವ್ ಮತ್ತು ಮೈಸೂರು ಆರ್ಟ್ ಸೆಂಟರ್ ವತಿಯಿಂದ ಸೋಮವಾರದಿಂದ ಆರಂಭವಾದ ‘ಆರ್ಟ್ ಇಂಟ್ರೋ’ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>‘ಕಲಾ ಶಿಕ್ಷಣದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆಯಿದೆ. ಕಲಾ ಪ್ರಕಾರವನ್ನು ಗಮನಿಸುವುದು, ಸಿನಿಮಾ, ಚಿತ್ರ ನೋಡುವುದು, ಸಂಗೀತ ಕೇಳುವುದು ಹೇಗೆ ಎಂದು ಕಳಿಸುವುದಷ್ಟೇ ಶಿಕ್ಷಣವೆಂದು ನಾವು ನಂಬಿದ್ದೇವೆ. ಆದರೆ ಮಕ್ಕಳಲ್ಲಿನ ಸಂವೇದನೆ ಜಾಗೃತಗೊಳಿಸದಿದ್ದರೆ ಕಲಾ ಶಿಕ್ಷಣ ನೀಡುವುದು ಅಸಾಧ್ಯ’ ಎಂದರು.</p>.<p>‘ಈಚೆಗೆ ಅನೇಕ ಕಡೆ ಬೇಸಿಗೆ ತರಬೇತಿಗಳು ಚಿಗುರೊಡೆದಿದೆ. ಅಲ್ಲಿನ ಶಿಕ್ಷಣ ಮಕ್ಕಳ ಕೌಶಲ ಅರಳಿಸುವಂತಿರಬೇಕು. ಕಲೆಯೊಂದಿಗೆ ಬದುಕನ್ನು ಸವಿಯುವ ಪಾಠವನ್ನು ಪರಿಚಯಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಕಡಿಮೆಯಾಗಿರುವುದರಿಂದ ತರಬೇತಿ ಶಿಬಿರಗಳ ಆಯೋಜನೆ ಅನಿವಾರ್ಯವಾಗಿದೆ’ ಎಂದು ಹೇಳಿದರು.</p>.<p>ಶಿಕ್ಷಣ ತಜ್ಞ ಎಚ್.ಎಸ್.ಉಮೇಶ್ ಮಾತನಾಡಿ, ‘ಮಕ್ಕಳಲ್ಲಿ ಹೊಸತನ ತುಂಬುವ ಪಠ್ಯೇತರ ಚಟುವಟಿಕೆಯ ಜಾಗವನ್ನು ಮೊಬೈಲ್ ಆಕ್ರಮಿಸಿದೆ. ಹೀಗಾಗಿ ಅವರಲ್ಲಿ ಸೃಜನಶೀಲತೆ ಹೆಚ್ಚಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕಾದ ಅವಶ್ಯಕತೆಯಿದೆ’ ಎಂದು ತಿಳಿಸಿದರು.</p>.<p>ಪ್ರಸನ್ನ ಅವರು ರಚಿಸಿ, ನಿರ್ದೇಶಿಸಿದ ‘ಪಿಪ್ಪಿಗೊಂದು ಪಪ್ಪಿ’ ನಾಟಕವನ್ನು ಸಂಸ್ಥೆಯ ಕಲಾವಿದರು ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>