ಡಿ.16ರಂದು ಕೇಂದ್ರ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳೊಂದಿಗೆ ಮೈಸೂರಿಗೆ ಬಂದಿರುವ ದೆಹಲಿ ಪೊಲೀಸರು, ಸತತ ವಿಚಾರಣೆ ನಡೆಸಿದ್ದರು. ಈ ವೇಳೆ ಮನೋರಂಜನ್ ಡೈರಿಯಲ್ಲಿ ಸಿಕ್ಕ ಮಾಹಿತಿ ಮೇರೆಗೆ ಸಲೂನ್ ಮಾಲೀಕ ಸೂರಪ್ಪ ಸೇರಿದಂತೆ ಮನೋರಂಜನ್ ಅವರ ಕೆಲ ಸ್ನೇಹಿತರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದರು.