ಜನಟಿಕ್ಸ್ ಇಂಡಿಯಾ ಲಿಮಿಟೆಡ್ನ ಉಪ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಮಾತನಾಡಿ, ‘ಮೂರು ದಶಕದ ಹಿಂದೆ ಆಟೊಮೇಶನ್ ತಂತ್ರಜ್ಞಾನ ಇರಲಿಲ್ಲ. ಕಳೆದ 15 ವರ್ಷಗಳಿಂದ ಈ ಕ್ಷೇತ್ರ ಬೆಳವಣಿಗೆ ಸಾಧಿಸಿದೆ. ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ಇನ್ನೂ ಪಾರಮ್ಯ ಸಾಧಿಸಿಲ್ಲ. ಹೂಡಿಕೆ ಹಾಗೂ ಸಂಶೋಧನೆಗಳ ಅಭಾವ ಅದಕ್ಕೆ ಕಾರಣ’ ಎಂದು ವಿಶ್ಲೇಷಿಸಿದರು.