ಇದಕ್ಕೆ ಮೊದಲು ಸಾಮಾಜಿಕ ಜಾಲತಾಣದಲ್ಲಿ ಆಹ್ವಾನದ ಕರಡು ಪ್ರತಿಯ ಚಿತ್ರಗಳು ಹರಿದಾಡಿ ಸಾಕಷ್ಟು ಚರ್ಚೆಗೆ, ಟೀಕೆಗೆ ಕಾರಣವಾಗಿತ್ತು. ‘ಜಿ.ಕೆ.ರವೀಂದ್ರಕುಮಾರ್ ಕನ್ನಡದ ಅತ್ಯುತ್ತಮ ಕವಿ. ಅವರು ಈಗಿಲ್ಲ. ಕಣ್ಮರೆ ಅದವರನ್ನು ಎಲ್ಲರೂ ಮರೆಯುತ್ತಾರೆ. ಆದರೆ, ಸರ್ಕಾರ ಮರೆಯುವುದಿಲ್ಲ! ದತ್ತಿ ಸಂಸ್ಥೆ ಸದಸ್ಯರನ್ನೂ ಮಾಡುತ್ತದೆ. ಕವಿಗೋಷ್ಠಿಗೂ ಕರೆಯುತ್ತದೆ!’ ಎಂದು ಅಣಕವಾಡಿದ್ದಾರೆ. ನಾಗರಾಜರಾವ್ ಕಲ್ಕಟ್ಟೆ ಅವರ ಹೆಸರನ್ನು ‘ಕಲ್ಕತ್ತೆ’ ಎಂದು ಪ್ರಕಟಿಸಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ.