<p><strong>ಮೈಸೂರು</strong>: ಕೆಲವು ಅಸಾಂಕ್ರಾಮಿಕ ರೋಗಗಳ ನಿವಾರಣೆಗೆ ‘ಔಷಧಿ ರಹಿತ ಚಿಕಿತ್ಸೆ’ ಒದಗಿಸುವುದಕ್ಕಾಗಿ ಯೋಗವನ್ನು ಬಳಸಿಕೊಳ್ಳುವ ಪ್ರಯತ್ನ ಜಿಲ್ಲೆಯ ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳಲ್ಲಿ ನಡೆದಿದೆ.</p>.<p>ಆಯುಷ್ ಇಲಾಖೆಯಿಂದ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಕಲ್ಪಿಸಲೆಂದೇ ‘ಸರ್ಕಾರಿ ಆಯುರ್ವೇದ ಆಸ್ಪತ್ರೆ’ಗಳನ್ನು ಸ್ಥಾಪಿಸಿದ್ದು, ಜಿಲ್ಲೆಯಲ್ಲಿ 33 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 20 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ‘ಆಯುಷ್ಮಾನ್ ಆರೋಗ್ಯ ಮಂದಿರ’ ಎಂದು ಮರುನಾಮಕರಣ ಮಾಡಿ ಸೇವೆ ನೀಡಲಾಗುತ್ತಿದೆ. ಯೋಗಾಭ್ಯಾಸ ಕಲಿಸುವವರನ್ನು ಬಳಸಿಕೊಳ್ಳಲಾಗುತ್ತಿದೆ.</p>.<p>ನಗರದ ವಿವಿಧೆಡೆ ಸೇರಿ ತಾಲ್ಲೂಕಿನಲ್ಲಿ 5, ಹುಣಸೂರು 4, ನಂಜನಗೂಡು 5, ಪಿರಿಯಾಪಟ್ಟಣ 2, ಹುಣಸೂರು 2, ಕೆ.ಆರ್.ನಗರ ತಾಲ್ಲೂಕಿನಲ್ಲಿ 2 ಆರೋಗ್ಯ ಮಂದಿರಗಳಿದ್ದು, ಆಯುರ್ವೇದ, ಪ್ರಕೃತಿ ಚಿಕಿತ್ಸೆಯೊಂದಿಗೆ ಯೋಗಾಭ್ಯಾಸದ ಮೂಲಕ ರೋಗ ನಿರ್ವಹಣೆಗೆ ಪ್ರಯತ್ನಿಸಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಯೋಗಾಭ್ಯಾಸ ಕಲಿಸಲಾಗುತ್ತಿದೆ. ವಿಶೇಷವಾಗಿ, ಹಿರಿಯ ನಾಗರಿಕರು ಅಭ್ಯಾಸಕ್ಕೆ ಬರುತ್ತಿರುವುದು ಕಂಡುಬರುತ್ತಿದೆ.</p>.<p><strong>ತಲಾ ಇಬ್ಬರು: </strong>‘ಪ್ರತಿ ಆರೋಗ್ಯ ಮಂದಿರದಲ್ಲೂ ಇಬ್ಬರು ಯೋಗ ತರಬೇತುದಾರರನ್ನು ಬಳಸಲಾಗುತ್ತಿದೆ. ಅವರು ನಿತ್ಯವೂ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಹೇಳಿಕೊಡುತ್ತಾರೆ. ಇತ್ತೀಚೆಗೆ ಜನ ಪ್ರತಿ ಕಾಯಿಲೆಗೂ ಔಷಧಿ ಸೇವಿಸುವುದೇ ಚಿಕಿತ್ಸೆ ಎಂದು ಭಾವಿಸಿದ್ದಾರೆ. ಈ ಮನೋಭಾವವನ್ನು ಹೋಗಲಾಡಿಸಿ, ಕೆಲವು ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕವೂ ನಿರ್ವಹಿಸಬಹುದು ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಎನ್ಸಿಡಿ (ಅಸಾಂಕ್ರಾಮಿಕ ರೋಗ) ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಒತ್ತಡ ಮೊದಲಾದ ಜೀವನಶೈಲಿ ಸಮಸ್ಯೆಗಳನ್ನು ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮದ ಮೂಲಕ ನಿರ್ವಹಿಸಬಹುದು. ಇದಕ್ಕಾಗಿ ನಿಯಮಿತ ಅಭ್ಯಾಸ ಮುಖ್ಯ. ಈ ನಿಟ್ಟಿನಲ್ಲಿ ಯೋಗ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಮಾತ್ರೆಗಳು ಮೊದಲಾದ ಔಷಧಿಗಳ ಸೇವನೆಯಿಂದ ಆಗಬಹುದಾದ ‘ಅಡ್ಡಪರಿಣಾಮ’ಗಳಿಂದ ದೂರ ಇರಿಸುವುದು ಇಲಾಖೆಯ ಉದ್ದೇಶ. ನಿತ್ಯವೂ ಸರಾಸರಿ 50ರಿಂದ 60 ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮಂದಿರದ ಆವರಣದಲ್ಲಿ ಯೋಗಾಭ್ಯಾಸ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.</p>.<div><blockquote>ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಯೋಗ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಕೆಲಸವನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಮಾಡಲಾಗುತ್ತಿದೆ.</blockquote><span class="attribution">– ರೇಣುಕಾದೇವಿ, ಜಿಲ್ಲಾ ಆಯುಷ್ ಅಧಿಕಾರಿ</span></div>.<p><strong>ಜಯನಗರದಲ್ಲಿ ಸೌಲಭ್ಯ</strong></p><p>ಮೈಸೂರಿನ ಜಯನಗರ (ಕೆ.ಜಿ. ಕೊಪ್ಪಲು)ದಲ್ಲಿ ಆಯುಷ್ ಇಲಾಖೆಯಿಂದ ₹ 2 ಕೋಟಿ ವೆಚ್ಚದಲ್ಲಿ ಪ್ರಕೃತಿ ಚಿಕಿತ್ಸಾ ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನು ನವೀಕರಿಸಿದ್ದು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹತ್ತು ಬಗೆಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ತಲೆನೋವು ಮಂಡಿನೋವು ಸೇರಿ ಎಲ್ಲಾ ಬಗೆಯ ಸಮಸ್ಯೆಗಳಿಗೂ ಚಿಕಿತ್ಸೆ ಲಭ್ಯ. ಇಬ್ಬರು ವೈದ್ಯರಿದ್ದಾರೆ. </p><p>ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಮಧುಮೇಹ ನ್ಯೂನತೆ ಇರುವವರಿಗೆ ವಿಶೇಷವಾಗಿ ಕಾಳಜಿ ವಹಿಸಲಾಗುತ್ತಿದೆ. ಇಲ್ಲಿ ‘ಆಯುರ್ವೇದ ಪಂಚಕರ್ಮ ಚಿಕಿತ್ಸೆ ಜೊತೆಗೆ ಇದೀಗ ‘ಫಿಸಿಯೊಥೆರಪಿ’ ಹಾಗೂ ‘ಎಲೆಕ್ಟ್ರೊಥೆರಪಿ’ ಸೇವೆಗಳಿಗೆ ಹೊಸ ಉಪಕರಣಗಳನ್ನು ಒದಗಿಸಿದ್ದು. ಅದಕ್ಕೆ ₹ 4 ಕೋಟಿ ವೆಚ್ಚವಾಗಿದೆ. ಸಂಧಿವಾತ ಪಾರ್ಶ್ವವಾಯು ಶಸ್ತ್ರಚಿಕಿತ್ಸೆ ಪಡೆದ ರೋಗಿಗಳ ಆರೈಕೆಯೂ ಇರಲಿದೆ. ರೋಗಿಗಳಿಗೆ ಬೆಳಿಗ್ಗೆ 6 ಹಾಗೂ ಸಂಜೆ 4ರಿಂದ ಯೋಗ ತರಗತಿಗಳನ್ನೂ ನಡೆಸಲಾಗುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕೆಲವು ಅಸಾಂಕ್ರಾಮಿಕ ರೋಗಗಳ ನಿವಾರಣೆಗೆ ‘ಔಷಧಿ ರಹಿತ ಚಿಕಿತ್ಸೆ’ ಒದಗಿಸುವುದಕ್ಕಾಗಿ ಯೋಗವನ್ನು ಬಳಸಿಕೊಳ್ಳುವ ಪ್ರಯತ್ನ ಜಿಲ್ಲೆಯ ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳಲ್ಲಿ ನಡೆದಿದೆ.