ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 'ಆ ವಿಶ್ವಗುರು (ನರೇಂದ್ರ ಮೋದಿ) ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಅಂತಾರೆ, ಅವರ ಚೇಲಾ ಕಟೀಲ್ ಕಾಂಗ್ರೆಸ್ ನಿಷೇಧ ಮಾಡಿ ಎನ್ನುತ್ತಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ, ಮಂಗಳೂರಿನಲ್ಲಿ ಪಿಎಫ್ಐ - ಎಸ್ಡಿಪಿಐ ಜೊತೆ ಯಾರಿಗೆ ಸಂಬಂಧವಿದೆ ಎನ್ನುವುದು ಗೊತ್ತಾಗುತ್ತದೆ' ಎಂದರು.