<p><strong>ಮೈಸೂರು</strong>: ನಗರದ ಪುರಭವನ ಎದುರಿನ ಪಾರಂಪರಿಕ ಹೆಗ್ಗುರುತು ‘ದೊಡ್ಡ ಗಡಿಯಾರ’ಕ್ಕೆ ಸಿಡಿಲಾಘಾತದ ಅಪಾಯ ಎದುರಾಗಿದೆ. ಅರ್ಥಿಂಗ್ ವ್ಯವಸ್ಥೆ ಇಲ್ಲವಾಗಿದ್ದು, ದುರಸ್ತಿ ವೇಳೆ ನಾಲ್ಕು ಕಿರು ಗುಮ್ಮಟಗಳೂ ಮಾಯವಾಗಿವೆ. </p>.<p>ಶಿಥಿಲಗೊಂಡಿದ್ದ ದೊಡ್ಡ ಗಡಿಯಾರ ಕಟ್ಟಡ ದುರಸ್ತಿಗೆ ಪಾಲಿಕೆಯು ವರ್ಷದ ಹಿಂದೆ ₹ 38 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಕಾಮಗಾರಿ ಪೂರ್ಣಗೊಂಡಿದ್ದರೂ ಕಟ್ಟಡಕ್ಕೆ ಸಿಡಿಲಾಘಾತ ತಾಳಿಕೊಳ್ಳುವ ಶಕ್ತಿಯನ್ನು ಅಳವಡಿಸಿಲ್ಲ.</p>.<p>ಕಟ್ಟಡ ನಿರ್ಮಾಣಗೊಂಡಾಗ ಸಿಡಿಲಿನಿಂದ ರಕ್ಷಣೆಗೆ ಎರಡು ಇಂಚಿನ ತಾಮ್ರದ ತಂತಿಯನ್ನು ಗ್ರೌಂಡಿಂಗ್ ಮಾಡಲಾಗಿತ್ತು. ಅದರ ಅರ್ಧ ಭಾಗ ಕಳವಾಗಿತ್ತು. ದುರಸ್ತಿ ವೇಳೆ ಅಳವಡಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಕೆಲಸವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮಾಡಿಲ್ಲ.</p>.<p>‘ಅರ್ಥಿಂಗ್ಗೆ ತಾಮ್ರದ ತಂತಿಯನ್ನೇ ಬಳಸಬೇಕು. ಈ ಹಿಂದೆ ಅಳವಡಿಸಿದ್ದ ತಾಮ್ರದ ಪಟ್ಟಿಯು ತುಂಡಾಗಿದೆ. ದುರಸ್ತಿ ವೇಳೆ ತುಂಡಾಗಿರುವ ತಂತಿ ಸರಿಪಡಿಸುವ, ಇಲ್ಲವೇ ಹೊಸದಾಗಿ ಅಳವಡಿಸುವ ಕೆಲಸವನ್ನು ಗುತ್ತಿಗೆದಾರರು ಮಾಡಬೇಕಿತ್ತು’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮರದ ಅರಮನೆಗೂ ಹಿಂದೆ ಟಿಪ್ಪು ಕಾಲದಲ್ಲಿದ್ದ ಸೌಂದರ್ಯ ವಿಲಾಸ ಅರಮನೆಯು 1794ರಲ್ಲಿ ಸಿಡಿಲು ಬಡಿದು ನಾಶವಾಗಿತ್ತು. ಅದೇ ಪರಿಸ್ಥಿತಿ ದೊಡ್ಡಗಡಿಯಾರಕ್ಕೂ ಬರಬಹುದು. ತಂತಿಯ ಮೇಲಿನ ಭಾಗದಲ್ಲೂ ಪಟ್ಟಿ ಬಿಳಿ ಬಣ್ಣಕ್ಕೆ ತಿರುಗಿದೆ. ಪಾಲಿಕೆಯು ಎಚ್ಚೆತ್ತುಕೊಳ್ಳಬೇಕು’ ಎಂದರು. </p>.<p>1927ರಲ್ಲಿ ನಿರ್ಮಾಣ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ರಜತ ಮಹೋತ್ಸವದ ನೆನಪಿನಲ್ಲಿ 1927ರಲ್ಲಿ ರಾಜಸ್ಥಾನದ ಮರಳು ಶಿಲೆ ಹಾಗೂ ಸುರ್ಕಿಗಾರೆ ಬಳಸಿ ದೊಡ್ಡಗಡಿಯಾರ ನಿರ್ಮಿಸಲಾಗಿತ್ತು.</p>.<p>ಗೋಪುರದ ಕಮಾನಿನಲ್ಲಿ ಬಳಸಲಾದ ಕಬ್ಬಿಣ ತುಕ್ಕು ಹಿಡಿದು ಬಿರುಕು ಮೂಡಿತ್ತು. ನೆಲಮಟ್ಟದಲ್ಲಿ ಹೆಗ್ಗಣಗಳು ಬಿಲ ತೋಡಿ ಕಟ್ಟಡವನ್ನು ಮತ್ತಷ್ಟು ಶಿಥಿಲಗೊಳಿಸಿದ್ದವು. ಗಡಿಯಾರದ ಗೋಪುರದಲ್ಲಿನ ಗಂಟೆ ಸದ್ದು ದಶಕದ ಹಿಂದೆಯೇ ನಿಲ್ಲಿಸಲಾಗಿದೆ. </p>.