<p><strong>ಮೈಸೂರು</strong>: ‘ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿನ ಗೊಂದಲ ಸರಿಪಡಿಸುವ ಮೂಲಕ ಎಡ- ಬಲ ಜಾತಿಗಳ ನಡುವಿನ ನಿಜವಾದ ತಾರತಮ್ಯ ಹೋಗಲಾಡಿಸಬೇಕು. ಗೊಂದಲ ಬಗೆಹರಿಯುವವರೆಗೂ ಹಳೆಯ ಮೀಸಲಾತಿ ಪದ್ಧತಿ ಅನುಸರಿಸಿ ನೇಮಕಾತಿ ನಡೆಸಲು ನಮ್ಮ ಬೆಂಬಲವಿದೆ’ ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ ತಿಳಿಸಿದರು.</p><p>ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿಯು ಅಸ್ಪೃಶ್ಯರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಕ್ರಿಯೆ ಎಂದು ಭಾವಿಸಲಾಗಿತ್ತು. ಆದರೆ, ಈ ವಿಷಯದಲ್ಲಿ ನಡೆದಿರುವ ಬೆಳವಣಿಗೆಗಳು ಅಸ್ಪೃಶ್ಯ ಸಮಾಜಗಳನ್ನು ಛಿದ್ರಗೊಳಿಸುವತ್ತ ಸಾಗಿವೆ’ ಎಂದು ದೂರಿದರು.</p><p>‘ಬಹಳ ಭರವಸೆ ಇಟ್ಟುಕೊಂಡು ಅಸ್ಪೃಶ್ಯರು ಸರ್ಕಾರ ರಚನೆಗೆ ಬೆಂಬಲಿಸಿದರು. ಆದರೆ, ಸರ್ಕಾರ ಈ ಮೀಸಲಾತಿ ವರ್ಗೀಕರಣದಲ್ಲಿ ಕ್ಷುಲ್ಲಕ ರಾಜಕಾರಣ ನಡೆಸಿದಂತೆ ಕಂಡುಬರುತ್ತಿದೆ. ನಾಗಮೋಹನ ದಾಸ್ ಆಯೋಗದ ಬಗ್ಗೆ ಅಸ್ಪೃಶ್ಯರೆಲ್ಲರೂ ಹೆಚ್ಚು ಭರವಸೆ ಹೊಂದಿದ್ದರು. ಆದರೆ, ಪ್ರಸ್ತುತ ಅಸ್ಪೃಶ್ಯರ ನಡುವಿನ ಸ್ಥಿತಿಗತಿ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಆಯೋಗ ಕಾಟಾಚಾರಕ್ಕೆ ವರದಿ ಸಿದ್ಧಗೊಳಿಸಿದೆ’ ಎಂದು ಆರೋಪಿಸಿದರು.</p><p>‘ಅಸ್ಪೃಶ್ಯರ ಎಡ–ಬಲ ಸಮೂಹಗಳ ಜನಸಂಖ್ಯೆ ಮಾಹಿತಿಯನ್ನು ಕಲೆ ಹಾಕುವ ವೇಳೆ ದೋಷಕ್ಕೆ ಎಡೆ ಮಾಡಿಕೊಡಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ರೋಸ್ಟರ್ ವ್ಯವಸ್ಥೆ ಸಿದ್ಧಪಡಿಸಲಾಗಿತ್ತು. ಮೇಲ್ನೋಟಕ್ಕೆ ನ್ಯಾಯ ದೊರೆತಿದೆ ಎಂದು ಭ್ರಮ ಮೂಡಿಸಿದ್ದರೂ ಕಚ್ಚಾಡುವಂತೆ ಮಾಡಲಾಗಿದೆ’ ಎಂದು ದೂರಿದರು.</p><p>‘ಸರ್ಕಾರ ಎರಡೂ ಸಮೂಹಕ್ಕೆ ನ್ಯಾಯ ದೊರೆಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು‘ ಎಂದು ಒತ್ತಾಯಿಸಿದರು.</p><p>ಮುಖಂಡರಾದ ದೇವಗಳ್ಳಿ ಸೋಮಶೇಖರ್, ಸೋಮಯ್ಯ ಮಲೆಯೂರು, ಬಿ. ರಾಚಯ್ಯ ಕಿನಕನಹಳ್ಳಿ, ಟಿ. ಈರಯ್ಯ, ಎಚ್.