ಮೈಸೂರು: ನಗರ ಪೊಲೀಸ್ ಕಮಿಷನರ್ ಚಂದ್ರಗುಪ್ತ ಹಾಗೂ ಕೆಎಸ್ಆರ್ಪಿ ಎಸಿಪಿ ಭರತ್ ರಾಜ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೆಲವು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು.
ರಿಷ್ಯಂತ್ ಅವರಿಗೆ ಸೋಂಕು ದೃಢಪಡುವುದಕ್ಕೂ ಕೆಲ ದಿನಗಳ ಹಿಂದೆಯಷ್ಟೆ ಅವರೊಂದಿಗೆ ಕಮಿಷನರ್ ಚಂದ್ರಗುಪ್ತ ಅವರು ಸಭೆ ನಡೆಸಿದ್ದರು. ಹೀಗಾಗಿ ಯಾವುದೇ ಲಕ್ಷಣಗಳು ಇರದಿದ್ದರೂ ತಪಾಸಣೆಗೆ ಒಳಗಾದಾಗ ಸೋಂಕು ದೃಢಪಟ್ಟಿದೆ.