<p><strong>ಮೈಸೂರು:</strong> ‘ಹೆಣ್ಣು ಮಕ್ಕಳು ವಿದ್ಯಾವಂತರಾಗುವುದು ದೇಶದ ಪ್ರಗತಿಗೆ ಸಹಕಾರಿಯಾಗಲಿದೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.</p>.<p>ತಾಲ್ಲೂಕಿನ ದೊಡ್ಡ ಮಾರಗೌಡನಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಅದ್ದೂರಿತನ, ದುಂದುವೆಚ್ಚ ಬಿಟ್ಟ ಸರಳ ವಿವಾಹವಾಗುವಂತೆ ಸಂಕಲ್ಪ ಮಾಡಬೇಕು’ ಎಂದರು.</p>.<p>‘ಹೆಣ್ಣು ಮಕ್ಕಳಿಂದ ದೇಶ ಪ್ರಗತಿಯಾಗಲಿದೆ. ಕುಟುಂಬವನ್ನು ಹೇಗೆ ಮುನ್ನಡೆಸಬೇಕು, ಎಷ್ಟು ಆದಾಯ ಬರಲಿದೆ, ಎಷ್ಟು ಖರ್ಚು ಮಾಡಬೇಕು ಎಂಬುದನ್ನು ಯೋಚಿಸಿ ಯೋಜಿಸುವ ಜಾಣ್ಮೆ ಮಹಿಳೆಗಿದೆ. ಆದರೆ, ಪುರುಷರು ಬೇಕಾಬಿಟ್ಟಿಯಾಗಿ ಖರ್ಚು ಮಾಡಿ ಸಾಲ ಮಾಡುವಂತಾಗುತ್ತದೆ’ ಎಂದು ಹೇಳಿದರು.</p>.<p>‘ಸರಳ ಬದುಕು ಸಾಗಿಸಬೇಕು. ನಾವು ಹಣ ಇಲ್ಲದಿದ್ದರೂ ದುಂದುವೆಚ್ಚ ಮಾಡಲು ಬಯಸುತ್ತೇವೆ. ಹಣ ಬೇಕೆಂದಾಗ ಸಾಲ ಮಾಡುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಭ್ರಷ್ಟಾಚಾರ ತಡೆಯಬಹುದು’ ಎಂದರು.</p>.<p>‘ಚಾಮುಂಡೇಶ್ವರಿ ದೊಡ್ಡ ಕ್ಷೇತ್ರವಾಗಿದೆ. ಮೈಸೂರಿನ ನಾಲ್ಕು ದಿಕ್ಕುಗಳಿಗೂ ಚಾಚಿಕೊಂಡಿದೆ. ಡಿಸೆಂಬರ್ ವೇಳೆಗೆ ಹಳೆಯ ಉಂಡುವಾಡಿ ಯೋಜನೆ ಮುಗಿಸಿ ಪ್ರತಿಯೊಂದು ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>ಪಿಡಿಒ ರುಕ್ಮಾಂಗದ ಹಾಗೂ ಶಾಲೆಯ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಹೆಣ್ಣು ಮಕ್ಕಳು ವಿದ್ಯಾವಂತರಾಗುವುದು ದೇಶದ ಪ್ರಗತಿಗೆ ಸಹಕಾರಿಯಾಗಲಿದೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.</p>.<p>ತಾಲ್ಲೂಕಿನ ದೊಡ್ಡ ಮಾರಗೌಡನಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಅದ್ದೂರಿತನ, ದುಂದುವೆಚ್ಚ ಬಿಟ್ಟ ಸರಳ ವಿವಾಹವಾಗುವಂತೆ ಸಂಕಲ್ಪ ಮಾಡಬೇಕು’ ಎಂದರು.</p>.<p>‘ಹೆಣ್ಣು ಮಕ್ಕಳಿಂದ ದೇಶ ಪ್ರಗತಿಯಾಗಲಿದೆ. ಕುಟುಂಬವನ್ನು ಹೇಗೆ ಮುನ್ನಡೆಸಬೇಕು, ಎಷ್ಟು ಆದಾಯ ಬರಲಿದೆ, ಎಷ್ಟು ಖರ್ಚು ಮಾಡಬೇಕು ಎಂಬುದನ್ನು ಯೋಚಿಸಿ ಯೋಜಿಸುವ ಜಾಣ್ಮೆ ಮಹಿಳೆಗಿದೆ. ಆದರೆ, ಪುರುಷರು ಬೇಕಾಬಿಟ್ಟಿಯಾಗಿ ಖರ್ಚು ಮಾಡಿ ಸಾಲ ಮಾಡುವಂತಾಗುತ್ತದೆ’ ಎಂದು ಹೇಳಿದರು.</p>.<p>‘ಸರಳ ಬದುಕು ಸಾಗಿಸಬೇಕು. ನಾವು ಹಣ ಇಲ್ಲದಿದ್ದರೂ ದುಂದುವೆಚ್ಚ ಮಾಡಲು ಬಯಸುತ್ತೇವೆ. ಹಣ ಬೇಕೆಂದಾಗ ಸಾಲ ಮಾಡುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಭ್ರಷ್ಟಾಚಾರ ತಡೆಯಬಹುದು’ ಎಂದರು.</p>.<p>‘ಚಾಮುಂಡೇಶ್ವರಿ ದೊಡ್ಡ ಕ್ಷೇತ್ರವಾಗಿದೆ. ಮೈಸೂರಿನ ನಾಲ್ಕು ದಿಕ್ಕುಗಳಿಗೂ ಚಾಚಿಕೊಂಡಿದೆ. ಡಿಸೆಂಬರ್ ವೇಳೆಗೆ ಹಳೆಯ ಉಂಡುವಾಡಿ ಯೋಜನೆ ಮುಗಿಸಿ ಪ್ರತಿಯೊಂದು ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>ಪಿಡಿಒ ರುಕ್ಮಾಂಗದ ಹಾಗೂ ಶಾಲೆಯ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>