ಹುಲ್ಲಹಳ್ಳಿಯ ಸಮೀಪ ಕಬಿನಿ ಜಲಾಶಯದಿಂದ ಪಂಪ್ ಆಗುವ ನೀರನ್ನು ಬಿದರಗೂಡಿನ ಪಂಪ್ ಹೌಸ್ನ ಘಟಕದಲ್ಲಿ ಶುದ್ಧೀಕರಣ ಮಾಡಲಾಗುತ್ತದೆ. ತಳೂರು ಸರ್ಕಲ್ ಮತ್ತು ಉದ್ಬೂರು ಗೇಟ್ ಬಳಿ ಬೃಹತ್ ಜಲಸಂಗ್ರಹಗಾರ ನಿರ್ಮಿಸಿ ಅಲ್ಲಿಂದ, ಮೈಸೂರು ನಗರದ ಶ್ರೀರಾಂಪುರ, ದಟ್ಟಗಳ್ಳಿ, ರಾಜರಾಜೇಶ್ವರಿ ನಗರ, ರಾಮಕೃಷ್ಣನಗರ, ಜೆ.ಪಿ.ನಗರ, ಗುರೂರು ಸೇರಿದಂತೆ ಜಯಪುರ ಹೋಬಳಿ ವ್ಯಾಪ್ತಿಯ ಉದ್ಬೂರು, ಧನಗಳ್ಳಿ, ಸಿಂದುವಳ್ಳಿ, ಹಾರೋಹಳ್ಳಿ, ಜಯಪುರ, ಗೋಪಾಲಪುರ ಗ್ರಾಮ ಪಂಚಾಯಿತಿಯ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.