ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಕೊರತೆ ಇದೆ. ರಸಗೊಬ್ಬರದ ಹಳೆಯ ದಾಸ್ತಾನಿಗೆ ಹೊಸ ದರ ಪಡೆಯಲಾಗುತ್ತಿದೆ. ರಾಣೆಬೆನ್ನೂರು, ಹರಿಹರ ಭಾಗಗಳಲ್ಲಿ ಕಳಪೆ ಬಿತ್ತನೆ ಬೀಜಗಳ ಹಾವಳಿ ಹೆಚ್ಚಾಗಿದೆ. ಕೃಷಿ ಸಚಿವರ ತವರು ಹಾವೇರಿ ಜಿಲ್ಲೆಯಲ್ಲೇ ಹೆಚ್ಚಿನ ಸಮಸ್ಯೆ ಇದೆ. ಕೃಷಿ ಸಚಿವರು ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಹರಿಹಾಯ್ದರು.