ವನ್ಯಜೀವಿ ಓಡಾಟ ಹೆಚ್ಚಿರುವ ಕಡೆಗಳಲ್ಲೂ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗಲಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು.
–ಡಾ. ಕೆ.ವಿ. ರಾಜೇಂದ್ರ ಜಿಲ್ಲಾಧಿಕಾರಿ, ಮೈಸೂರು
ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ 52 ಮತಗಟ್ಟೆಗಳಲ್ಲಿ ವನ್ಯಜೀವಿ ಓಡಾಟ ಹೆಚ್ಚಿದ್ದು, ಅಂತಹ ಕಡೆಗಳಲ್ಲಿ ಗುರುವಾರ ಸಂಜೆಯಿಂದಲೇ ನಮ್ಮ ಸಿಬ್ಬಂದಿ ಇರಲಿದ್ದಾರೆ. ಕಾಡುಪ್ರಾಣಿಗಳ ಓಡಾಟದ ಮೇಲೆ ನಿಗಾ ವಹಿಸಲಿದ್ದಾರೆ.