<p><strong>ಮೈಸೂರು: </strong>ಶಾಲೆ ತೆರೆಯುವ ಸಂಬಂಧ ಆತುರ ಬೇಡ. ಕೋವಿಡ್ನಿಂದಾಗಿ ಪರಿಸ್ಥಿತಿ ದಿನೇದಿನೇ ಉಲ್ಬಣಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬುಧವಾರ ಇಲ್ಲಿ ಎಚ್ಚರಿಕೆ ನೀಡಿದರು.</p>.<p>ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಒಟ್ಟಿಗೆ ಸೇರಿ ಚರ್ಚಿಸಿ ಶಾಲೆ ತೆರೆಯುವ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆರೋಗ್ಯ ಇಲಾಖೆ ಒಪ್ಪಿಗೆ ಪಡೆಯಲೇಬೇಕು. ಶಾಲೆ ತೆರೆಯಲು ಇದು ಸರಿಯಾದ ಸಮಯವಲ್ಲ; ಆದರೆ, ಕಾಲೇಜುಗಳನ್ನು ತೆರೆಯಲು ತೊಂದರೆ ಇಲ್ಲ ಎಂದರು.</p>.<p>ಅಧಿಕಾರಿಗಳಿಗಿಂತ ಮೊದಲು ಪೋಷಕರ ಮಾತಿಗೆ ಕಿವಿಗೊಡಬೇಕು. ಶಿಕ್ಷಕರು ಹಾಗೂ ಮಕ್ಕಳ ದನಿ ಆಲಿಸಬೇಕು ಎಂದುಸಲಹೆ ನೀಡಿದರು.</p>.<p class="Subhead"><strong>ತನ್ವೀರ್ ಟೀಕೆ: </strong>ಈಗಾಗಲೇ ಬಾರ್, ಥಿಯೇಟರ್, ದೇವಸ್ಥಾನ ಎಲ್ಲದಕ್ಕೂ ಕೇಂದ್ರ ಸರ್ಕಾರದವರು ಮಾರ್ಗಸೂಚಿ ನೀಡಿದ್ದಾರೆ. ಆದರೆ, ಶಾಲೆಗಳಿಗೆ ಮಾತ್ರ ರಾಜ್ಯ ಸರ್ಕಾರಗಳೇ ಮಾರ್ಗಸೂಚಿ ಸಿದ್ಧ ಪಡಿಸಿಕೊಳ್ಳಲಿ ಎಂದರೆ ಹೇಗೆ ಎಂದು ಶಾಸಕ ತನ್ವೀರ್ ಸೇಠ್ ಪ್ರಶ್ನಿಸಿದ್ದಾರೆ.</p>.<p>‘ಶೈಕ್ಷಣಿಕ ವ್ಯವಸ್ಥೆ ಪುನರಾರಂಭ ಆಗಬೇಕೆಂಬುದು ಸರಿ. ಆದರೆ, ಮಕ್ಕಳ ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯ. ಅಂತರ ಕಾಪಾಡುವಷ್ಟು ವಿಶಾಲವಾದ ಕೊಠಡಿಗಳು ಎಲ್ಲಿವೆ? ಶಾಲೆ ಆರಂಭಕ್ಕೂ ಮುನ್ನವೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿಗೆ ನಿಂತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p class="Subhead"><strong>ತಜ್ಞರೊಂದಿಗೆ ಚರ್ಚೆ: </strong>ಶಾಲೆ ಆರಂಭ ಸಂಬಂಧ ವೈದ್ಯರು, ಮಕ್ಕಳ ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ. ಪರಿಣತರ ಸಮಿತಿಯೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಈ ಎಲ್ಲಾ ಅಂಶಗಳನ್ನು ಕ್ರೋಡೀಕರಿಸಿ ಒಂದು ವಾರದಲ್ಲಿ ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಶಾಲೆ ತೆರೆಯುವ ಸಂಬಂಧ ಆತುರ ಬೇಡ. ಕೋವಿಡ್ನಿಂದಾಗಿ ಪರಿಸ್ಥಿತಿ ದಿನೇದಿನೇ ಉಲ್ಬಣಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬುಧವಾರ ಇಲ್ಲಿ ಎಚ್ಚರಿಕೆ ನೀಡಿದರು.</p>.<p>ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಒಟ್ಟಿಗೆ ಸೇರಿ ಚರ್ಚಿಸಿ ಶಾಲೆ ತೆರೆಯುವ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆರೋಗ್ಯ ಇಲಾಖೆ ಒಪ್ಪಿಗೆ ಪಡೆಯಲೇಬೇಕು. ಶಾಲೆ ತೆರೆಯಲು ಇದು ಸರಿಯಾದ ಸಮಯವಲ್ಲ; ಆದರೆ, ಕಾಲೇಜುಗಳನ್ನು ತೆರೆಯಲು ತೊಂದರೆ ಇಲ್ಲ ಎಂದರು.</p>.<p>ಅಧಿಕಾರಿಗಳಿಗಿಂತ ಮೊದಲು ಪೋಷಕರ ಮಾತಿಗೆ ಕಿವಿಗೊಡಬೇಕು. ಶಿಕ್ಷಕರು ಹಾಗೂ ಮಕ್ಕಳ ದನಿ ಆಲಿಸಬೇಕು ಎಂದುಸಲಹೆ ನೀಡಿದರು.</p>.<p class="Subhead"><strong>ತನ್ವೀರ್ ಟೀಕೆ: </strong>ಈಗಾಗಲೇ ಬಾರ್, ಥಿಯೇಟರ್, ದೇವಸ್ಥಾನ ಎಲ್ಲದಕ್ಕೂ ಕೇಂದ್ರ ಸರ್ಕಾರದವರು ಮಾರ್ಗಸೂಚಿ ನೀಡಿದ್ದಾರೆ. ಆದರೆ, ಶಾಲೆಗಳಿಗೆ ಮಾತ್ರ ರಾಜ್ಯ ಸರ್ಕಾರಗಳೇ ಮಾರ್ಗಸೂಚಿ ಸಿದ್ಧ ಪಡಿಸಿಕೊಳ್ಳಲಿ ಎಂದರೆ ಹೇಗೆ ಎಂದು ಶಾಸಕ ತನ್ವೀರ್ ಸೇಠ್ ಪ್ರಶ್ನಿಸಿದ್ದಾರೆ.</p>.<p>‘ಶೈಕ್ಷಣಿಕ ವ್ಯವಸ್ಥೆ ಪುನರಾರಂಭ ಆಗಬೇಕೆಂಬುದು ಸರಿ. ಆದರೆ, ಮಕ್ಕಳ ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯ. ಅಂತರ ಕಾಪಾಡುವಷ್ಟು ವಿಶಾಲವಾದ ಕೊಠಡಿಗಳು ಎಲ್ಲಿವೆ? ಶಾಲೆ ಆರಂಭಕ್ಕೂ ಮುನ್ನವೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿಗೆ ನಿಂತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p class="Subhead"><strong>ತಜ್ಞರೊಂದಿಗೆ ಚರ್ಚೆ: </strong>ಶಾಲೆ ಆರಂಭ ಸಂಬಂಧ ವೈದ್ಯರು, ಮಕ್ಕಳ ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ. ಪರಿಣತರ ಸಮಿತಿಯೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಈ ಎಲ್ಲಾ ಅಂಶಗಳನ್ನು ಕ್ರೋಡೀಕರಿಸಿ ಒಂದು ವಾರದಲ್ಲಿ ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>