<p><strong>ಮೈಸೂರು</strong>: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ್ (ಗ್ರಾಸ್ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್ಮೆಂಟ್) ಸಹಯೋಗದಲ್ಲಿ ಕೈಗೊಂಡಿರುವ ‘ಸ್ವಾಸ್ಥ್ಯ ಸ್ವರಾಜ್’ಗಾಗಿ ಯೋಜನೆಯಡಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭಿಸಲಾಗಿದೆ.</p>.<p>ಯೋಜನೆಯಡಿ ಹುಣಸೂರಿನ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಗಳ ಮುಂದಾಳತ್ವದಲ್ಲಿ ಗ್ರಾಮ ಆರೋಗ್ಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.</p>.<p>ಇದರ ಭಾಗವಾಗಿ ‘ಗ್ರಾಮ್’ ಹೊರತಂದಿರುವ ‘ಆರೋಗ್ಯ ಕ್ರಿಯಾ ಯೋಜನಾ ಮಾರ್ಗದರ್ಶಿ’ ಪ್ಲಿಪ್ಚಾರ್ಟ್ ಹಾಗೂ ಜಾಗೃತಿ ಪೋಸ್ಟರ್ಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ಕುಮಾರ್ ಶುಕ್ರವಾರ ಮೈಸೂರಿನ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು.</p>.<p>‘ಆರೋಗ್ಯವಂತ ಹಳ್ಳಿಗಳ ನಿರ್ಮಾಣದ ದಿಕ್ಕಿನಲ್ಲಿ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ. ಸುಸ್ಥಿರ ಹಾಗೂ ಸ್ವಾವಲಂಬಿ ಆರೋಗ್ಯ ವ್ಯವಸ್ಥೆ ನಿರ್ಮಾಣದ ಪ್ರಯತ್ನದ ಭಾಗವಾಗಿದೆ’ ಎಂದು ‘ಗ್ರಾಮ್’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜ್ ಆರ್. ಶ್ರೇಷ್ಠ ತಿಳಿಸಿದ್ದಾರೆ.</p>.<p>‘ಸ್ವಾಸ್ಥ್ಯ ಸ್ವರಾಜ್’ ಯೋಜನೆಯ ಸಂಯೋಜಕ ರವಿ ಸಿ.ಎಸ್. ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ್ (ಗ್ರಾಸ್ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್ಮೆಂಟ್) ಸಹಯೋಗದಲ್ಲಿ ಕೈಗೊಂಡಿರುವ ‘ಸ್ವಾಸ್ಥ್ಯ ಸ್ವರಾಜ್’ಗಾಗಿ ಯೋಜನೆಯಡಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭಿಸಲಾಗಿದೆ.</p>.<p>ಯೋಜನೆಯಡಿ ಹುಣಸೂರಿನ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಗಳ ಮುಂದಾಳತ್ವದಲ್ಲಿ ಗ್ರಾಮ ಆರೋಗ್ಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.</p>.<p>ಇದರ ಭಾಗವಾಗಿ ‘ಗ್ರಾಮ್’ ಹೊರತಂದಿರುವ ‘ಆರೋಗ್ಯ ಕ್ರಿಯಾ ಯೋಜನಾ ಮಾರ್ಗದರ್ಶಿ’ ಪ್ಲಿಪ್ಚಾರ್ಟ್ ಹಾಗೂ ಜಾಗೃತಿ ಪೋಸ್ಟರ್ಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ಕುಮಾರ್ ಶುಕ್ರವಾರ ಮೈಸೂರಿನ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು.</p>.<p>‘ಆರೋಗ್ಯವಂತ ಹಳ್ಳಿಗಳ ನಿರ್ಮಾಣದ ದಿಕ್ಕಿನಲ್ಲಿ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ. ಸುಸ್ಥಿರ ಹಾಗೂ ಸ್ವಾವಲಂಬಿ ಆರೋಗ್ಯ ವ್ಯವಸ್ಥೆ ನಿರ್ಮಾಣದ ಪ್ರಯತ್ನದ ಭಾಗವಾಗಿದೆ’ ಎಂದು ‘ಗ್ರಾಮ್’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜ್ ಆರ್. ಶ್ರೇಷ್ಠ ತಿಳಿಸಿದ್ದಾರೆ.</p>.<p>‘ಸ್ವಾಸ್ಥ್ಯ ಸ್ವರಾಜ್’ ಯೋಜನೆಯ ಸಂಯೋಜಕ ರವಿ ಸಿ.ಎಸ್. ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>