<p> 98 ವರ್ಷದ ಐತಿಹಾಸಿಕ ಕಟ್ಟಡ ವರ್ಷದ ಹಿಂದೆ ದುರಸ್ತಿ ಆರಂಭ ಅಳವಡಿಕೆಯಾಗದ ತಾಮ್ರದ ತಂತಿ</p>.<div><blockquote>- ಪಾರಂಪರಿಕ ಕಟ್ಟಡವಾದ್ದರಿಂದ ದುರಸ್ತಿಗೆ ಪುರಾತತ್ವ ಇಲಾಖೆಗೆ ವಹಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿದ್ದು ಪರಿಶೀಲನೆ ನಡೆಸಲಾಗುವುದು </blockquote><span class="attribution">ಕೆ.ಜೆ.ಸಿಂಧು ಪಾಲಿಕೆ ಉಪ ಆಯುಕ್ತೆ (ಅಭಿವೃದ್ಧಿ)</span></div>.<p>ಅನುಭವಿಗಳಿಗೆ ಕಾಮಗಾರಿ ವಹಿಸುತ್ತಿಲ್ಲ’ ‘ಪಾಲಿಕೆಯು ದೊಡ್ಡಗಡಿಯಾರ ದುರಸ್ತಿಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ನೀಡಿತ್ತು. ಆ ಇಲಾಖೆಯವರು ದುರಸ್ತಿಯನ್ನು ಅನುಭವಿ ಗುತ್ತಿಗೆದಾರರಿಗೆ ವಹಿಸಿಲ್ಲ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ದೂರಿದರು. ‘ಗಡಿಯಾರದ ಮೇಲ್ಪಾಗದಲ್ಲಿನ ಚೌಕಿಯ ನಾಲ್ಕು ಮೂಲೆಗಳಲ್ಲಿ ಕಿರು ಗೋಪುರಗಳಿದ್ದವು. ಅವುಗಳಲ್ಲಿ ಒಂದು ಉರುಳಿತ್ತು. ದುರಸ್ತಿ ವೇಳೆ ಉಳಿದ ಮೂರನ್ನೂ ಇಲ್ಲವಾಗಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ನಗರದ ಪುರಭವನ ಎದುರಿನ ಪಾರಂಪರಿಕ ಹೆಗ್ಗುರುತು ‘ದೊಡ್ಡ ಗಡಿಯಾರ’ಕ್ಕೆ ಸಿಡಿಲಾಘಾತದ ಅಪಾಯ ಎದುರಾಗಿದೆ. ಅರ್ಥಿಂಗ್ ವ್ಯವಸ್ಥೆ ಇಲ್ಲವಾಗಿದ್ದು, ದುರಸ್ತಿ ವೇಳೆ ನಾಲ್ಕು ಕಿರು ಗುಮ್ಮಟಗಳೂ ಮಾಯವಾಗಿವೆ. </p>.<p>ಶಿಥಿಲಗೊಂಡಿದ್ದ ದೊಡ್ಡ ಗಡಿಯಾರ ಕಟ್ಟಡ ದುರಸ್ತಿಗೆ ಪಾಲಿಕೆಯು ವರ್ಷದ ಹಿಂದೆ ₹ 38 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಕಾಮಗಾರಿ ಪೂರ್ಣಗೊಂಡಿದ್ದರೂ ಕಟ್ಟಡಕ್ಕೆ ಸಿಡಿಲಾಘಾತ ತಾಳಿಕೊಳ್ಳುವ ಶಕ್ತಿಯನ್ನು ಅಳವಡಿಸಿಲ್ಲ.</p>.<p>ಕಟ್ಟಡ ನಿರ್ಮಾಣಗೊಂಡಾಗ ಸಿಡಿಲಿನಿಂದ ರಕ್ಷಣೆಗೆ ಎರಡು ಇಂಚಿನ ತಾಮ್ರದ ತಂತಿಯನ್ನು ಗ್ರೌಂಡಿಂಗ್ ಮಾಡಲಾಗಿತ್ತು. ಅದರ ಅರ್ಧ ಭಾಗ ಕಳವಾಗಿತ್ತು. ದುರಸ್ತಿ ವೇಳೆ ಅಳವಡಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಕೆಲಸವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮಾಡಿಲ್ಲ.</p>.