ಬಿಜೆಪಿ ಸರ್ಕಾರವು ಕಾಶಿಯಾತ್ರೆ ಮಾಡಿ ಬಂದವರಿಗೆ ಸರ್ಕಾರದಿಂದ ₹ 5 ಸಾವಿರ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಅವರು ತಿಳಿಸಿದಂತೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ, 2022ರ ಡಿ.15 ರಂದು ಕಾಶಿಗೆ ಹೋಗಿ ಬಂದಿದ್ದೆವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗರೆಡ್ಡಿ ಕಾಶಿಯಾತ್ರೆ ಸಹಾಯ ಧನವನ್ನು ₹ 5 ಸಾವಿರದಿಂದ ₹ 7,500ಕ್ಕೆ ಹೆಚ್ಚಿಸಿರುವುದಾಗಿ ಹೇಳಿಕೆ ನೀಡಿದ್ದರೂ ನಮಗೆ ಈವರೆಗೆ ಸಹಾಯಧನ ಬಂದಿಲ್ಲ ಎಂದು ತಿಳಿಸಿದ್ದಾರೆ.