ಸೌಹಾರ್ದ ಕರ್ನಾಟಕ ಸಂಘಟನೆಯು ಹುತಾತ್ಮ ದಿನದ ಅಂಗವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಇವತ್ತು ಸೌಹಾರ್ದತೆ ಇರಬೇಕೆಂದು ನಾವು ಕೇಳುತ್ತಿರುವುದು ದಯನೀಯ ಸ್ಥಿತಿ. ಅಂದರೆ ಇದನ್ನು ಈಗಾಗಲೇ ಯಾರೋ ಹಾಳು ಮಾಡಿದ್ದಾರೆ ಎಂದರ್ಥ. ನಾಡಿನ ಸಹಬಾಳ್ವೆ, ಸಮಾಜಕ್ಕೆ ಯಾರೋ ವಿಷ ಹಾಕಿದ್ದಾರೆ. ನ್ಯಾಯದ ತಕ್ಕಡಿ ಅಲುಗಾಡುತ್ತಿದೆ. ಸಮಸ್ಯೆಗಳ ಜೊತೆ ಮುಖಾಮುಖಿಯಾಗಲು ಸಾಮರ್ಥ್ಯ ಇಲ್ಲದಿರುವವರಿಂದ ಈ ಸಮಸ್ಯೆ ಉಂಟಾಗಿದೆ’ ಎಂದು ವಿವರಿಸಿದರು.