ಮೈಸೂರು: ನಗರದ ಡಾನ್ಸ್ ಫಾರ್ ಯು ಸಂಸ್ಥೆಯ 10ನೇ ವಾರ್ಷಿಕೋತ್ಸವವು ಶುಕ್ರವಾರ ನಡೆಯಿತು.
ವಿದುಷಿ ಡಾ.ಶೀಲಾ ಶ್ರೀಧರ್ ಉದ್ಘಾಟಿಸಿ ಮಾತನಾಡಿ, ‘ಒತ್ತಡ ನಿಯಂತ್ರಿಸಲು ಮನರಂಜನಾ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ನಿಯಮಿತವಾಗಿ ನೃತ್ಯ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ, ಸೆಮಿ ಕ್ಲಾಸಿಕಲ್ ನೃತ್ಯಗಳನ್ನು ಪ್ರದರ್ಶಿಸಿದರು. ಫ್ಯಾಷನ್ ಷೋ ಗಮನಸೆಳೆಯಿತು. ಟ್ರಾಫಿಕ್ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್, ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಎಲ್.ಅರುಣ್ ಅವರನ್ನು ಸನ್ಮಾನಿಸಲಾಯಿತು.
ಚಲನಚಿತ್ರ ನಿರ್ದೇಶಕ ಮಹೇಶ್ ಸುಖಧಾರೆ, ನಟ ಧ್ರುವನ್, ಡಾ.ವೈ.ಡಿ.ರಾಜಣ್ಣ, ಮಹಾನಗರಪಾಲಿಕೆ ಸದಸ್ಯೆ ಲಕ್ಷ್ಮಿಕಿರಣ್ ಗೌಡ, ನೃತ್ಯ ಸಂಯೋಜಕರಾದ ಚಾಮರಾಜ್, ಅರ್ಜುನ್ ಇದ್ದರು.