<p><strong>ಮೈಸೂರು: </strong>‘ಆರೋಗ್ಯ ಕ್ಷೇತ್ರವು ಸೇವೆಯಾಗಿರಬೇಕೇ ವಿನಹಾ ಅದು ಉದ್ಯಮವಾಗಬಾರದು’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ತಿಳಿಸಿದರು.</p>.<p>ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಯು ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಆರೋಗ್ಯ ಕ್ಷೇತ್ರವನ್ನು ಲಾಭ ಪಡೆಯುವಂತಹ ಉದ್ಯಮ ಎಂದು ಪರಿಗಣಿಸುವುದು ಅತ್ಯಂತ ಭಯಂಕರವಾದದ್ದು ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ವೇದಿಕೆಯ ಮೇಲೆ ಆಡುವ ಮಾತುಗಳಿಗೂ ಖಾಸಗಿಯಾಗಿ ಆಡುವ ಮಾತುಗಳಿಗೂ ಅಂತರ ಕಡಿಮೆಯಾಗಬೇಕು. ಶ್ರದ್ದೆ, ಬದ್ದತೆ ಪ್ರಾಮಾಣಿಕತೆಯಿಂದ ನಾವು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಾಗ ಮಾತ್ರ ಆ ವೃತ್ತಿಗೆ ಬಹಳ ದೊಡ್ಡ ಗೌರವ ಸಿಗುತ್ತದೆ’ ಎಂದರು.</p>.<p>ಮುಖಂಡ ಸಿ.ಎಚ್.ವಿಜಯಶಂಕರ್ ಮಾತನಾಡಿ, ‘ಬದುಕು ಎಂದಿಗೂ ಕೊನೆಯಾಗುವುದಿಲ್ಲ. ಸತ್ತ ಮೇಲೂ ಬದುಕಿದೆ. ಸ್ವಾಮಿವಿವೇಕಾನಂದ ಅವರೂ ಈ ಬದುಕು ಒಂದು ನಿಲ್ದಾಣವೇ ಹೊರತು ಕೊನೆಯ ನಿಲ್ದಾಣ ಅಲ್ಲ ಎನ್ನುತ್ತಾರೆ. ಸಾವು ಶಾಶ್ವತ ಅಲ್ಲ ಸಾಧನೆ ಶಾಶ್ವತ’ ಎಂದು<br />ಹೇಳಿದರು.</p>.<p>ನೇತ್ರತಜ್ಞ ಡಾ.ಮಣಿಕರ್ಣಿಕಾ, ‘ಮೃತ್ಯುಂಜಯಪ್ಪ ಕೇವಲ ವೈದ್ಯರಾಗಿರಲಿಲ್ಲ. ಸರಗೂರಿನಲ್ಲಿ ಮರಗಳನ್ನು ನೆಟ್ಟು ಪೋಷಿಸಿದರು. ಅವರ ಮನೆಯಲ್ಲೂ ಸಾಕಷ್ಟು ಗಿಡಗಳನ್ನು ಬೆಳೆಸಿದ್ದಾರೆ. ದೂರದೂರಿನಿಂದ ಬಂದ ರೋಗಿಗಳಿಗೆ ಊಟವನ್ನು ಸಹ ಹಾಕಿಸುತ್ತಿದ್ದರು’ ಎಂದು ಶ್ಲಾಘಿಸಿದರು.</p>.<p>ನೇತ್ರ ತಜ್ಞರಾದ ಡಾ.ಎಚ್.ಆರ್.ಮಣಿಕರ್ಣಿಕಾ ಹಾಗೂ ಡಾ.ಬಿ.ಎನ್.ಶೇಷಾದ್ರಿ ದಂಪತಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಪಾಂಡವಪುರದಲ್ಲಿಗ್ರಾಮ ವಿಕಾಸ ಕಾರ್ಯಕ್ರಮ ಮಾಡುತ್ತಿರುವ ಜನಜಾಗರಣ ಟ್ರಸ್ಟ್ನವರ ಕಟ್ಟಡ ನಿರ್ಮಾಣಕ್ಕೆ ಪ್ರಶಸ್ತಿ ಮೊತ್ತ ₹ 25 ಸಾವಿರನ್ನು ನೀಡುವುದಾಗಿ ಮಣಿಕರ್ಣಿಕಾ ಪ್ರಕಟಿಸಿದರು.</p>.