<p><strong>ಹುಣಸೂರು</strong>; ನಗರದ ರಾಷ್ಟ್ರೀಯ ಹೆದ್ದಾರಿ 275 ರಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ನಲ್ಲಿ ಡಿ.28ರ ಮಧ್ಯಾಹ್ನ ನಡೆದ ದರೋಡೆಯಲ್ಲಿ ಒಟ್ಟು₹ 10 ಕೋಟಿ ಮೌಲ್ಯದ 450 ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿದೆ ಎಂದು ಅಂಗಡಿ ಮಾಲಿಕ ಕೇರಳ ರಾಜ್ಯದ ವೈನಾಡು ನಿವಾಸಿ ಜಂಷಿದ್ ಪಿ.ಎ. ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ.</p>.<p>ಭಾನುವಾರ ಮಧ್ಯಾಹ್ನ 2ರಿಂದ 2 ಗಂಟೆ 5 ನಿಮಿಷದೊಳಗೆ 5 ಜನರು ದ್ವಿಚಕ್ರ ವಾಹನದಲ್ಲಿ ಬಂದೂಕಿನೊಂದಿಗೆ ದಾಳಿ ನಡೆಸಿದ್ದು, ಆ ಸಮಯದಲ್ಲಿ ಅಂಗಡಿಯ ವ್ಯವಸ್ಥಾಪಕ ಊಟಕ್ಕೆ ತೆರಳಿದ್ದರು. ಮುಸುಕುಧಾರಿಗಳು ಬಂದೂಕು ತೋರಿಸಿ ಅಂಗಡಿಯಲ್ಲಿದ್ದ 12 ಲಾಕೆಟ್, 8 ಬ್ರೇಸ್ಲೆಟ್, 64 ಬಳೆ, 150 ನೆಕ್ಲೆಸ್, 65 ಚೈನು, 12 ಕಾಲು ಚೈನ್, 70 ಉಂಗುರ, 19 ಕರಿಮಣಿ ಸರ, 17 ಕಿವಿ ಡ್ರಾಪ್ಸ್, 13 ಡೈಮಂಡ್ಸ್ ರಿಂಗ್ ದರೋಡೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.</p>.<p><strong>ಮಾಹಿತಿ ಇಲ್ಲ:</strong> ದರೋಡೆ ನಡೆಸಿದ ಆರೋಪಿಗಳ ಸುಳಿವು ನಾಲ್ಕು ದಿನ ಕಳೆದರೂ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಈ ಪ್ರಕರಣವನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿವೈಎಸ್ಪಿ ರವಿ ಸೇರಿದಂತೆ 100 ಪೊಲೀಸರನ್ನು ಒಳಗೊಂಡ 5 ತಂಡ ರಚಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>; ನಗರದ ರಾಷ್ಟ್ರೀಯ ಹೆದ್ದಾರಿ 275 ರಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ನಲ್ಲಿ ಡಿ.28ರ ಮಧ್ಯಾಹ್ನ ನಡೆದ ದರೋಡೆಯಲ್ಲಿ ಒಟ್ಟು₹ 10 ಕೋಟಿ ಮೌಲ್ಯದ 450 ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿದೆ ಎಂದು ಅಂಗಡಿ ಮಾಲಿಕ ಕೇರಳ ರಾಜ್ಯದ ವೈನಾಡು ನಿವಾಸಿ ಜಂಷಿದ್ ಪಿ.ಎ. ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ.</p>.<p>ಭಾನುವಾರ ಮಧ್ಯಾಹ್ನ 2ರಿಂದ 2 ಗಂಟೆ 5 ನಿಮಿಷದೊಳಗೆ 5 ಜನರು ದ್ವಿಚಕ್ರ ವಾಹನದಲ್ಲಿ ಬಂದೂಕಿನೊಂದಿಗೆ ದಾಳಿ ನಡೆಸಿದ್ದು, ಆ ಸಮಯದಲ್ಲಿ ಅಂಗಡಿಯ ವ್ಯವಸ್ಥಾಪಕ ಊಟಕ್ಕೆ ತೆರಳಿದ್ದರು. ಮುಸುಕುಧಾರಿಗಳು ಬಂದೂಕು ತೋರಿಸಿ ಅಂಗಡಿಯಲ್ಲಿದ್ದ 12 ಲಾಕೆಟ್, 8 ಬ್ರೇಸ್ಲೆಟ್, 64 ಬಳೆ, 150 ನೆಕ್ಲೆಸ್, 65 ಚೈನು, 12 ಕಾಲು ಚೈನ್, 70 ಉಂಗುರ, 19 ಕರಿಮಣಿ ಸರ, 17 ಕಿವಿ ಡ್ರಾಪ್ಸ್, 13 ಡೈಮಂಡ್ಸ್ ರಿಂಗ್ ದರೋಡೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.</p>.<p><strong>ಮಾಹಿತಿ ಇಲ್ಲ:</strong> ದರೋಡೆ ನಡೆಸಿದ ಆರೋಪಿಗಳ ಸುಳಿವು ನಾಲ್ಕು ದಿನ ಕಳೆದರೂ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಈ ಪ್ರಕರಣವನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿವೈಎಸ್ಪಿ ರವಿ ಸೇರಿದಂತೆ 100 ಪೊಲೀಸರನ್ನು ಒಳಗೊಂಡ 5 ತಂಡ ರಚಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>