<p><strong>ಸಾಲಿಗ್ರಾಮ: </strong>ತಾಲ್ಲೂಕಿನ ಗಡಿಭಾಗದ ಮುಂಜನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಗುರುವಾರ ತಡರಾತ್ರಿ ಮನೆ ಬಳಕೆಯ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಉಂಟಾಗಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.</p>.<p>ಮುಂಜನಹಳ್ಳಿ ಗ್ರಾಮದ ಈರಣ್ಣ ನಾಯಕ ಎಂಬವರ ಮನೆ ಹಾನಿಗೊಳಗಾಗಿರುವುದು. ಮೇ 30ರಂದು ತಡರಾತ್ರಿ ಎಚ್ಚರ ಗೊಂಡ ಪತ್ನಿ ಶಾರದಮ್ಮ ಅವರಿಗೆ ಬೆಂಕಿ ಅವಘಡ ಕಾಣಿಸುತ್ತಿದ್ದಂತೆ ಗಾಬರಿಯಿಂದ ಗಂಡ ಹಾಗೂ ಮಕ್ಕಳನ್ನು ಎಚ್ಚರ ಮಾಡಿ ಮನೆಯಿಂದ ಹೊರ ಬಂದಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ.</p>.<p>‘ಕೆ.ಆರ್.ನಗರದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನವೇ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಅಲ್ಲದೆ ಮನೆಯಲ್ಲಿದ್ದ ₹ 1.45 ಲಕ್ಷ ನಗದು, 60 ಗ್ರಾಂ ಚಿನ್ನ ಹಾಗೂ ಟಿ.ವಿ. ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಪರಿಕರಗಳು, ದವಸ– ಧಾನ್ಯಗಳು, ಬಟ್ಟೆಗಳು ಬೆಂಕಿಗಾಹುತಿಯಾಗಿದೆ’ ಎಂದು ಶಾರದಮ್ಮ ಸಾಲಿಗ್ರಾಮ ಠಾಣೆಗೆ ದೂರು ನೀಡಿದ್ದಾರೆ.</p>.<p>ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಕೃಷ್ಣರಾಜು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಲಿಗ್ರಾಮ: </strong>ತಾಲ್ಲೂಕಿನ ಗಡಿಭಾಗದ ಮುಂಜನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಗುರುವಾರ ತಡರಾತ್ರಿ ಮನೆ ಬಳಕೆಯ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಉಂಟಾಗಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.</p>.<p>ಮುಂಜನಹಳ್ಳಿ ಗ್ರಾಮದ ಈರಣ್ಣ ನಾಯಕ ಎಂಬವರ ಮನೆ ಹಾನಿಗೊಳಗಾಗಿರುವುದು. ಮೇ 30ರಂದು ತಡರಾತ್ರಿ ಎಚ್ಚರ ಗೊಂಡ ಪತ್ನಿ ಶಾರದಮ್ಮ ಅವರಿಗೆ ಬೆಂಕಿ ಅವಘಡ ಕಾಣಿಸುತ್ತಿದ್ದಂತೆ ಗಾಬರಿಯಿಂದ ಗಂಡ ಹಾಗೂ ಮಕ್ಕಳನ್ನು ಎಚ್ಚರ ಮಾಡಿ ಮನೆಯಿಂದ ಹೊರ ಬಂದಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ.</p>.<p>‘ಕೆ.ಆರ್.ನಗರದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನವೇ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಅಲ್ಲದೆ ಮನೆಯಲ್ಲಿದ್ದ ₹ 1.45 ಲಕ್ಷ ನಗದು, 60 ಗ್ರಾಂ ಚಿನ್ನ ಹಾಗೂ ಟಿ.ವಿ. ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಪರಿಕರಗಳು, ದವಸ– ಧಾನ್ಯಗಳು, ಬಟ್ಟೆಗಳು ಬೆಂಕಿಗಾಹುತಿಯಾಗಿದೆ’ ಎಂದು ಶಾರದಮ್ಮ ಸಾಲಿಗ್ರಾಮ ಠಾಣೆಗೆ ದೂರು ನೀಡಿದ್ದಾರೆ.</p>.<p>ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಕೃಷ್ಣರಾಜು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>