<p><strong>ಹುಣಸೂರು</strong>: ‘ತೆಂಗು ಬೆಳೆಗಾರರು ಗಣನೀಯವಾಗಿ ಹೆಚ್ಚಾಗುತ್ತಿದ್ದು, ತೋಟಗಾರಿಕೆ ಬೆಳೆಯತ್ತ ಆಸಕ್ತಿ ಮೂಡಿರುವುದು ಶ್ಲಾಘನೀಯ’ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜ್ ಹೇಳಿದರು.</p>.<p>ತಾಲ್ಲೂಕಿನ ಹನುಮಂತಪುರದಪ್ರಗತಿಪರ ರೈತ ಮಹಿಳೆ ವಸಂತಮ್ಮ ಅವರ ತೆಂಗಿನ ತೋಟದಲ್ಲಿ ಬುಧವಾರ ವಿಶ್ವ ತೆಂಗು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ತೆಂಗು ಬೇಸಾಯ ಎಲ್ಲ ವಾತಾವರಣಗಳಲ್ಲೂ ಬೆಳೆಯಬಹುದಾದ ಆರ್ಥಿಕ ಬೆಳೆಯಾಗಿದ್ದು, ರೈತರ ಆರ್ಥಿಕ ಶಕ್ತಿ ವೃದ್ಧಿಯಾಗಿದೆ’ ಎಂದರು.</p>.<p>‘ತಾಲ್ಲೂಕಿನಲ್ಲಿ 4,500 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ತೋಟಗಾರಿಕೆ ಇದ್ದು, ವಾರ್ಷಿಕ 16,479 ಮೆಟ್ರಿಕ್ ಟನ್ ಉತ್ಪಾದನೆಯಾಗಿ ₹ 5.93 ಕೋಟಿ ಆರ್ಥಿಕ ವಹಿವಾಟು ನಡೆದಿದೆ. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 3.47 ಟನ್ ತೆಂಗು ಉತ್ಪಾದನೆಯಾಗುತ್ತಿದೆ’ ಎಂದರು.</p>.<p>‘ತೆಂಗು ಬೇಸಾಯಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಹೊಸದಾಗಿ ತೋಟ ನಿರ್ಮಿಸುವ ರೈತರಿಗೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಪ್ರತಿ ತೆಂಗಿನ ಸಸಿ ನಿರ್ವಹಣೆಗೆ ವಾರ್ಷಿಕ ₹200 ಸಹಾಯ ಧನ ನೀಡಲಾಗುತ್ತದೆ. ನರೇಗಾ ಯೋಜನೆಯಲ್ಲಿ 60:40 ಅನುಪಾತದಲ್ಲಿ ಪ್ರತಿ ಹೆಕ್ಟೇರ್ಗೆ ₹ 40 ಸಾವಿರ ಸಹಾಯ ಧನ ದೊರಕಲಿದೆ’ ಎಂದರು.</p>.<p>ಕೃಷಿ ಕೀಟಶಾಸ್ತ್ರ ವಿಭಾಗದ ಡಾ.ಮೌಲ್ಯ ಎಂ.ಆರ್. ಮಾತನಾಡಿ, ‘ತೆಂಗಿನ ಬೆಳೆ ಕಪ್ಪುತಲೆ ಹುಳು ರೋಗ ಬಾಧೆಗೆ ಸಿಲುಕಿದ್ದು, ಎಲೆಯ ಹಸಿರನ್ನು ತಿಂದು ಗರಿ ಒಣಗಿದಂತೆ ಕಾಣುವುದು. ಈ ರೋಗಕ್ಕೆ ಒಳಗಾದ ಗರಿಯನ್ನು ಕತ್ತರಿಸಿ ಬೆಂಕಿಗೆ ಹಾಕುವುದರಿಂದ ನಿಯಂತ್ರಣ ಸಾಧ್ಯ’ ಎಂದರು.</p>.<p>‘ಕಪ್ಪುತಲೆ ಹುಳು ಮರಿ ಹಂತದಲ್ಲಿದ್ದಾಗ, ಪ್ರತಿ ಮರಕ್ಕೆ 20 ಗೋನಿಯೋಜಸ್ ನೆಫಾಂಟಿಡಿಸ್ ಪರತಂತ್ರ ಜೀವಿಗಳನ್ನು 15 ದಿನಕ್ಕೆ ಒಮ್ಮೆ 4 ಬಾರಿ ಬಿಡಬೇಕು. ಇಲಾಖೆ ಶಿಫಾರಸು ಮಾಡಿದ ಔಷಧಿಯನ್ನು ಸಿಂಪಡಿಸಬಹುದು. ಬೇರಿನ ಮೂಲಕ ಶೇ 5 ರಷ್ಟು ಅಝಾಡಿರೆಕ್ಟಿನ್ ಮಾನೋಕ್ರೊಟೋಪಾಸ್ 36 ಎಸ್.ಸಿ. 10 ಮಿ.ಲೀ. ಸಮಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಪ್ರತಿ ಮರದ ಬೇರಿಗೆ ವಾರ್ಷಿಕ ಮೂರು ಬಾರಿ ಜನವರಿ, ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕಟ್ಟುವುದರಿಂದ ಹುಳು ಬಾಧೆ ನಿಯಂತ್ರಿಸಬಹುದು’ ಎಂದರು.</p>.<p>ನಾಗನಹಳ್ಳಿ ತೋಟಗಾರಿಕೆ ವಿಭಾಗದ ವಿಜ್ಞಾನಿಗಳಾದ ಡಾ.