<p><strong>ಹುಣಸೂರು</strong>: ತಾಲ್ಲೂಕಿನ ಗಾವಡಗೆರೆ ಗ್ರಾಮದ ಗಿರವಿ ಅಂಗಡಿಯಲ್ಲಿ ನಕಲಿ ಚಿನ್ನದ ಉಂಗುರ ಗಿರಿವಿ ಇಟ್ಟು ₹ 5 ಲಕ್ಷ ಸಾಲ ಪಡೆದ ಆರೋಪಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.</p>.<p>ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಬಂಧಿತ ಆರೋಪಿ. ಈತ ಗ್ರಾಮದ ಕಾವೇರಿ ಜ್ಯುವೆಲರಿ ಅಂಗಡಿಯಲ್ಲಿ ವಿವಿಧ ಹೆಸರಿನಲ್ಲಿ 11 ಚಿನ್ನದ ಉಂಗುರಗಳನ್ನು ಗಿರವಿ ಇಟ್ಟು ₹5 ಲಕ್ಷ ಸಾಲ ಪಡೆದಿದ್ದ, ಉಂಗುರಗಳನ್ನು ಪರಿಶೀಲಿಸಿ ನಕಲಿ ಚಿನ್ನ ಎಂದು ಖಾತ್ರಿಗೊಂಡ ಬಳಿಕ ಗಿರವಿ ಅಂಗಡಿ ಮಾಲಿಕ ಜೇಸಿಂಗ್ ದೂರು ದಾಖಲಿಸಿದ್ದರು.</p>.<p>ಜುಲೈ 6ರಂದು ಆರೋಪಿಯು ಸ್ನೇಹಿತರೊಂದಿಗೆ ಉಂಗುರ ಗಿರವಿ ಇಡಲು ಅಂಗಡಿಗೆ ಬಂದ ಸಮಯದಲ್ಲಿ ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಈತನ ಇಬ್ಬರು ಸ್ನೇಹಿತರೂ ಭಾಗಿಯಾಗಿದ್ದು, ಅವರು ಕಾರಿನಲ್ಲಿ ನಾಪತ್ತೆಯಾಗಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮುನಿಯಪ್ಪ, ಪಿಎಸ್ಐ ರಾಮು, ಆಂತೋಣಿ ಕ್ರೂಸ್, ವಿಜಯರಾಘು, ಇಮ್ರಾನ್ ಶರೀಫ್, ಮಹದೇವ್ ರಮೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ತಾಲ್ಲೂಕಿನ ಗಾವಡಗೆರೆ ಗ್ರಾಮದ ಗಿರವಿ ಅಂಗಡಿಯಲ್ಲಿ ನಕಲಿ ಚಿನ್ನದ ಉಂಗುರ ಗಿರಿವಿ ಇಟ್ಟು ₹ 5 ಲಕ್ಷ ಸಾಲ ಪಡೆದ ಆರೋಪಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.</p>.<p>ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಬಂಧಿತ ಆರೋಪಿ. ಈತ ಗ್ರಾಮದ ಕಾವೇರಿ ಜ್ಯುವೆಲರಿ ಅಂಗಡಿಯಲ್ಲಿ ವಿವಿಧ ಹೆಸರಿನಲ್ಲಿ 11 ಚಿನ್ನದ ಉಂಗುರಗಳನ್ನು ಗಿರವಿ ಇಟ್ಟು ₹5 ಲಕ್ಷ ಸಾಲ ಪಡೆದಿದ್ದ, ಉಂಗುರಗಳನ್ನು ಪರಿಶೀಲಿಸಿ ನಕಲಿ ಚಿನ್ನ ಎಂದು ಖಾತ್ರಿಗೊಂಡ ಬಳಿಕ ಗಿರವಿ ಅಂಗಡಿ ಮಾಲಿಕ ಜೇಸಿಂಗ್ ದೂರು ದಾಖಲಿಸಿದ್ದರು.</p>.<p>ಜುಲೈ 6ರಂದು ಆರೋಪಿಯು ಸ್ನೇಹಿತರೊಂದಿಗೆ ಉಂಗುರ ಗಿರವಿ ಇಡಲು ಅಂಗಡಿಗೆ ಬಂದ ಸಮಯದಲ್ಲಿ ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಈತನ ಇಬ್ಬರು ಸ್ನೇಹಿತರೂ ಭಾಗಿಯಾಗಿದ್ದು, ಅವರು ಕಾರಿನಲ್ಲಿ ನಾಪತ್ತೆಯಾಗಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮುನಿಯಪ್ಪ, ಪಿಎಸ್ಐ ರಾಮು, ಆಂತೋಣಿ ಕ್ರೂಸ್, ವಿಜಯರಾಘು, ಇಮ್ರಾನ್ ಶರೀಫ್, ಮಹದೇವ್ ರಮೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>