</p>.<p>ಆಯುಷ್ ಇಲಾಖೆಯಿಂದ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಕಲ್ಪಿಸಲೆಂದೇ ‘ಸರ್ಕಾರಿ ಆಯುರ್ವೇದ ಆಸ್ಪತ್ರೆ’ಗಳನ್ನು ಸ್ಥಾಪಿಸಿದ್ದು, ಜಿಲ್ಲೆಯಲ್ಲಿ 33 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 20 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ‘ಆಯುಷ್ಮಾನ್ ಆರೋಗ್ಯ ಮಂದಿರ’ ಎಂದು ಮರುನಾಮಕರಣ ಮಾಡಿ ಸೇವೆ ನೀಡಲಾಗುತ್ತಿದೆ. ಯೋಗಾಭ್ಯಾಸ ಕಲಿಸುವವರನ್ನು ಬಳಸಿಕೊಳ್ಳಲಾಗುತ್ತಿದೆ.</p>.<p>ನಗರದ ವಿವಿಧೆಡೆ ಸೇರಿ ತಾಲ್ಲೂಕಿನಲ್ಲಿ 5, ಹುಣಸೂರು 4, ನಂಜನಗೂಡು 5, ಪಿರಿಯಾಪಟ್ಟಣ 2, ಹುಣಸೂರು 2, ಕೆ.ಆರ್.ನಗರ ತಾಲ್ಲೂಕಿನಲ್ಲಿ 2 ಆರೋಗ್ಯ ಮಂದಿರಗಳಿದ್ದು, ಆಯುರ್ವೇದ, ಪ್ರಕೃತಿ ಚಿಕಿತ್ಸೆಯೊಂದಿಗೆ ಯೋಗಾಭ್ಯಾಸದ ಮೂಲಕ ರೋಗ ನಿರ್ವಹಣೆಗೆ ಪ್ರಯತ್ನಿಸಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಯೋಗಾಭ್ಯಾಸ ಕಲಿಸಲಾಗುತ್ತಿದೆ. ವಿಶೇಷವಾಗಿ, ಹಿರಿಯ ನಾಗರಿಕರು ಅಭ್ಯಾಸಕ್ಕೆ ಬರುತ್ತಿರುವುದು ಕಂಡುಬರುತ್ತಿದೆ.</p>.<p><strong>ತಲಾ ಇಬ್ಬರು: </strong>‘ಪ್ರತಿ ಆರೋಗ್ಯ ಮಂದಿರದಲ್ಲೂ ಇಬ್ಬರು ಯೋಗ ತರಬೇತುದಾರರನ್ನು ಬಳಸಲಾಗುತ್ತಿದೆ. ಅವರು ನಿತ್ಯವೂ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಹೇಳಿಕೊಡುತ್ತಾರೆ. ಇತ್ತೀಚೆಗೆ ಜನ ಪ್ರತಿ ಕಾಯಿಲೆಗೂ ಔಷಧಿ ಸೇವಿಸುವುದೇ ಚಿಕಿತ್ಸೆ ಎಂದು ಭಾವಿಸಿದ್ದಾರೆ. ಈ ಮನೋಭಾವವನ್ನು ಹೋಗಲಾಡಿಸಿ, ಕೆಲವು ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕವೂ ನಿರ್ವಹಿಸಬಹುದು ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಎನ್ಸಿಡಿ (ಅಸಾಂಕ್ರಾಮಿಕ ರೋಗ) ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಒತ್ತಡ ಮೊದಲಾದ ಜೀವನಶೈಲಿ ಸಮಸ್ಯೆಗಳನ್ನು ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮದ ಮೂಲಕ ನಿರ್ವಹಿಸಬಹುದು. ಇದಕ್ಕಾಗಿ ನಿಯಮಿತ ಅಭ್ಯಾಸ ಮುಖ್ಯ. ಈ ನಿಟ್ಟಿನಲ್ಲಿ ಯೋಗ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಮಾತ್ರೆಗಳು ಮೊದಲಾದ ಔಷಧಿಗಳ ಸೇವನೆಯಿಂದ ಆಗಬಹುದಾದ ‘ಅಡ್ಡಪರಿಣಾಮ’ಗಳಿಂದ ದೂರ ಇರಿಸುವುದು ಇಲಾಖೆಯ ಉದ್ದೇಶ. ನಿತ್ಯವೂ ಸರಾಸರಿ 50ರಿಂದ 60 ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮಂದಿರದ ಆವರಣದಲ್ಲಿ ಯೋಗಾಭ್ಯಾಸ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.</p>.<div><blockquote>ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಯೋಗ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಕೆಲಸವನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಮಾಡಲಾಗುತ್ತಿದೆ.</blockquote><span class="attribution">– ರೇಣುಕಾದೇವಿ, ಜಿಲ್ಲಾ ಆಯುಷ್ ಅಧಿಕಾರಿ</span></div>.<p><strong>ಜಯನಗರದಲ್ಲಿ ಸೌಲಭ್ಯ</strong></p><p>ಮೈಸೂರಿನ ಜಯನಗರ (ಕೆ.ಜಿ. ಕೊಪ್ಪಲು)ದಲ್ಲಿ ಆಯುಷ್ ಇಲಾಖೆಯಿಂದ ₹ 2 ಕೋಟಿ ವೆಚ್ಚದಲ್ಲಿ ಪ್ರಕೃತಿ ಚಿಕಿತ್ಸಾ ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನು ನವೀಕರಿಸಿದ್ದು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹತ್ತು ಬಗೆಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ತಲೆನೋವು ಮಂಡಿನೋವು ಸೇರಿ ಎಲ್ಲಾ ಬಗೆಯ ಸಮಸ್ಯೆಗಳಿಗೂ ಚಿಕಿತ್ಸೆ ಲಭ್ಯ. ಇಬ್ಬರು ವೈದ್ಯರಿದ್ದಾರೆ. </p><p>ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಮಧುಮೇಹ ನ್ಯೂನತೆ ಇರುವವರಿಗೆ ವಿಶೇಷವಾಗಿ ಕಾಳಜಿ ವಹಿಸಲಾಗುತ್ತಿದೆ. ಇಲ್ಲಿ ‘ಆಯುರ್ವೇದ ಪಂಚಕರ್ಮ ಚಿಕಿತ್ಸೆ ಜೊತೆಗೆ ಇದೀಗ ‘ಫಿಸಿಯೊಥೆರಪಿ’ ಹಾಗೂ ‘ಎಲೆಕ್ಟ್ರೊಥೆರಪಿ’ ಸೇವೆಗಳಿಗೆ ಹೊಸ ಉಪಕರಣಗಳನ್ನು ಒದಗಿಸಿದ್ದು. ಅದಕ್ಕೆ ₹ 4 ಕೋಟಿ ವೆಚ್ಚವಾಗಿದೆ. ಸಂಧಿವಾತ ಪಾರ್ಶ್ವವಾಯು ಶಸ್ತ್ರಚಿಕಿತ್ಸೆ ಪಡೆದ ರೋಗಿಗಳ ಆರೈಕೆಯೂ ಇರಲಿದೆ. ರೋಗಿಗಳಿಗೆ ಬೆಳಿಗ್ಗೆ 6 ಹಾಗೂ ಸಂಜೆ 4ರಿಂದ ಯೋಗ ತರಗತಿಗಳನ್ನೂ ನಡೆಸಲಾಗುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>