<p><strong>ಮೈಸೂರು:</strong> ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆ ಪ್ರೇರೇಪಿಸಲು ‘ವಿಪ್ರೋ’ ನೀಡುವ ‘ವಿಪ್ರೋ- ಅರ್ಥಿಯನ್ ಕಾರ್ಯಕ್ರಮ’ದಡಿ ಮೈಸೂರಿನ ಕೌಟಿಲ್ಯ ವಿದ್ಯಾಲಯದ ಮಕ್ಕಳು ಕೌಶಲ ಪ್ರದರ್ಶಿಸಿ ಉತ್ತಮ ಸಾಧನೆ ಮಾಡಿ ದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಶಾಲೆಯ ತಂಡವು ಪ್ರಥಮ ಬಹುಮಾನ, ₹ 1 ಲಕ್ಷ ಬಹುಮಾನ ಗಳಿಸಿದೆ.</p>.<p>ಶಾಲೆಯ 24 ಮಕ್ಕಳ ತಂಡವು ‘ನೀರಿನ ಸದ್ಬಳಕೆ’, ‘ಘನತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ’ ಮತ್ತು ‘ಜೈವಿಕ ತಂತ್ರಜ್ಞಾನ ನಿರ್ವಹಣೆ’ ಕುರಿತು ಸಂಶೋಧನೆ ನಡೆಸಿದ್ದ ವಿದ್ಯಾರ್ಥಿಗಳು ಪ್ರಬಂಧವನ್ನು ವಿಪ್ರೋ ಸಂಸ್ಥೆಗೆ ಸಲ್ಲಿಸಿದ್ದರು.</p>.<p>ತ್ಯಾಜ್ಯ ವಿಲೇವಾರಿ ಕುರಿತ ಪ್ರಬಂಧ ಮೊದಲ ಸ್ಥಾನ ಗಳಿಸಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಅದರ ಭಾಗವಾಗಿ ವಿಪ್ರೋ ಸಂಸ್ಥೆ ಸಂಶೋಧನಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದೆ.</p>.<p>ಕೌಟಿಲ್ಯ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಬಹುಮಾನದ ಮೊತ್ತವನ್ನು ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡ ವಿವಿಧ ತರಗತಿಗಳ ಎಂಟು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.</p>.<p>ಶಿಕ್ಷಣತಜ್ಞ ಡಾ.ಪ್ರಕಾಶ್ ಬಾಬು ಹಾಗೂ ಸಂಸ್ಥೆಯ ಅಧ್ಯಕ್ಷ ಆರ್.ರಘು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಪ್ರಾಂಶು ಪಾಲರಾದ ಡಾ.ಎಲ್.ಸವಿತಾ, ಉಪ ಪ್ರಾಂಶುಪಾ ಲರಾದ ಬಿ.ಬಿ.ರಾಧಿಕಾ, ಇಂಗ್ಲಿಷ್ ಶಿಕ್ಷಕ ಇ. ವೆಂಕಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆ ಪ್ರೇರೇಪಿಸಲು ‘ವಿಪ್ರೋ’ ನೀಡುವ ‘ವಿಪ್ರೋ- ಅರ್ಥಿಯನ್ ಕಾರ್ಯಕ್ರಮ’ದಡಿ ಮೈಸೂರಿನ ಕೌಟಿಲ್ಯ ವಿದ್ಯಾಲಯದ ಮಕ್ಕಳು ಕೌಶಲ ಪ್ರದರ್ಶಿಸಿ ಉತ್ತಮ ಸಾಧನೆ ಮಾಡಿ ದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಶಾಲೆಯ ತಂಡವು ಪ್ರಥಮ ಬಹುಮಾನ, ₹ 1 ಲಕ್ಷ ಬಹುಮಾನ ಗಳಿಸಿದೆ.</p>.<p>ಶಾಲೆಯ 24 ಮಕ್ಕಳ ತಂಡವು ‘ನೀರಿನ ಸದ್ಬಳಕೆ’, ‘ಘನತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ’ ಮತ್ತು ‘ಜೈವಿಕ ತಂತ್ರಜ್ಞಾನ ನಿರ್ವಹಣೆ’ ಕುರಿತು ಸಂಶೋಧನೆ ನಡೆಸಿದ್ದ ವಿದ್ಯಾರ್ಥಿಗಳು ಪ್ರಬಂಧವನ್ನು ವಿಪ್ರೋ ಸಂಸ್ಥೆಗೆ ಸಲ್ಲಿಸಿದ್ದರು.</p>.<p>ತ್ಯಾಜ್ಯ ವಿಲೇವಾರಿ ಕುರಿತ ಪ್ರಬಂಧ ಮೊದಲ ಸ್ಥಾನ ಗಳಿಸಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಅದರ ಭಾಗವಾಗಿ ವಿಪ್ರೋ ಸಂಸ್ಥೆ ಸಂಶೋಧನಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದೆ.</p>.<p>ಕೌಟಿಲ್ಯ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಬಹುಮಾನದ ಮೊತ್ತವನ್ನು ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡ ವಿವಿಧ ತರಗತಿಗಳ ಎಂಟು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.</p>.<p>ಶಿಕ್ಷಣತಜ್ಞ ಡಾ.ಪ್ರಕಾಶ್ ಬಾಬು ಹಾಗೂ ಸಂಸ್ಥೆಯ ಅಧ್ಯಕ್ಷ ಆರ್.ರಘು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಪ್ರಾಂಶು ಪಾಲರಾದ ಡಾ.ಎಲ್.ಸವಿತಾ, ಉಪ ಪ್ರಾಂಶುಪಾ ಲರಾದ ಬಿ.ಬಿ.ರಾಧಿಕಾ, ಇಂಗ್ಲಿಷ್ ಶಿಕ್ಷಕ ಇ. ವೆಂಕಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>