<p><strong>ಮೈಸೂರು: </strong>‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ರಿಕೆಟ್ ತಂಡದ ಕ್ಯಾಪ್ಟನ್. ಇನಿಂಗ್ಸ್ ಓಪನ್ ಮಾಡು ಎಂದರೆ ಮಾಡ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಆಡು ಎಂದರೆ ಅದಕ್ಕೂ ಸಿದ್ಧ. ವಿಕೆಟ್ ಕೀಪಿಂಗ್ ಮಾಡಪ್ಪಾ ಎಂದರೂ ಮಾಡ್ತೇನೆ’ ಎಂದುಸಚಿವ ಜೆ.ಸಿ.ಮಾಧುಸ್ವಾಮಿ ಮಾರ್ಮಿಕವಾಗಿ ನುಡಿದರು.</p>.<p>ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಚೆನ್ನಾಗಿ ಹೊಂದಿಕೊಂಡಿರುವ ಖಾತೆ ಬದಲಾದಾಗ ಬೇಸರ ಸಹಜ. ಸಣ್ಣ ನೀರಾವರಿ ಖಾತೆ ಬದಲಾಯಿಸಿದ್ದಕ್ಕೆ ನೋವಾಗಿದೆ’ ಎಂದು ಹೇಳಿದರು.</p>.<p>‘ನಾನು ಗ್ರಾಮೀಣ ಭಾಗದಿಂದ ಬಂದವನು. ಆದ್ದರಿಂದ ರೈತರು, ಹಳ್ಳಿ ಜನರ ಜತೆ ಇರುವ ಖಾತೆ ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದೇನೆ. ಖಾತೆ ಹೋದಾಗ ರೈತರಿಗೆ ನೆರವಾಗುವ ಅವಕಾಶ ಕಳೆದುಕೊಂಡೆನಲ್ಲಾ ಎಂದು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದೇನೆಯೇ ಹೊರತು ಅಸಮಾಧಾನ ವ್ಯಕ್ತಪಡಿಸಿಲ್ಲ’ ಎಂದು ತಿಳಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/under-pressure-karnataka-cm-b-s-yediyurappa-reallocates-portfolios-to-ministers-798635.html" target="_blank">ಮುನಿಸು ಶಮನಕ್ಕಾಗಿ ಮತ್ತೆ ಖಾತೆ ಬದಲಾವಣೆ ಮಾಡಿದ ಮುಖ್ಯಮಂತ್ರಿ</a></strong></p>.<p>‘ಒಬ್ಬರಿಗೆ ಎರಡು ದೊಡ್ಡ ಖಾತೆಗಳನ್ನು ಇಟ್ಟುಕೊಳ್ಳಲು ಆಗುವುದಿಲ್ಲ. ಕಾನೂನು ಮತ್ತು ವೈದ್ಯಕೀಯ ಶಿಕ್ಷಣ ಎರಡೂ ದೊಡ್ಡ ಖಾತೆಗಳು. ಆದ್ದರಿಂದ ಒಂದನ್ನು ಮಾತ್ರ ಕೊಟ್ಟಿದ್ದಾರೆ. ಕಾನೂನು ಖಾತೆಗೆ ಹೋಲಿಸಿದರೆ ವೈದ್ಯಕೀಯ ಶಿಕ್ಷಣ ನಾಲ್ಕು ಪಟ್ಟು ದೊಡ್ಡ ಖಾತೆ’ ಎಂದರು.</p>.<p><strong>ಖಾತೆ ಮತ್ತೆ ಬದಲಾಯ್ತಾ?: </strong>ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಹಿಂದಕ್ಕೆ ಪಡೆದು ಹಜ್ ಮತ್ತು ವಕ್ಫ್ ಖಾತೆ ನೀಡಿರುವುದರ ಬಗ್ಗೆ ಕೇಳಿದಾಗ, ‘ಹೌದಾ? ಮತ್ತೆ ಬದಲಾಯ್ತಾ? ನಾನು ಬೆಳಿಗ್ಗೆಯೇ ಮನೆ ಬಿಟ್ಟಿದ್ದೆ. ಖಾತೆ ಮತ್ತೆ ಬದಲಾದದ್ದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದರು.</p>.<p><strong>ಸುತ್ತೂರು ಶ್ರೀ ಜತೆ ಮಾತುಕತೆ: </strong>ಸಚಿವ ಮಾಧುಸ್ವಾಮಿ ಮತ್ತು ಶಾಸಕ ಮುನಿರತ್ನ ಅವರು ಶುಕ್ರವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಒಂದು ಗಂಟೆಗೂ ಹೆಚ್ಚು ಹೊತ್ತು ಚರ್ಚಿಸಿದರು.</p>.<p>ಈ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ನಾನು ಮಠದ ಭಕ್ತ. ರಾಜಕಾರಣಿಯಾಗಿ ಇಲ್ಲಿಗೆ ಬಂದಿಲ್ಲ. ಜೆಎಸ್ಎಸ್ ಕಾಲೇಜಿನಲ್ಲಿ ಪದವಿ ಪಡೆದ ದಿನದಿಂದಲೂ ಮಠಕ್ಕೆ ಬರುತ್ತಿರುತ್ತೇನೆ. ಪ್ರತಿ ಬಾರಿ ಬಂದಾಗಲೂ ಸ್ವಾಮೀಜಿ ಜತೆ ತುಂಬಾ ಹೊತ್ತು ಮಾತನಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ರಿಕೆಟ್ ತಂಡದ ಕ್ಯಾಪ್ಟನ್. ಇನಿಂಗ್ಸ್ ಓಪನ್ ಮಾಡು ಎಂದರೆ ಮಾಡ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಆಡು ಎಂದರೆ ಅದಕ್ಕೂ ಸಿದ್ಧ. ವಿಕೆಟ್ ಕೀಪಿಂಗ್ ಮಾಡಪ್ಪಾ ಎಂದರೂ ಮಾಡ್ತೇನೆ’ ಎಂದುಸಚಿವ ಜೆ.