<p><strong>ಹುಣಸೂರು</strong>: ಅನೈತಿಕ ಸಂಬಂಧ ಪತಿ, ಪತ್ನಿಯ ನಡುವಿನ ವೈಮನಸ್ಸು ಹತ್ಯೆಯೊಂದಿಗೆ ಅಂತ್ಯವಾದ ಘಟನೆ ತಾಲ್ಲೂಕಿನ ಬೆಂಕಿಪುರ ಗ್ರಾಮದಲ್ಲಿ ನಡೆದಿದೆ.</p>.<p>ಬೆಂಕಿಪುರ ಗ್ರಾಮದ ನಿವಾಸಿ ಸ್ವಾಮಿನಾಯಕ ಅನೈತಿಕ ಸಂಬಂಧ ಹೊಂದಿದ್ದು ಈ ಸಂಬಂಧ ಮನೆಯಲ್ಲಿ ಪತಿ, ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇಂದು ಮಧ್ಯಾಹ್ನ ಮನೆಯಲ್ಲಿ ಗಲಾಟೆ ಆರಂಭವಾಗಿ ಪತ್ನಿ ರೋಜಾ (37)ಳನ್ನು ಮಾರಕಾಸ್ತ್ರದಿಂದ ಹತ್ಯೆಗೈದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.</p>.<p>ಘಟನೆ ವಿವರಣೆ: ಬೆಂಕಿಪುರ ಗ್ರಾಮದ ನಿವಾಸಿ ಸ್ವಾಮಿನಾಯಕ 12 ವರ್ಷದ ಹಿಂದೆ ಅದೇ ಗ್ರಾಮದ ರೋಜಾ ಎಂಬುವವಳೊಂದಿಗೆ ವಿವಾಹವಾಗಿ ಎರಡು ಮಕ್ಕಳೊಂದಿಗೆ ಜೀವನ ನಡೆಸಿದ್ದನು. ಸ್ವಾಮಿನಾಯಕ ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದ ಪತ್ನಿ ರೋಜಾ ಮನೆಯಲ್ಲಿ ಗಲಾಟೆ ಆರಂಭಿಸಿದ್ದಳು. ಈ ಸಂಬಂಧ ರೋಜಾ ಕುಟುಂಬದವರು ಮನೆಯಲ್ಲಿ ನ್ಯಾಯ ಪಂಚಾಯಿತಿ ನಡೆಸಿ ಎಲ್ಲವನ್ನು ಇತ್ಯರ್ಥ ಮಾಡಿದ್ದರು ಅಕ್ರಮ ಸಂಬಂಧ ಸ್ವಾಮಿನಾಯಕ ಮುಂದುವರೆಸಿದ್ದ ಎಂದು ಬಿಳಿಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ದಾಖಲಿಸಲಾಗಿದೆ.</p>.<p>ಭಾನುವಾರ ಬೆಳಗ್ಗೆ 10 ಗಂಟೆ ಆಸುಪಾಸಿನಲ್ಲಿ ರೋಜ ಮನೆಗೆ ಕುಡಿಯುವ ನೀರು ತರಲು ತೆರಳುವ ಸಮಯದಲ್ಲಿ ಬೀದಿಯಲ್ಲೇ ಸ್ವಾಮಿನಾಯಕ ಪತ್ನಿಯನ್ನು ಮಾರಕಾಸ್ತ್ರದಿಂದ ಥಳಿಸಿ ಹತ್ಯೆ ಮಾಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.</p>.<p>ಬಂಧನ: ಹತ್ಯೆಗೈದ ಸ್ವಾಮಿನಾಯಕನ್ನು ಪೊಲೀಸ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾಗಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಅನೈತಿಕ ಸಂಬಂಧ ಪತಿ, ಪತ್ನಿಯ ನಡುವಿನ ವೈಮನಸ್ಸು ಹತ್ಯೆಯೊಂದಿಗೆ ಅಂತ್ಯವಾದ ಘಟನೆ ತಾಲ್ಲೂಕಿನ ಬೆಂಕಿಪುರ ಗ್ರಾಮದಲ್ಲಿ ನಡೆದಿದೆ.</p>.<p>ಬೆಂಕಿಪುರ ಗ್ರಾಮದ ನಿವಾಸಿ ಸ್ವಾಮಿನಾಯಕ ಅನೈತಿಕ ಸಂಬಂಧ ಹೊಂದಿದ್ದು ಈ ಸಂಬಂಧ ಮನೆಯಲ್ಲಿ ಪತಿ, ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇಂದು ಮಧ್ಯಾಹ್ನ ಮನೆಯಲ್ಲಿ ಗಲಾಟೆ ಆರಂಭವಾಗಿ ಪತ್ನಿ ರೋಜಾ (37)ಳನ್ನು ಮಾರಕಾಸ್ತ್ರದಿಂದ ಹತ್ಯೆಗೈದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.</p>.<p>ಘಟನೆ ವಿವರಣೆ: ಬೆಂಕಿಪುರ ಗ್ರಾಮದ ನಿವಾಸಿ ಸ್ವಾಮಿನಾಯಕ 12 ವರ್ಷದ ಹಿಂದೆ ಅದೇ ಗ್ರಾಮದ ರೋಜಾ ಎಂಬುವವಳೊಂದಿಗೆ ವಿವಾಹವಾಗಿ ಎರಡು ಮಕ್ಕಳೊಂದಿಗೆ ಜೀವನ ನಡೆಸಿದ್ದನು. ಸ್ವಾಮಿನಾಯಕ ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದ ಪತ್ನಿ ರೋಜಾ ಮನೆಯಲ್ಲಿ ಗಲಾಟೆ ಆರಂಭಿಸಿದ್ದಳು. ಈ ಸಂಬಂಧ ರೋಜಾ ಕುಟುಂಬದವರು ಮನೆಯಲ್ಲಿ ನ್ಯಾಯ ಪಂಚಾಯಿತಿ ನಡೆಸಿ ಎಲ್ಲವನ್ನು ಇತ್ಯರ್ಥ ಮಾಡಿದ್ದರು ಅಕ್ರಮ ಸಂಬಂಧ ಸ್ವಾಮಿನಾಯಕ ಮುಂದುವರೆಸಿದ್ದ ಎಂದು ಬಿಳಿಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ದಾಖಲಿಸಲಾಗಿದೆ.</p>.<p>ಭಾನುವಾರ ಬೆಳಗ್ಗೆ 10 ಗಂಟೆ ಆಸುಪಾಸಿನಲ್ಲಿ ರೋಜ ಮನೆಗೆ ಕುಡಿಯುವ ನೀರು ತರಲು ತೆರಳುವ ಸಮಯದಲ್ಲಿ ಬೀದಿಯಲ್ಲೇ ಸ್ವಾಮಿನಾಯಕ ಪತ್ನಿಯನ್ನು ಮಾರಕಾಸ್ತ್ರದಿಂದ ಥಳಿಸಿ ಹತ್ಯೆ ಮಾಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.</p>.<p>ಬಂಧನ: ಹತ್ಯೆಗೈದ ಸ್ವಾಮಿನಾಯಕನ್ನು ಪೊಲೀಸ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾಗಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>