<p>ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಆರೋಗ್ಯ ಕ್ಷೇತ್ರವು ಸೇವೆಯಾಗಿರಬೇಕೇ ವಿನಹಾ ಅದು ಉದ್ಯಮವಾಗಬಾರದು’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ತಿಳಿಸಿದರು.</p>.<p>ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಯು ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಆರೋಗ್ಯ ಕ್ಷೇತ್ರವನ್ನು ಲಾಭ ಪಡೆಯುವಂತಹ ಉದ್ಯಮ ಎಂದು ಪರಿಗಣಿಸುವುದು ಅತ್ಯಂತ ಭಯಂಕರವಾದದ್ದು ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ವೇದಿಕೆಯ ಮೇಲೆ ಆಡುವ ಮಾತುಗಳಿಗೂ ಖಾಸಗಿಯಾಗಿ ಆಡುವ ಮಾತುಗಳಿಗೂ ಅಂತರ ಕಡಿಮೆಯಾಗಬೇಕು. ಶ್ರದ್ದೆ, ಬದ್ದತೆ ಪ್ರಾಮಾಣಿಕತೆಯಿಂದ ನಾವು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಾಗ ಮಾತ್ರ ಆ ವೃತ್ತಿಗೆ ಬಹಳ ದೊಡ್ಡ ಗೌರವ ಸಿಗುತ್ತದೆ’ ಎಂದರು.</p>.<p>ಮುಖಂಡ ಸಿ.ಎಚ್.ವಿಜಯಶಂಕರ್ ಮಾತನಾಡಿ, ‘ಬದುಕು ಎಂದಿಗೂ ಕೊನೆಯಾಗುವುದಿಲ್ಲ. ಸತ್ತ ಮೇಲೂ ಬದುಕಿದೆ. ಸ್ವಾಮಿವಿವೇಕಾನಂದ ಅವರೂ ಈ ಬದುಕು ಒಂದು ನಿಲ್ದಾಣವೇ ಹೊರತು ಕೊನೆಯ ನಿಲ್ದಾಣ ಅಲ್ಲ ಎನ್ನುತ್ತಾರೆ. ಸಾವು ಶಾಶ್ವತ ಅಲ್ಲ ಸಾಧನೆ ಶಾಶ್ವತ’ ಎಂದು<br />ಹೇಳಿದರು.</p>.<p>ನೇತ್ರತಜ್ಞ ಡಾ.ಮಣಿಕರ್ಣಿಕಾ, ‘ಮೃತ್ಯುಂಜಯಪ್ಪ ಕೇವಲ ವೈದ್ಯರಾಗಿರಲಿಲ್ಲ. ಸರಗೂರಿನಲ್ಲಿ ಮರಗಳನ್ನು ನೆಟ್ಟು ಪೋಷಿಸಿದರು. ಅವರ ಮನೆಯಲ್ಲೂ ಸಾಕಷ್ಟು ಗಿಡಗಳನ್ನು ಬೆಳೆಸಿದ್ದಾರೆ. ದೂರದೂರಿನಿಂದ ಬಂದ ರೋಗಿಗಳಿಗೆ ಊಟವನ್ನು ಸಹ ಹಾಕಿಸುತ್ತಿದ್ದರು’ ಎಂದು ಶ್ಲಾಘಿಸಿದರು.</p>.<p>ನೇತ್ರ ತಜ್ಞರಾದ ಡಾ.ಎಚ್.ಆರ್.ಮಣಿಕರ್ಣಿಕಾ ಹಾಗೂ ಡಾ.ಬಿ.ಎನ್.ಶೇಷಾದ್ರಿ ದಂಪತಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಪಾಂಡವಪುರದಲ್ಲಿಗ್ರಾಮ ವಿಕಾಸ ಕಾರ್ಯಕ್ರಮ ಮಾಡುತ್ತಿರುವ ಜನಜಾಗರಣ ಟ್ರಸ್ಟ್ನವರ ಕಟ್ಟಡ ನಿರ್ಮಾಣಕ್ಕೆ ಪ್ರಶಸ್ತಿ ಮೊತ್ತ ₹ 25 ಸಾವಿರನ್ನು ನೀಡುವುದಾಗಿ ಮಣಿಕರ್ಣಿಕಾ ಪ್ರಕಟಿಸಿದರು.</p>.<p>ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>