‘ಯುಗಾದಿಯ ಮಾರನೇ ದಿನ ಗುಡ್ಡೆ ಮಾಂಸಕ್ಕಾಗಿ ಮಹಾದೇವ ಅವರು ರಾಜು ಅವರಿಗೆ ಹಣ ನೀಡಿದ್ದರು. ಆದರೆ ಬುಧವಾರ ಬೆಳಿಗ್ಗೆ ರಾಜು ಮಾಂಸ ನೀಡದಿದ್ದಾಗ ಎರಡೂ ಕುಟುಂಬಗಳ ನಡುವೆ ಜಗಳವಾಗಿದ್ದು, ಪರಸ್ಪರ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಮಹಾದೇವ ಅವರ ಮಾವ ಕೃಷ್ಣಪ್ಪ ಅವರಿಗೆ ಗಂಭೀರ ಗಾಯವಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.