ಹರಿದ ಬಟ್ಟೆಯ ನಡುವೆ ಹಸುವೊಂದು ಆಶಾಭಾವದಿಂದ ನೋಡುವ ಚಿತ್ರವೊಂದಿದ್ದು, ಗೋ ಸಂತತಿಯ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತಿದೆ. ಸದ್ದು ಮಾಡುತ್ತಾ ಸಾಗುತ್ತಿರುವ ರೈಲಿನ ನಡುವೆ ಧ್ಯಾನ ಸ್ಥಿತಿಯಲ್ಲಿರುವ ಬುದ್ಧ, ಸಂಚಾರಿ ವ್ಯವಸ್ಥೆಯಲ್ಲಿನ ಬದಲಾವಣೆಯ ಚಿತ್ರಗಳು ನಮ್ಮನ್ನು ಚಿಂತನೆಯಲ್ಲಿ ತೊಡಗುವಂತೆ ಮಾಡುತ್ತವೆ.