<p><strong>ಮೈಸೂರು</strong>: ‘ಮೀಸಲಾತಿ ವಿಚಾರದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಯಾವುದೇ ಮಠಾಧೀಶರೂ ಜನರಲ್ಲಿ ಅಶಾಂತಿ ಮೂಡಿಸುವುದು ಹಾಗೂ ಅಪನಂಬಿಕೆ ಬಿತ್ತುವ ಕೆಲಸ ಮಾಡಲೇಬಾರದು. ಅದು ನಾಡಿಗೆ ಒಳ್ಳೆಯದಲ್ಲ’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಪ್ರತಿಪಾದಿಸಿದರು.</p>.<p>ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲಿಂಗಾಯತ ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗ 2ಎಗೆ ಸೇರಿಸುವಂತೆ ಹೋರಾಡುತ್ತಿದ್ದಾರೆ. ಆದರೆ, 2ಎನಲ್ಲಿ ಸೇರಿಕೊಳ್ಳಲು ಜಾಗ ಎಲ್ಲಿದೆ? ಎಲ್ಲವೂ ಮುಗಿದು ಹೋಗಿದೆ. ಯಾರ್ಯಾರೋ ಆ ಜಾತಿಯ ಪ್ರಮಾಣಪತ್ರ ತೆಗೆದುಕೊಳ್ಳುತ್ತಿದ್ದಾರೆ’ ಎಂದರು.</p>.<p>‘ಆರಂಭದಲ್ಲಿ ಹಿಂದುಳಿದ ವರ್ಗ 2ಎ ಪ್ರವರ್ಗದಲ್ಲಿ 15 ಜಾತಿಗಳಷ್ಟೇ ಇದ್ದವು. ಈಗ, 40ರಿಂದ 50 ಸೇರಿಕೊಂಡಿವೆ. ಸರ್ಕಾರ ಇದನ್ನು ಪರಾಮರ್ಶಿಸಬೇಕು. ಈ ವರ್ಗದ ಮೀಸಲಾತಿ ಎಂಬುದು ಧೂಳೀಪಟವಾಗಿದೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮುಖ್ಯಮಂತ್ರಿ ಇದನ್ನು ಗಮನಿಸಬೇಕು. ಸಂವಿಧಾನ ಎಂದೆಲ್ಲಾ ಸುಮ್ಮನೆ ಭಾಷಣ ಮಾಡಿದರೆ ಪ್ರಯೋಜನವಾಗದು’ ಎಂದರು.</p>.<p>‘ನಮಗಿರುವ ಹಿಂದುಳಿದ ವರ್ಗ 2ಎ ಮೀಸಲಾತಿಯನ್ನು ಕೂಡಲಸಂಗಮ ಸ್ವಾಮೀಜಿಯು ಕಿತ್ತುಕೊಂಡು ಬಿಡಲಿ. ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿಬಿಡಲಿ. ಅಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಿ. ಬಳಿಕ, ಹಿಂದುಳಿದ ವರ್ಗ 2ಎ ಪಡೆದುಕೊಳ್ಳಲಿ. ಈಗಿನ ಸ್ಥಿತಿಯಲ್ಲಿ ಸುಮ್ಮನೆ ಎಲ್ಲರಿಗೂ ತೊಂದರೆ ಕೊಡಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಮೀಸಲಾತಿ ವಿಚಾರದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಯಾವುದೇ ಮಠಾಧೀಶರೂ ಜನರಲ್ಲಿ ಅಶಾಂತಿ ಮೂಡಿಸುವುದು ಹಾಗೂ ಅಪನಂಬಿಕೆ ಬಿತ್ತುವ ಕೆಲಸ ಮಾಡಲೇಬಾರದು. ಅದು ನಾಡಿಗೆ ಒಳ್ಳೆಯದಲ್ಲ’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಪ್ರತಿಪಾದಿಸಿದರು.</p>.<p>ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲಿಂಗಾಯತ ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗ 2ಎಗೆ ಸೇರಿಸುವಂತೆ ಹೋರಾಡುತ್ತಿದ್ದಾರೆ. ಆದರೆ, 2ಎನಲ್ಲಿ ಸೇರಿಕೊಳ್ಳಲು ಜಾಗ ಎಲ್ಲಿದೆ? ಎಲ್ಲವೂ ಮುಗಿದು ಹೋಗಿದೆ. ಯಾರ್ಯಾರೋ ಆ ಜಾತಿಯ ಪ್ರಮಾಣಪತ್ರ ತೆಗೆದುಕೊಳ್ಳುತ್ತಿದ್ದಾರೆ’ ಎಂದರು.</p>.<p>‘ಆರಂಭದಲ್ಲಿ ಹಿಂದುಳಿದ ವರ್ಗ 2ಎ ಪ್ರವರ್ಗದಲ್ಲಿ 15 ಜಾತಿಗಳಷ್ಟೇ ಇದ್ದವು. ಈಗ, 40ರಿಂದ 50 ಸೇರಿಕೊಂಡಿವೆ. ಸರ್ಕಾರ ಇದನ್ನು ಪರಾಮರ್ಶಿಸಬೇಕು. ಈ ವರ್ಗದ ಮೀಸಲಾತಿ ಎಂಬುದು ಧೂಳೀಪಟವಾಗಿದೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮುಖ್ಯಮಂತ್ರಿ ಇದನ್ನು ಗಮನಿಸಬೇಕು. ಸಂವಿಧಾನ ಎಂದೆಲ್ಲಾ ಸುಮ್ಮನೆ ಭಾಷಣ ಮಾಡಿದರೆ ಪ್ರಯೋಜನವಾಗದು’ ಎಂದರು.</p>.<p>‘ನಮಗಿರುವ ಹಿಂದುಳಿದ ವರ್ಗ 2ಎ ಮೀಸಲಾತಿಯನ್ನು ಕೂಡಲಸಂಗಮ ಸ್ವಾಮೀಜಿಯು ಕಿತ್ತುಕೊಂಡು ಬಿಡಲಿ. ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿಬಿಡಲಿ. ಅಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಿ. ಬಳಿಕ, ಹಿಂದುಳಿದ ವರ್ಗ 2ಎ ಪಡೆದುಕೊಳ್ಳಲಿ. ಈಗಿನ ಸ್ಥಿತಿಯಲ್ಲಿ ಸುಮ್ಮನೆ ಎಲ್ಲರಿಗೂ ತೊಂದರೆ ಕೊಡಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>