<p>ಪ್ರಜಾವಾಣಿ ವಾರ್ತೆ</p>.<p><strong>ಮೈಸೂರು</strong>: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಹುಣಗನಹಳ್ಳಿ ಹುಂಡಿ ಗ್ರಾಮದ ಫಾರಂ ಹೌಸ್ನಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಶ್ಯಾಮಲಾ, ಹರೀಶ್ ನಾಯಕ, ಶಿವಕುಮಾರ್ ಹಾಗೂ ಪುಟ್ಟರಾಜು ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.</p>.<p>ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿ ಮೇರೆಗೆ ಎರಡು ತಿಂಗಳಿಂದ ಕಣ್ಗಾವಲು ಇಟ್ಟಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದರು.</p>.<p>‘ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಪತ್ತೆಗೆ ಬಲೆ ಬೀಸಿದ್ದೇವೆ. ಆರೋಪಿಗಳಿಗೆ ಆತನೇ ಸೂಚನೆಗಳನ್ನು ನೀಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇನ್ನಿತರೆ ಆರೋಪಿಗಳಾದ ಗೋವಿಂದರಾಜು, ಕಾರ್ತಿಕ್ ಅವರ ಬಂಧನಕ್ಕೂ ಕ್ರಮವಹಿಸಿದ್ದೇವೆ’ ಎಂದು ಎಎಸ್ಪಿ ಮಲ್ಲಿಕ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘2019 ರಿಂದ ಕಾರ್ಯನಿರ್ವಹಿಸುತ್ತಿರುವ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಎಸ್.ಕೆ ಆಸ್ಪತ್ರೆಯಲ್ಲಿ 15 ಹಾಸಿಗೆಗಳಿವೆ. ಬಿಎಸ್ಸಿ ನರ್ಸಿಂಗ್ ಸರ್ಟಿಫಿಕೇಟ್ ಪಡೆದಿರುವ ಶ್ಯಾಮಲಾ ಆಸ್ಪತ್ರೆಯ ಆಡಳಿತವನ್ನು ನಿರ್ವಹಿಸುತ್ತಿದ್ದರು. ಈವರೆಗೂ 200 ಹೆಚ್ಚು ಭ್ರೂಣಲಿಂಗ ಪರೀಕ್ಷೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<p>‘ಯಾರಿಗೂ ಅನುಮಾನ ಬಾರದಂತೆ ಭ್ರೂಣಲಿಂಗ ಪರೀಕ್ಷೆ ನಡೆಸುತ್ತಿದ್ದ ನರ್ಸ್ ಶ್ಯಾಮಲಾ, ನೇರವಾಗಿ ಎಸ್.ಕೆ. ಆಸ್ಪತ್ರೆಗೆ ಬಂದರೆ ಒಪ್ಪುತ್ತಿರಲಿಲ್ಲ. ಮಧ್ಯವರ್ತಿಗಳ ಹಾಗೂ ನಂಬಿಕಸ್ಥರ ಮೂಲಕ ಬಂದರೆ ಮಾತ್ರ ಮಾತುಕತೆ ನಡೆಸುತ್ತಿದ್ದರು. ಅದಕ್ಕಾಗಿಯೇ ಹಲವು ಮಧ್ಯವರ್ತಿಗಳಿಗೆ ಹಣ ಕೊಡುತ್ತಿದ್ದರು’ ಎನ್ನಲಾಗಿದೆ.</p>.<p>‘ಹಾರೋಹಳ್ಳಿ- ಹುನಗನಗಳ್ಳಿಯ ಮಧ್ಯೆ ಫಾರಂ ಹೌಸ್ ಜಾಗ ಖರೀದಿಸಿ, ಐಷಾರಾಮಿ ಮನೆ ಕಟ್ಟಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಲಿಂಗ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ಚಟುವಟಿಕೆಯನ್ನು ಫಾರಂ ಹೌಸ್ಗೆ ಸ್ಥಳಾಂತರಿಸಿಕೊಂಡಿದ್ದರು’ ಎಂದು ಮಾಹಿತಿ ಲಭ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಮೈಸೂರು</strong>: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಹುಣಗನಹಳ್ಳಿ ಹುಂಡಿ ಗ್ರಾಮದ ಫಾರಂ ಹೌಸ್ನಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಶ್ಯಾಮಲಾ, ಹರೀಶ್ ನಾಯಕ, ಶಿವಕುಮಾರ್ ಹಾಗೂ ಪುಟ್ಟರಾಜು ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.</p>.<p>ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿ ಮೇರೆಗೆ ಎರಡು ತಿಂಗಳಿಂದ ಕಣ್ಗಾವಲು ಇಟ್ಟಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದರು.</p>.<p>‘ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಪತ್ತೆಗೆ ಬಲೆ ಬೀಸಿದ್ದೇವೆ. ಆರೋಪಿಗಳಿಗೆ ಆತನೇ ಸೂಚನೆಗಳನ್ನು ನೀಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇನ್ನಿತರೆ ಆರೋಪಿಗಳಾದ ಗೋವಿಂದರಾಜು, ಕಾರ್ತಿಕ್ ಅವರ ಬಂಧನಕ್ಕೂ ಕ್ರಮವಹಿಸಿದ್ದೇವೆ’ ಎಂದು ಎಎಸ್ಪಿ ಮಲ್ಲಿಕ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘2019 ರಿಂದ ಕಾರ್ಯನಿರ್ವಹಿಸುತ್ತಿರುವ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಎಸ್.ಕೆ ಆಸ್ಪತ್ರೆಯಲ್ಲಿ 15 ಹಾಸಿಗೆಗಳಿವೆ. ಬಿಎಸ್ಸಿ ನರ್ಸಿಂಗ್ ಸರ್ಟಿಫಿಕೇಟ್ ಪಡೆದಿರುವ ಶ್ಯಾಮಲಾ ಆಸ್ಪತ್ರೆಯ ಆಡಳಿತವನ್ನು ನಿರ್ವಹಿಸುತ್ತಿದ್ದರು. ಈವರೆಗೂ 200 ಹೆಚ್ಚು ಭ್ರೂಣಲಿಂಗ ಪರೀಕ್ಷೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<p>‘ಯಾರಿಗೂ ಅನುಮಾನ ಬಾರದಂತೆ ಭ್ರೂಣಲಿಂಗ ಪರೀಕ್ಷೆ ನಡೆಸುತ್ತಿದ್ದ ನರ್ಸ್ ಶ್ಯಾಮಲಾ, ನೇರವಾಗಿ ಎಸ್.ಕೆ. ಆಸ್ಪತ್ರೆಗೆ ಬಂದರೆ ಒಪ್ಪುತ್ತಿರಲಿಲ್ಲ. ಮಧ್ಯವರ್ತಿಗಳ ಹಾಗೂ ನಂಬಿಕಸ್ಥರ ಮೂಲಕ ಬಂದರೆ ಮಾತ್ರ ಮಾತುಕತೆ ನಡೆಸುತ್ತಿದ್ದರು. ಅದಕ್ಕಾಗಿಯೇ ಹಲವು ಮಧ್ಯವರ್ತಿಗಳಿಗೆ ಹಣ ಕೊಡುತ್ತಿದ್ದರು’ ಎನ್ನಲಾಗಿದೆ.</p>.<p>‘ಹಾರೋಹಳ್ಳಿ- ಹುನಗನಗಳ್ಳಿಯ ಮಧ್ಯೆ ಫಾರಂ ಹೌಸ್ ಜಾಗ ಖರೀದಿಸಿ, ಐಷಾರಾಮಿ ಮನೆ ಕಟ್ಟಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಲಿಂಗ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ಚಟುವಟಿಕೆಯನ್ನು ಫಾರಂ ಹೌಸ್ಗೆ ಸ್ಥಳಾಂತರಿಸಿಕೊಂಡಿದ್ದರು’ ಎಂದು ಮಾಹಿತಿ ಲಭ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>