<p><strong>ಹುಣಸೂರು</strong>: ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರ ನಡೆಸುತ್ತಿರುವ ಜಾತಿಗಣತಿಯಲ್ಲಿ ಬುಂಡೆ ಬೆಸ್ತರು ಎಂದು ನಮೂದಿಸದೆ ‘ಶಿಳ್ಳೆಕ್ಯಾತಾಸ್’ ಎಂದು ನಮೂದಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಬುಂಡೆಬೆಸ್ತರ ಕಾಲೊನಿ ನಿವಾಸಿಗರು ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ನೀಡಿದರು.</p>.<p>‘ತಾಲ್ಲೂಕಿನಾದ್ಯಂತ ಜಾತಿ ಗಣತಿ ಪ್ರಕ್ರಿಯೆ ನಡೆದಿದ್ದು, ಈ ಸಂಬಂಧ ಮನೆಗಳಿಗೆ ಗಣತಿ ಕಾರ್ಯ ನಡೆಸುವ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಈ ಸಮಾಜಕ್ಕೆ ಸರ್ಕಾರ ಬುಂಡೆ ಬೆಸ್ತರು ಎಂದು ಕರೆದು ಪ್ರವರ್ಗ– 1ಕ್ಕೆ ಸೇರಿಸಿದ್ದಾರೆ. ಇದರಿಂದಾಗಿ ನಮ್ಮ ಸಮಾಜಕ್ಕೆ ಸವಲತ್ತುಗಳು ಸಿಗದೆ ಸಮಾಜದ ಯುವಕರು ಇಂದಿಗೂ ಸಾಂಪ್ರದಾಯಕ ವೃತ್ತಿಯಲ್ಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ’ ಎಂದು ಗ್ರಾ.ಪಂ. ಸದಸ್ಯ ರಾಮಕೃಷ್ಣ ಹೇಳಿದರು.</p>.<p>ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ‘ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಸಮಾಜದವರನ್ನು ದಶಕಗಳ ಹಿಂದೆ ಅಂದಿನ ಗ್ರಾಮ ಲೆಕ್ಕಾಧಿಕಾರಿಗಳು ಬುಂಡೆ ಬೆತ್ತರು ಎಂದು ದಾಖಲಿಸಲಾಗಿ ಇಂದಿಗೂ ಈ ಸಮಾಜದವರ ಮೂಲ ಜಾತಿ ಹೆಸರು ಎಲ್ಲಿಯೂ ನಮೂದಾಗದೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಮುದಾಯದವರು ವಾಸವಿದ್ದು ಈ ಭಾಗದಲ್ಲಿ ಶಿಳ್ಳೆಕ್ಯಾತಾಸ್ ಎಂದು ಕರೆಯುತ್ತಿದ್ದು, ದಾಖಲೆಯಲ್ಲಿಯೂ ಇದೇ ಹೆಸರು ನಮೂದಾಗಿದೆ. ಈ ಜನರಿಗೆ ಒಳಮೀಸಲಾತಿ ಸಿಗಲು ಸರ್ಕಾರ ಬುಂಡೆ ಬೆಸ್ತರು ಎಂಬ ಹೆಸರು ಕೈ ಬಿಟ್ಟು ಶಿಳ್ಳೆಕ್ಯಾತಾಸ್ ಎಂದು ನಮೂದಿಸಿಕೊಳ್ಳಲು ಜಾತಿ ಗಣತಿ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಆಗ್ರಹಿಸಿದರು.</p>.<p>‘ಬುಂಡೆಬೆಸ್ತರ ಕಾಲೊನಿಯಲ್ಲಿ 600 ಕುಟುಂಬಗಳು ವಾಸಿಸುತ್ತಿದ್ದು 2 ಸಾವಿರಕ್ಕೂ ಹೆಚ್ಚು ಜನರು ಬದುಕು ಕಟ್ಟಿಕೊಂಡಿದ್ದೇವೆ. ಗ್ರಾಮದಲ್ಲಿ ಮೂಲ ಸವಲತ್ತು ಇಲ್ಲದೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ಮುಖಂಡ ಸಣ್ಣಸ್ವಾಮಿ ಹೇಳಿದರು.</p>.<p>‘ನ್ಯಾಯಬೆಲೆ ಅಂಗಡಿ ಇಲ್ಲದೆ ಪಡಿತರ ಪಡೆಯಲು 3 ಕಿ.ಮೀ ನಡೆದು ಹೋಗಬೇಕು, ಸ್ಮಶಾನವಿಲ್ಲದೆ ಅಂತ್ಯ ಸಂಸ್ಕಾರಕ್ಕೆ ಹೊಲಗಳಲ್ಲಿ ನಡೆಸಬೇಕಾಗಿದೆ’ ಎಂದು ತಹಶೀಲ್ದಾರ್ ಗಮನಕ್ಕೆ ಗ್ರಾಮಸ್ಥರು ತಂದರು.</p>.<p>ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ‘ಗ್ರಾಮಸ್ಥರ ಮನವಿಯನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸಿ ಪರಿಗಣಿಸುವಂತೆ ಮನವಿ ಮಾಡುತ್ತೇನೆ. ಮೂಲ ಸವಲತ್ತು ಕಲ್ಪಿಸುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.</p>.<p>ಗ್ರಾಮದ ರಮೇಶ್, ಶಿವಣ್ಣ, ರಮೇಶ್, ಪಿ.ಆರ್.ಸಣ್ಣಸ್ವಾಮಿ, ಗುಂಡು, ಅಣ್ಣಾಜಿ, ಮುತ್ತಪ್ಪ, ಅಣ್ಣಯ್ಯ ಬೋಡಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರ ನಡೆಸುತ್ತಿರುವ ಜಾತಿಗಣತಿಯಲ್ಲಿ ಬುಂಡೆ ಬೆಸ್ತರು ಎಂದು ನಮೂದಿಸದೆ ‘ಶಿಳ್ಳೆಕ್ಯಾತಾಸ್’ ಎಂದು ನಮೂದಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಬುಂಡೆಬೆಸ್ತರ ಕಾಲೊನಿ ನಿವಾಸಿಗರು ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ನೀಡಿದರು.</p>.<p>‘ತಾಲ್ಲೂಕಿನಾದ್ಯಂತ ಜಾತಿ ಗಣತಿ ಪ್ರಕ್ರಿಯೆ ನಡೆದಿದ್ದು, ಈ ಸಂಬಂಧ ಮನೆಗಳಿಗೆ ಗಣತಿ ಕಾರ್ಯ ನಡೆಸುವ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಈ ಸಮಾಜಕ್ಕೆ ಸರ್ಕಾರ ಬುಂಡೆ ಬೆಸ್ತರು ಎಂದು ಕರೆದು ಪ್ರವರ್ಗ– 1ಕ್ಕೆ ಸೇರಿಸಿದ್ದಾರೆ. ಇದರಿಂದಾಗಿ ನಮ್ಮ ಸಮಾಜಕ್ಕೆ ಸವಲತ್ತುಗಳು ಸಿಗದೆ ಸಮಾಜದ ಯುವಕರು ಇಂದಿಗೂ ಸಾಂಪ್ರದಾಯಕ ವೃತ್ತಿಯಲ್ಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ’ ಎಂದು ಗ್ರಾ.ಪಂ. ಸದಸ್ಯ ರಾಮಕೃಷ್ಣ ಹೇಳಿದರು.</p>.<p>ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ‘ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಸಮಾಜದವರನ್ನು ದಶಕಗಳ ಹಿಂದೆ ಅಂದಿನ ಗ್ರಾಮ ಲೆಕ್ಕಾಧಿಕಾರಿಗಳು ಬುಂಡೆ ಬೆತ್ತರು ಎಂದು ದಾಖಲಿಸಲಾಗಿ ಇಂದಿಗೂ ಈ ಸಮಾಜದವರ ಮೂಲ ಜಾತಿ ಹೆಸರು ಎಲ್ಲಿಯೂ ನಮೂದಾಗದೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಮುದಾಯದವರು ವಾಸವಿದ್ದು ಈ ಭಾಗದಲ್ಲಿ ಶಿಳ್ಳೆಕ್ಯಾತಾಸ್ ಎಂದು ಕರೆಯುತ್ತಿದ್ದು, ದಾಖಲೆಯಲ್ಲಿಯೂ ಇದೇ ಹೆಸರು ನಮೂದಾಗಿದೆ. ಈ ಜನರಿಗೆ ಒಳಮೀಸಲಾತಿ ಸಿಗಲು ಸರ್ಕಾರ ಬುಂಡೆ ಬೆಸ್ತರು ಎಂಬ ಹೆಸರು ಕೈ ಬಿಟ್ಟು ಶಿಳ್ಳೆಕ್ಯಾತಾಸ್ ಎಂದು ನಮೂದಿಸಿಕೊಳ್ಳಲು ಜಾತಿ ಗಣತಿ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಆಗ್ರಹಿಸಿದರು.</p>.<p>‘ಬುಂಡೆಬೆಸ್ತರ ಕಾಲೊನಿಯಲ್ಲಿ 600 ಕುಟುಂಬಗಳು ವಾಸಿಸುತ್ತಿದ್ದು 2 ಸಾವಿರಕ್ಕೂ ಹೆಚ್ಚು ಜನರು ಬದುಕು ಕಟ್ಟಿಕೊಂಡಿದ್ದೇವೆ. ಗ್ರಾಮದಲ್ಲಿ ಮೂಲ ಸವಲತ್ತು ಇಲ್ಲದೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ಮುಖಂಡ ಸಣ್ಣಸ್ವಾಮಿ ಹೇಳಿದರು.</p>.<p>‘ನ್ಯಾಯಬೆಲೆ ಅಂಗಡಿ ಇಲ್ಲದೆ ಪಡಿತರ ಪಡೆಯಲು 3 ಕಿ.ಮೀ ನಡೆದು ಹೋಗಬೇಕು, ಸ್ಮಶಾನವಿಲ್ಲದೆ ಅಂತ್ಯ ಸಂಸ್ಕಾರಕ್ಕೆ ಹೊಲಗಳಲ್ಲಿ ನಡೆಸಬೇಕಾಗಿದೆ’ ಎಂದು ತಹಶೀಲ್ದಾರ್ ಗಮನಕ್ಕೆ ಗ್ರಾಮಸ್ಥರು ತಂದರು.</p>.<p>ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ‘ಗ್ರಾಮಸ್ಥರ ಮನವಿಯನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸಿ ಪರಿಗಣಿಸುವಂತೆ ಮನವಿ ಮಾಡುತ್ತೇನೆ. ಮೂಲ ಸವಲತ್ತು ಕಲ್ಪಿಸುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.</p>.<p>ಗ್ರಾಮದ ರಮೇಶ್, ಶಿವಣ್ಣ, ರಮೇಶ್, ಪಿ.ಆರ್.ಸಣ್ಣಸ್ವಾಮಿ, ಗುಂಡು, ಅಣ್ಣಾಜಿ, ಮುತ್ತಪ್ಪ, ಅಣ್ಣಯ್ಯ ಬೋಡಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>