<p>ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಕಿರಂಗೂರು ಗ್ರಾಮದ ಕೊಟ್ಟಿಗೆಗೆ ಬುಧವಾರ ರಾತ್ರಿ ನುಗ್ಗಿದ ಚಿರತೆ ಹಸುವೊಂದನ್ನು ಕೊಂದು ಹಾಕಿದೆ.</p>.<p>ಗ್ರಾಮದ ಚಿನ್ನಸ್ವಾಮಿ ತಮ್ಮ ಮನೆಯ ಕೊಟ್ಟಿಗೆಯಲ್ಲಿ ಹಸು ಕಟ್ಟಿದ್ದರು. ಅದು ರಾತ್ರಿ ಕಿರುಚಾಡಿದಾಗ ಎಚ್ಚರಗೊಂಡು ಹೋಗಿ ನೋಡಿ, ಕೂಗಾಡಿ ಪಕ್ಕದ ಮನೆಯವರನ್ನು ಸೇರಿಸುವಷ್ಟರಲ್ಲಿ ಚಿರತೆ ಹಸು ಕೊಂದು ಹೋಗಿದೆ. ಇದರಿಂದ ಮತ್ತೆ ಯಾವಾಗ ಚಿರತೆ ದಾಳಿ ಮಾಡುವುದೋ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.</p>.<p>₹ 50 ಸಾವಿರ ಬೆಲೆಯ ಹಸು ಹೋಯಿತು ಎಂದು ಚಿನ್ನಸ್ವಾಮಿ ತಿಳಿಸಿದರು.</p>.<p>ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ದ್ವಾರಕನಾಥ್ ಮತ್ತು ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಕಿರಂಗೂರು ಗ್ರಾಮದ ಕೊಟ್ಟಿಗೆಗೆ ಬುಧವಾರ ರಾತ್ರಿ ನುಗ್ಗಿದ ಚಿರತೆ ಹಸುವೊಂದನ್ನು ಕೊಂದು ಹಾಕಿದೆ.</p>.<p>ಗ್ರಾಮದ ಚಿನ್ನಸ್ವಾಮಿ ತಮ್ಮ ಮನೆಯ ಕೊಟ್ಟಿಗೆಯಲ್ಲಿ ಹಸು ಕಟ್ಟಿದ್ದರು. ಅದು ರಾತ್ರಿ ಕಿರುಚಾಡಿದಾಗ ಎಚ್ಚರಗೊಂಡು ಹೋಗಿ ನೋಡಿ, ಕೂಗಾಡಿ ಪಕ್ಕದ ಮನೆಯವರನ್ನು ಸೇರಿಸುವಷ್ಟರಲ್ಲಿ ಚಿರತೆ ಹಸು ಕೊಂದು ಹೋಗಿದೆ. ಇದರಿಂದ ಮತ್ತೆ ಯಾವಾಗ ಚಿರತೆ ದಾಳಿ ಮಾಡುವುದೋ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.</p>.<p>₹ 50 ಸಾವಿರ ಬೆಲೆಯ ಹಸು ಹೋಯಿತು ಎಂದು ಚಿನ್ನಸ್ವಾಮಿ ತಿಳಿಸಿದರು.</p>.<p>ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ದ್ವಾರಕನಾಥ್ ಮತ್ತು ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>