‘ಈ ವರ್ಷವೂ ನಮ್ಮ ಕೈ ಸುಟ್ಟುಕೊಳ್ಳಲು ಈಗಾಗಲೇ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಆದರೆ, ಜನರ ಚಿತೆ ಸುಡೋದು ಮೊದಲು ನಿಲ್ಲಲಿ ಎಂಬುದೇ ನಮ್ಮಾಶಯ. ನಮಗಾಗುವ ಕಷ್ಟ–ನಷ್ಟಕ್ಕಿಂತ ಜನರ ಜೀವ ದೊಡ್ಡದು. ಎಲ್ಲರೂ ಆರೋಗ್ಯ ದಿಂದಿದ್ದರಷ್ಟೇ ನಮ್ಮ ಬದುಕು ನಡೆಯೋದು. ಆಗಲೇ ಅದಕ್ಕೊಂದು ಸಾರ್ಥಕಭಾವ ದೊರಕೋದು. ಸೂತಕದ ಬೀದಿಯಲ್ಲಿ ಹಣ್ಣು ಮಾರೋಕೆ ಮನಸ್ಸಾಗಲ್ಲ’ ಎಂದು ಶ್ರೀನಿವಾಸ್ ಹೇಳಿದ್ದಕ್ಕೆ, ರಮೇಶ್ ಧ್ವನಿಗೂಡಿಸಿದರು.