ಡಿ. ರಮೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿನ ಗೊಂದಲ ಸರಿಪಡಿಸುವ ಮೂಲಕ ಎಡ- ಬಲ ಜಾತಿಗಳ ನಡುವಿನ ನಿಜವಾದ ತಾರತಮ್ಯ ಹೋಗಲಾಡಿಸಬೇಕು. ಗೊಂದಲ ಬಗೆಹರಿಯುವವರೆಗೂ ಹಳೆಯ ಮೀಸಲಾತಿ ಪದ್ಧತಿ ಅನುಸರಿಸಿ ನೇಮಕಾತಿ ನಡೆಸಲು ನಮ್ಮ ಬೆಂಬಲವಿದೆ’ ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ ತಿಳಿಸಿದರು.</p><p>ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿಯು ಅಸ್ಪೃಶ್ಯರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಕ್ರಿಯೆ ಎಂದು ಭಾವಿಸಲಾಗಿತ್ತು. ಆದರೆ, ಈ ವಿಷಯದಲ್ಲಿ ನಡೆದಿರುವ ಬೆಳವಣಿಗೆಗಳು ಅಸ್ಪೃಶ್ಯ ಸಮಾಜಗಳನ್ನು ಛಿದ್ರಗೊಳಿಸುವತ್ತ ಸಾಗಿವೆ’ ಎಂದು ದೂರಿದರು.</p><p>‘ಬಹಳ ಭರವಸೆ ಇಟ್ಟುಕೊಂಡು ಅಸ್ಪೃಶ್ಯರು ಸರ್ಕಾರ ರಚನೆಗೆ ಬೆಂಬಲಿಸಿದರು. ಆದರೆ, ಸರ್ಕಾರ ಈ ಮೀಸಲಾತಿ ವರ್ಗೀಕರಣದಲ್ಲಿ ಕ್ಷುಲ್ಲಕ ರಾಜಕಾರಣ ನಡೆಸಿದಂತೆ ಕಂಡುಬರುತ್ತಿದೆ. ನಾಗಮೋಹನ ದಾಸ್ ಆಯೋಗದ ಬಗ್ಗೆ ಅಸ್ಪೃಶ್ಯರೆಲ್ಲರೂ ಹೆಚ್ಚು ಭರವಸೆ ಹೊಂದಿದ್ದರು. ಆದರೆ, ಪ್ರಸ್ತುತ ಅಸ್ಪೃಶ್ಯರ ನಡುವಿನ ಸ್ಥಿತಿಗತಿ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಆಯೋಗ ಕಾಟಾಚಾರಕ್ಕೆ ವರದಿ ಸಿದ್ಧಗೊಳಿಸಿದೆ’ ಎಂದು ಆರೋಪಿಸಿದರು.</p><p>‘ಅಸ್ಪೃಶ್ಯರ ಎಡ–ಬಲ ಸಮೂಹಗಳ ಜನಸಂಖ್ಯೆ ಮಾಹಿತಿಯನ್ನು ಕಲೆ ಹಾಕುವ ವೇಳೆ ದೋಷಕ್ಕೆ ಎಡೆ ಮಾಡಿಕೊಡಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ರೋಸ್ಟರ್ ವ್ಯವಸ್ಥೆ ಸಿದ್ಧಪಡಿಸಲಾಗಿತ್ತು. ಮೇಲ್ನೋಟಕ್ಕೆ ನ್ಯಾಯ ದೊರೆತಿದೆ ಎಂದು ಭ್ರಮ ಮೂಡಿಸಿದ್ದರೂ ಕಚ್ಚಾಡುವಂತೆ ಮಾಡಲಾಗಿದೆ’ ಎಂದು ದೂರಿದರು.</p><p>‘ಸರ್ಕಾರ ಎರಡೂ ಸಮೂಹಕ್ಕೆ ನ್ಯಾಯ ದೊರೆಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು‘ ಎಂದು ಒತ್ತಾಯಿಸಿದರು.</p><p>ಮುಖಂಡರಾದ ದೇವಗಳ್ಳಿ ಸೋಮಶೇಖರ್, ಸೋಮಯ್ಯ ಮಲೆಯೂರು, ಬಿ. ರಾಚಯ್ಯ ಕಿನಕನಹಳ್ಳಿ, ಟಿ. ಈರಯ್ಯ, ಎಚ್.ಡಿ. ರಮೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>