ಶಿವಕುಮಾರ್ , ಧರಣೇಶ, ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಬಿಳಿಕೆರೆ ತೋಟಗಾರಿಕೆ ಸಹಾಯಕ ನಿರ್ದೇಶಕಿ ಚೈತ್ರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ‘ತೆಂಗು ಬೆಳೆಗಾರರು ಗಣನೀಯವಾಗಿ ಹೆಚ್ಚಾಗುತ್ತಿದ್ದು, ತೋಟಗಾರಿಕೆ ಬೆಳೆಯತ್ತ ಆಸಕ್ತಿ ಮೂಡಿರುವುದು ಶ್ಲಾಘನೀಯ’ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜ್ ಹೇಳಿದರು.</p>.<p>ತಾಲ್ಲೂಕಿನ ಹನುಮಂತಪುರದಪ್ರಗತಿಪರ ರೈತ ಮಹಿಳೆ ವಸಂತಮ್ಮ ಅವರ ತೆಂಗಿನ ತೋಟದಲ್ಲಿ ಬುಧವಾರ ವಿಶ್ವ ತೆಂಗು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ತೆಂಗು ಬೇಸಾಯ ಎಲ್ಲ ವಾತಾವರಣಗಳಲ್ಲೂ ಬೆಳೆಯಬಹುದಾದ ಆರ್ಥಿಕ ಬೆಳೆಯಾಗಿದ್ದು, ರೈತರ ಆರ್ಥಿಕ ಶಕ್ತಿ ವೃದ್ಧಿಯಾಗಿದೆ’ ಎಂದರು.</p>.<p>‘ತಾಲ್ಲೂಕಿನಲ್ಲಿ 4,500 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ತೋಟಗಾರಿಕೆ ಇದ್ದು, ವಾರ್ಷಿಕ 16,479 ಮೆಟ್ರಿಕ್ ಟನ್ ಉತ್ಪಾದನೆಯಾಗಿ ₹ 5.93 ಕೋಟಿ ಆರ್ಥಿಕ ವಹಿವಾಟು ನಡೆದಿದೆ. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 3.47 ಟನ್ ತೆಂಗು ಉತ್ಪಾದನೆಯಾಗುತ್ತಿದೆ’ ಎಂದರು.</p>.<p>‘ತೆಂಗು ಬೇಸಾಯಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಹೊಸದಾಗಿ ತೋಟ ನಿರ್ಮಿಸುವ ರೈತರಿಗೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಪ್ರತಿ ತೆಂಗಿನ ಸಸಿ ನಿರ್ವಹಣೆಗೆ ವಾರ್ಷಿಕ ₹200 ಸಹಾಯ ಧನ ನೀಡಲಾಗುತ್ತದೆ. ನರೇಗಾ ಯೋಜನೆಯಲ್ಲಿ 60:40 ಅನುಪಾತದಲ್ಲಿ ಪ್ರತಿ ಹೆಕ್ಟೇರ್ಗೆ ₹ 40 ಸಾವಿರ ಸಹಾಯ ಧನ ದೊರಕಲಿದೆ’ ಎಂದರು.</p>.<p>ಕೃಷಿ ಕೀಟಶಾಸ್ತ್ರ ವಿಭಾಗದ ಡಾ.ಮೌಲ್ಯ ಎಂ.ಆರ್. ಮಾತನಾಡಿ, ‘ತೆಂಗಿನ ಬೆಳೆ ಕಪ್ಪುತಲೆ ಹುಳು ರೋಗ ಬಾಧೆಗೆ ಸಿಲುಕಿದ್ದು, ಎಲೆಯ ಹಸಿರನ್ನು ತಿಂದು ಗರಿ ಒಣಗಿದಂತೆ ಕಾಣುವುದು. ಈ ರೋಗಕ್ಕೆ ಒಳಗಾದ ಗರಿಯನ್ನು ಕತ್ತರಿಸಿ ಬೆಂಕಿಗೆ ಹಾಕುವುದರಿಂದ ನಿಯಂತ್ರಣ ಸಾಧ್ಯ’ ಎಂದರು.</p>.<p>‘ಕಪ್ಪುತಲೆ ಹುಳು ಮರಿ ಹಂತದಲ್ಲಿದ್ದಾಗ, ಪ್ರತಿ ಮರಕ್ಕೆ 20 ಗೋನಿಯೋಜಸ್ ನೆಫಾಂಟಿಡಿಸ್ ಪರತಂತ್ರ ಜೀವಿಗಳನ್ನು 15 ದಿನಕ್ಕೆ ಒಮ್ಮೆ 4 ಬಾರಿ ಬಿಡಬೇಕು. ಇಲಾಖೆ ಶಿಫಾರಸು ಮಾಡಿದ ಔಷಧಿಯನ್ನು ಸಿಂಪಡಿಸಬಹುದು. ಬೇರಿನ ಮೂಲಕ ಶೇ 5 ರಷ್ಟು ಅಝಾಡಿರೆಕ್ಟಿನ್ ಮಾನೋಕ್ರೊಟೋಪಾಸ್ 36 ಎಸ್.ಸಿ. 10 ಮಿ.ಲೀ. ಸಮಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಪ್ರತಿ ಮರದ ಬೇರಿಗೆ ವಾರ್ಷಿಕ ಮೂರು ಬಾರಿ ಜನವರಿ, ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕಟ್ಟುವುದರಿಂದ ಹುಳು ಬಾಧೆ ನಿಯಂತ್ರಿಸಬಹುದು’ ಎಂದರು.</p>.<p>ನಾಗನಹಳ್ಳಿ ತೋಟಗಾರಿಕೆ ವಿಭಾಗದ ವಿಜ್ಞಾನಿಗಳಾದ ಡಾ.ಶಿವಕುಮಾರ್ , ಧರಣೇಶ, ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಬಿಳಿಕೆರೆ ತೋಟಗಾರಿಕೆ ಸಹಾಯಕ ನಿರ್ದೇಶಕಿ ಚೈತ್ರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>