<p><strong>ಹುಣಸೂರು</strong>: ‘ಇಲ್ಲಿನ ಕಾವೇರಿ ಆಸ್ಪತ್ರೆ ಕಟ್ಟಡ ನಗರಸಭೆ ಕಾನೂನು ಉಲ್ಲಂಘಿಸಿ ನಿರ್ಮಿಸಿದ್ದು, ಈ ಸಂಬಂಧ ವಿಶೇಷ ಸಾಮಾನ್ಯ ಸಭೆಯಲ್ಲಿ ಅಕ್ರಮ ಕಟ್ಟಡಕ್ಕೆ ಸಾಥ್ ನೀಡಿದ ಸದಸ್ಯರನ್ನೇ ಏಕ ಸದಸ್ಯ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹಾಸ್ಯಾಸ್ಪದ’ ಎಂದು ನಗರಸಭೆ ಸದಸ್ಯ ಸ್ವಾಮಿಗೌಡ ಆರೋಪಿಸಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ನಗರ ಪ್ರಾಧಿಕಾರದಿಂದ ನಕಾಶೆಗೆ ಅನುಮತಿ ಪಡೆದಿಲ್ಲ. ಇದಲ್ಲದೆ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹ ಘಟಕ ನಿರ್ಮಿಸಿದ್ದಾರೆ. ಈ ಎಲ್ಲವನ್ನು ತಿಳಿದ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಅಕ್ರಮ ಕಟ್ಟಡ ನಿರ್ಮಿಸಿದವರ ಪರವಾಗಿರುವುದು ದುರಂತ’ ಎಂದರು.</p>.<p>‘ಈ ಸಂಬಂಧ ನಗರಸಭೆ ನ್ಯಾಯಾಲಯ ಮೆಟ್ಟಿಲೇರಿ, ತೆರವುಗೊಳಿಸಿ ಇಲ್ಲವೇ ನಿಗದಿತ ಸಮಯದೊಳಗೆ ದಾಖಲೆ ನೀಡುವಂತೆ ಸೂಚಿಸಿದರು ಕ್ರಮವಹಿಸದೆ ಆಸ್ಪತ್ರೆ ಆಡಳಿತ ಮಂಡಳಿ ನಗರಸಭೆಗೆ ನ್ಯಾಯಾಲಯದಿಂದ ನೋಟಿಸ್ ಜಾರಿಗೊಳಿಸಿದೆ. ಈ ಎಲ್ಲವನ್ನು ತಿಳಿದ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಸಭೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲು ಅಕ್ರಮ ಕಟ್ಟಡ ನಿರ್ಮಿಸಲು ಬೆಂಬಲ ನೀಡಿದ ವ್ಯಕ್ತಿಯನ್ನೇ ಏಕ ಸದಸ್ಯ ಸಮಿತಿ ಅಧ್ಯಕ್ಷರನ್ನಾಗಿಸಿರುವುದು ಶೋಚನೀಯ ಸಂಗತಿ’ ಎಂದರು.</p>.<p><strong>ವಿಶ್ವಾಸವಿಲ್ಲ</strong>: ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕಾಂಗ್ರೆಸ್ ಪಕ್ಷದ 12 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಏಕ ಸದಸ್ಯ ಸಮಿತಿ ಅಧ್ಯಕ್ಷರಿಂದ ಸತ್ಯಾಂಶ ಹೊರ ಬರುವ ವಿಶ್ವಾಸವಿಲ್ಲ. ನಗರಸಭೆಯಲ್ಲಿ ಪ್ರಜಾಪ್ರಭುತ್ವ ಆಡಳಿತ ನಡೆಯದೆ ತೊಘಲಕ್ ದರ್ಬಾರ್ ನಡೆಸಿದ್ದಾರೆ ಎಂದರು.</p>.<p><strong>ಸೂಪರ್ ಸೀಡ್ಗೆ ಆಗ್ರಹ</strong>: ಹುಣಸೂರು ನಗರಸಭೆಯಲ್ಲಿ ಯಾವುದೂ ಕೌನ್ಸಿಲ್ ಸಭೆ ತೀರ್ಮಾನದಂತೆ ನಡೆಯುತ್ತಿಲ್ಲ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು, ಸ್ಥಳದಲ್ಲಿಯೇ ನಡಾವಳಿ ದಾಖಲಿಸದೆ ಅಧ್ಯಕ್ಷರು ಅವರ ವಿವೇಚನೆ ಬಂದಂತೆ ಬರೆದುಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಎಲ್ಲವನ್ನು ಪರಿಗಣಿಸಿ ಪೌರಾಡಳಿತ ಕಾನೂನು ಮಿತಿಯೊಳಗೆ ನಗರಸಭೆಯನ್ನು ಸೂಪರ್ ಸೀಡ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.</p>.<p>ನಗರಸಭೆ ಸದಸ್ಯರಾದ ಸೌರಭ ಸಿದ್ದರಾಜು, ಸಮೀನಾ ಪರ್ವಿನ್, ಪರ್ವಿನ್ ತಾಜ್, ರಮೇಶ್, ರಂಜಿತಾ.ಪಿ, ಮಂಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ‘ಇಲ್ಲಿನ ಕಾವೇರಿ ಆಸ್ಪತ್ರೆ ಕಟ್ಟಡ ನಗರಸಭೆ ಕಾನೂನು ಉಲ್ಲಂಘಿಸಿ ನಿರ್ಮಿಸಿದ್ದು, ಈ ಸಂಬಂಧ ವಿಶೇಷ ಸಾಮಾನ್ಯ ಸಭೆಯಲ್ಲಿ ಅಕ್ರಮ ಕಟ್ಟಡಕ್ಕೆ ಸಾಥ್ ನೀಡಿದ ಸದಸ್ಯರನ್ನೇ ಏಕ ಸದಸ್ಯ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹಾಸ್ಯಾಸ್ಪದ’ ಎಂದು ನಗರಸಭೆ ಸದಸ್ಯ ಸ್ವಾಮಿಗೌಡ ಆರೋಪಿಸಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ನಗರ ಪ್ರಾಧಿಕಾರದಿಂದ ನಕಾಶೆಗೆ ಅನುಮತಿ ಪಡೆದಿಲ್ಲ. ಇದಲ್ಲದೆ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹ ಘಟಕ ನಿರ್ಮಿಸಿದ್ದಾರೆ. ಈ ಎಲ್ಲವನ್ನು ತಿಳಿದ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಅಕ್ರಮ ಕಟ್ಟಡ ನಿರ್ಮಿಸಿದವರ ಪರವಾಗಿರುವುದು ದುರಂತ’ ಎಂದರು.</p>.<p>‘ಈ ಸಂಬಂಧ ನಗರಸಭೆ ನ್ಯಾಯಾಲಯ ಮೆಟ್ಟಿಲೇರಿ, ತೆರವುಗೊಳಿಸಿ ಇಲ್ಲವೇ ನಿಗದಿತ ಸಮಯದೊಳಗೆ ದಾಖಲೆ ನೀಡುವಂತೆ ಸೂಚಿಸಿದರು ಕ್ರಮವಹಿಸದೆ ಆಸ್ಪತ್ರೆ ಆಡಳಿತ ಮಂಡಳಿ ನಗರಸಭೆಗೆ ನ್ಯಾಯಾಲಯದಿಂದ ನೋಟಿಸ್ ಜಾರಿಗೊಳಿಸಿದೆ. ಈ ಎಲ್ಲವನ್ನು ತಿಳಿದ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಸಭೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲು ಅಕ್ರಮ ಕಟ್ಟಡ ನಿರ್ಮಿಸಲು ಬೆಂಬಲ ನೀಡಿದ ವ್ಯಕ್ತಿಯನ್ನೇ ಏಕ ಸದಸ್ಯ ಸಮಿತಿ ಅಧ್ಯಕ್ಷರನ್ನಾಗಿಸಿರುವುದು ಶೋಚನೀಯ ಸಂಗತಿ’ ಎಂದರು.</p>.<p><strong>ವಿಶ್ವಾಸವಿಲ್ಲ</strong>: ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕಾಂಗ್ರೆಸ್ ಪಕ್ಷದ 12 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಏಕ ಸದಸ್ಯ ಸಮಿತಿ ಅಧ್ಯಕ್ಷರಿಂದ ಸತ್ಯಾಂಶ ಹೊರ ಬರುವ ವಿಶ್ವಾಸವಿಲ್ಲ. ನಗರಸಭೆಯಲ್ಲಿ ಪ್ರಜಾಪ್ರಭುತ್ವ ಆಡಳಿತ ನಡೆಯದೆ ತೊಘಲಕ್ ದರ್ಬಾರ್ ನಡೆಸಿದ್ದಾರೆ ಎಂದರು.</p>.<p><strong>ಸೂಪರ್ ಸೀಡ್ಗೆ ಆಗ್ರಹ</strong>: ಹುಣಸೂರು ನಗರಸಭೆಯಲ್ಲಿ ಯಾವುದೂ ಕೌನ್ಸಿಲ್ ಸಭೆ ತೀರ್ಮಾನದಂತೆ ನಡೆಯುತ್ತಿಲ್ಲ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು, ಸ್ಥಳದಲ್ಲಿಯೇ ನಡಾವಳಿ ದಾಖಲಿಸದೆ ಅಧ್ಯಕ್ಷರು ಅವರ ವಿವೇಚನೆ ಬಂದಂತೆ ಬರೆದುಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಎಲ್ಲವನ್ನು ಪರಿಗಣಿಸಿ ಪೌರಾಡಳಿತ ಕಾನೂನು ಮಿತಿಯೊಳಗೆ ನಗರಸಭೆಯನ್ನು ಸೂಪರ್ ಸೀಡ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.</p>.<p>ನಗರಸಭೆ ಸದಸ್ಯರಾದ ಸೌರಭ ಸಿದ್ದರಾಜು, ಸಮೀನಾ ಪರ್ವಿನ್, ಪರ್ವಿನ್ ತಾಜ್, ರಮೇಶ್, ರಂಜಿತಾ.ಪಿ, ಮಂಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>