<p>‘ಅರ್ಥಿಂಗ್ಗೆ ತಾಮ್ರದ ತಂತಿಯನ್ನೇ ಬಳಸಬೇಕು. ಈ ಹಿಂದೆ ಅಳವಡಿಸಿದ್ದ ತಾಮ್ರದ ಪಟ್ಟಿಯು ತುಂಡಾಗಿದೆ. ದುರಸ್ತಿ ವೇಳೆ ತುಂಡಾಗಿರುವ ತಂತಿ ಸರಿಪಡಿಸುವ, ಇಲ್ಲವೇ ಹೊಸದಾಗಿ ಅಳವಡಿಸುವ ಕೆಲಸವನ್ನು ಗುತ್ತಿಗೆದಾರರು ಮಾಡಬೇಕಿತ್ತು’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮರದ ಅರಮನೆಗೂ ಹಿಂದೆ ಟಿಪ್ಪು ಕಾಲದಲ್ಲಿದ್ದ ಸೌಂದರ್ಯ ವಿಲಾಸ ಅರಮನೆಯು 1794ರಲ್ಲಿ ಸಿಡಿಲು ಬಡಿದು ನಾಶವಾಗಿತ್ತು. ಅದೇ ಪರಿಸ್ಥಿತಿ ದೊಡ್ಡಗಡಿಯಾರಕ್ಕೂ ಬರಬಹುದು. ತಂತಿಯ ಮೇಲಿನ ಭಾಗದಲ್ಲೂ ಪಟ್ಟಿ ಬಿಳಿ ಬಣ್ಣಕ್ಕೆ ತಿರುಗಿದೆ. ಪಾಲಿಕೆಯು ಎಚ್ಚೆತ್ತುಕೊಳ್ಳಬೇಕು’ ಎಂದರು. </p>.<p>1927ರಲ್ಲಿ ನಿರ್ಮಾಣ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ರಜತ ಮಹೋತ್ಸವದ ನೆನಪಿನಲ್ಲಿ 1927ರಲ್ಲಿ ರಾಜಸ್ಥಾನದ ಮರಳು ಶಿಲೆ ಹಾಗೂ ಸುರ್ಕಿಗಾರೆ ಬಳಸಿ ದೊಡ್ಡಗಡಿಯಾರ ನಿರ್ಮಿಸಲಾಗಿತ್ತು.</p>.<p>ಗೋಪುರದ ಕಮಾನಿನಲ್ಲಿ ಬಳಸಲಾದ ಕಬ್ಬಿಣ ತುಕ್ಕು ಹಿಡಿದು ಬಿರುಕು ಮೂಡಿತ್ತು. ನೆಲಮಟ್ಟದಲ್ಲಿ ಹೆಗ್ಗಣಗಳು ಬಿಲ ತೋಡಿ ಕಟ್ಟಡವನ್ನು ಮತ್ತಷ್ಟು ಶಿಥಿಲಗೊಳಿಸಿದ್ದವು. ಗಡಿಯಾರದ ಗೋಪುರದಲ್ಲಿನ ಗಂಟೆ ಸದ್ದು ದಶಕದ ಹಿಂದೆಯೇ ನಿಲ್ಲಿಸಲಾಗಿದೆ. </p>.<p> 98 ವರ್ಷದ ಐತಿಹಾಸಿಕ ಕಟ್ಟಡ ವರ್ಷದ ಹಿಂದೆ ದುರಸ್ತಿ ಆರಂಭ ಅಳವಡಿಕೆಯಾಗದ ತಾಮ್ರದ ತಂತಿ</p>.<div><blockquote>- ಪಾರಂಪರಿಕ ಕಟ್ಟಡವಾದ್ದರಿಂದ ದುರಸ್ತಿಗೆ ಪುರಾತತ್ವ ಇಲಾಖೆಗೆ ವಹಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿದ್ದು ಪರಿಶೀಲನೆ ನಡೆಸಲಾಗುವುದು </blockquote><span class="attribution">ಕೆ.ಜೆ.ಸಿಂಧು ಪಾಲಿಕೆ ಉಪ ಆಯುಕ್ತೆ (ಅಭಿವೃದ್ಧಿ)</span></div>.<p>ಅನುಭವಿಗಳಿಗೆ ಕಾಮಗಾರಿ ವಹಿಸುತ್ತಿಲ್ಲ’ ‘ಪಾಲಿಕೆಯು ದೊಡ್ಡಗಡಿಯಾರ ದುರಸ್ತಿಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ನೀಡಿತ್ತು. ಆ ಇಲಾಖೆಯವರು ದುರಸ್ತಿಯನ್ನು ಅನುಭವಿ ಗುತ್ತಿಗೆದಾರರಿಗೆ ವಹಿಸಿಲ್ಲ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ದೂರಿದರು. ‘ಗಡಿಯಾರದ ಮೇಲ್ಪಾಗದಲ್ಲಿನ ಚೌಕಿಯ ನಾಲ್ಕು ಮೂಲೆಗಳಲ್ಲಿ ಕಿರು ಗೋಪುರಗಳಿದ್ದವು. ಅವುಗಳಲ್ಲಿ ಒಂದು ಉರುಳಿತ್ತು. ದುರಸ್ತಿ ವೇಳೆ ಉಳಿದ ಮೂರನ್ನೂ ಇಲ್ಲವಾಗಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>