‘ಮಗ ಆಕಾಂಕ್ಷಿ: ಹೈಕಮಾಂಡ್ ತೀರ್ಮಾನವೇ ಅಂತಿಮ’
‘ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಸಿಗಬೇಕು. ಮಗ ಸುನೀಲ್ ಕೂಡ ಕೆಲಸ ಮಾಡಿದ್ದಾನೆ ಆಕಾಂಕ್ಷಿಯೂ ಆಗಿದ್ದಾನೆ. ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದು ಹಲವು ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಮಹದೇವಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನಂಜನಗೂಡು ಉಪ ಚುನಾವಣೆ ಸೇರಿದಂತೆ ಮೂರು ವಿಧಾನಸಭೆ ಚುನಾವಣೆಯಲ್ಲೂ ಆತ ಟಿಕೆಟ್ ಬಯಸಿದ್ದ. ಆದರೆ ಸಿಕ್ಕಿಲ್ಲ. ಹಾಗೆಂದು ಸಂಘಟನೆ ಬಿಟ್ಟಿಲ್ಲ. ಮುನಿಸಿಕೊಳ್ಳದೆ ಪಕ್ಷದ ಕೆಲಸ ಮಾಡುತ್ತಿದ್ದಾನೆ’ ಎಂದರು.