ಸಿ.ಮಾಧುಸ್ವಾಮಿ ಮಾರ್ಮಿಕವಾಗಿ ನುಡಿದರು.</p>.<p>ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಚೆನ್ನಾಗಿ ಹೊಂದಿಕೊಂಡಿರುವ ಖಾತೆ ಬದಲಾದಾಗ ಬೇಸರ ಸಹಜ. ಸಣ್ಣ ನೀರಾವರಿ ಖಾತೆ ಬದಲಾಯಿಸಿದ್ದಕ್ಕೆ ನೋವಾಗಿದೆ’ ಎಂದು ಹೇಳಿದರು.</p>.<p>‘ನಾನು ಗ್ರಾಮೀಣ ಭಾಗದಿಂದ ಬಂದವನು. ಆದ್ದರಿಂದ ರೈತರು, ಹಳ್ಳಿ ಜನರ ಜತೆ ಇರುವ ಖಾತೆ ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದೇನೆ. ಖಾತೆ ಹೋದಾಗ ರೈತರಿಗೆ ನೆರವಾಗುವ ಅವಕಾಶ ಕಳೆದುಕೊಂಡೆನಲ್ಲಾ ಎಂದು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದೇನೆಯೇ ಹೊರತು ಅಸಮಾಧಾನ ವ್ಯಕ್ತಪಡಿಸಿಲ್ಲ’ ಎಂದು ತಿಳಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/under-pressure-karnataka-cm-b-s-yediyurappa-reallocates-portfolios-to-ministers-798635.html" target="_blank">ಮುನಿಸು ಶಮನಕ್ಕಾಗಿ ಮತ್ತೆ ಖಾತೆ ಬದಲಾವಣೆ ಮಾಡಿದ ಮುಖ್ಯಮಂತ್ರಿ</a></strong></p>.<p>‘ಒಬ್ಬರಿಗೆ ಎರಡು ದೊಡ್ಡ ಖಾತೆಗಳನ್ನು ಇಟ್ಟುಕೊಳ್ಳಲು ಆಗುವುದಿಲ್ಲ. ಕಾನೂನು ಮತ್ತು ವೈದ್ಯಕೀಯ ಶಿಕ್ಷಣ ಎರಡೂ ದೊಡ್ಡ ಖಾತೆಗಳು. ಆದ್ದರಿಂದ ಒಂದನ್ನು ಮಾತ್ರ ಕೊಟ್ಟಿದ್ದಾರೆ. ಕಾನೂನು ಖಾತೆಗೆ ಹೋಲಿಸಿದರೆ ವೈದ್ಯಕೀಯ ಶಿಕ್ಷಣ ನಾಲ್ಕು ಪಟ್ಟು ದೊಡ್ಡ ಖಾತೆ’ ಎಂದರು.</p>.<p><strong>ಖಾತೆ ಮತ್ತೆ ಬದಲಾಯ್ತಾ?: </strong>ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಹಿಂದಕ್ಕೆ ಪಡೆದು ಹಜ್ ಮತ್ತು ವಕ್ಫ್ ಖಾತೆ ನೀಡಿರುವುದರ ಬಗ್ಗೆ ಕೇಳಿದಾಗ, ‘ಹೌದಾ? ಮತ್ತೆ ಬದಲಾಯ್ತಾ? ನಾನು ಬೆಳಿಗ್ಗೆಯೇ ಮನೆ ಬಿಟ್ಟಿದ್ದೆ. ಖಾತೆ ಮತ್ತೆ ಬದಲಾದದ್ದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದರು.</p>.<p><strong>ಸುತ್ತೂರು ಶ್ರೀ ಜತೆ ಮಾತುಕತೆ: </strong>ಸಚಿವ ಮಾಧುಸ್ವಾಮಿ ಮತ್ತು ಶಾಸಕ ಮುನಿರತ್ನ ಅವರು ಶುಕ್ರವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಒಂದು ಗಂಟೆಗೂ ಹೆಚ್ಚು ಹೊತ್ತು ಚರ್ಚಿಸಿದರು.</p>.<p>ಈ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ನಾನು ಮಠದ ಭಕ್ತ. ರಾಜಕಾರಣಿಯಾಗಿ ಇಲ್ಲಿಗೆ ಬಂದಿಲ್ಲ. ಜೆಎಸ್ಎಸ್ ಕಾಲೇಜಿನಲ್ಲಿ ಪದವಿ ಪಡೆದ ದಿನದಿಂದಲೂ ಮಠಕ್ಕೆ ಬರುತ್ತಿರುತ್ತೇನೆ. ಪ್ರತಿ ಬಾರಿ ಬಂದಾಗಲೂ ಸ್ವಾಮೀಜಿ ಜತೆ ತುಂಬಾ ಹೊತ್ತು ಮಾತನಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>