<p><strong>ನಂಜನಗೂಡು:</strong> ‘ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಬಳಸಿಕೊಂಡು ಕೃಷಿಗೆ ಸಂಬಂಧಪಟ್ಟ ಉದ್ಯಮಗಳಾಗಬೇಕು’ ಎಂದು ಜಿ.ಪಂ. ಸಿಇಒ ಗಾಯಿತ್ರಿ ಸಲಹೆ ನೀಡಿದರು.</p>.<p>ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಗಣೇಶಪುರದಲ್ಲಿ ಪ್ರಗತಿಪರ ರೈತ ಜಯಶಂಕರ ಸ್ಥಾಪಿಸಿರುವ ಎಣ್ಣೆ ಗಾಣದ ಘಟಕಕ್ಕೆ ಈಚೆಗೆ ಭೇಟಿ ನೀಡಿ, ರೈತರನ್ನು ಕುರಿತು ಮಾತನಾಡಿದರು.</p>.<p>‘ಜಯಶಂಕರ ಅವರು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರೀಕರಣ ಯೋಜನೆಯಡಿ ₹ 14.26 ಲಕ್ಷ ಸಹಾಯಧನ ಪಡೆದುಕೊಂಡು ₹ 28.52 ಲಕ್ಷ ವೆಚ್ಚದ ಎಣ್ಣೆ ತೆಗೆಯುವ ಹಾಗೂ ಜೇನು ತುಪ್ಪ ಸಂಸ್ಕರಣಾ ಘಟಕ ಸ್ಥಾಪಿಸುವ ಮೂಲಕ ಹಲವು ಗ್ರಾಮೀಣ ಜನರಿಗೆ ಉದ್ಯೋಗ ನೀಡಿದ್ದಾರೆ. ರೈತರ ಉದ್ಯಮ ಶೀಲತೆ ಮತ್ತು ಪ್ರಗತಿ ಕಂಡು ಸಂತೋಷವಾಗಿದೆ. ಇವರನ್ನು ಆದರ್ಶವಾಗಿ ಇಟ್ಟುಕೊಂಡು ರೈತರು ರೈತೋದ್ಯಮಿಗಳಾಗಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು:</strong> ‘ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಬಳಸಿಕೊಂಡು ಕೃಷಿಗೆ ಸಂಬಂಧಪಟ್ಟ ಉದ್ಯಮಗಳಾಗಬೇಕು’ ಎಂದು ಜಿ.ಪಂ. ಸಿಇಒ ಗಾಯಿತ್ರಿ ಸಲಹೆ ನೀಡಿದರು.</p>.<p>ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಗಣೇಶಪುರದಲ್ಲಿ ಪ್ರಗತಿಪರ ರೈತ ಜಯಶಂಕರ ಸ್ಥಾಪಿಸಿರುವ ಎಣ್ಣೆ ಗಾಣದ ಘಟಕಕ್ಕೆ ಈಚೆಗೆ ಭೇಟಿ ನೀಡಿ, ರೈತರನ್ನು ಕುರಿತು ಮಾತನಾಡಿದರು.</p>.<p>‘ಜಯಶಂಕರ ಅವರು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರೀಕರಣ ಯೋಜನೆಯಡಿ ₹ 14.26 ಲಕ್ಷ ಸಹಾಯಧನ ಪಡೆದುಕೊಂಡು ₹ 28.52 ಲಕ್ಷ ವೆಚ್ಚದ ಎಣ್ಣೆ ತೆಗೆಯುವ ಹಾಗೂ ಜೇನು ತುಪ್ಪ ಸಂಸ್ಕರಣಾ ಘಟಕ ಸ್ಥಾಪಿಸುವ ಮೂಲಕ ಹಲವು ಗ್ರಾಮೀಣ ಜನರಿಗೆ ಉದ್ಯೋಗ ನೀಡಿದ್ದಾರೆ. ರೈತರ ಉದ್ಯಮ ಶೀಲತೆ ಮತ್ತು ಪ್ರಗತಿ ಕಂಡು ಸಂತೋಷವಾಗಿದೆ. ಇವರನ್ನು ಆದರ್ಶವಾಗಿ ಇಟ್ಟುಕೊಂಡು ರೈತರು ರೈತೋದ್ಯಮಿಗಳಾಗಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>