<p><strong>ಮೈಸೂರು</strong>: ಬೆಂಗಳೂರಿನ ಯುವ ಗಾಲ್ಫರ್ ಶೌರ್ಯ ಬಿನು ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ‘ಮೈಸೂರು ಓಪನ್–2024’ ಗಾಲ್ಫ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p>ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ನಡೆದ ಟೂರ್ನಿಯ ಕಡೆಯ ಎರಡು ದಿನಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ (ಸ್ಕೋರ್: 23 ಅಂಡರ್ 257 ) ಶೌರ್ಯ ₹15 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಅವರು ಈ ವರ್ಷ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. ಫೆಬ್ರುವರಿಯಲ್ಲಿ ಊಟಿಯಲ್ಲಿ ನಡೆದ ಪಿಜಿಟಿಎ ಟೂರ್ನಿಯಲ್ಲೂ ಅವರು ಪ್ರಶಸ್ತಿ ಪಡೆದಿದ್ದರು.</p>.<p>ಪಟ್ನಾದ ಗಾಲ್ಫರ್ ಅಮನ್ ರಾಜ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಆಗಿ ₹10 ಲಕ್ಷ ಬಹುಮಾನ ಗಳಿಸಿದರು. ಮೊದಲ ಎರಡು ದಿನ ಮುನ್ನಡೆಯಲ್ಲಿದ್ದ 29 ವರ್ಷ ವಯಸ್ಸಿನ ಈ ಆಟಗಾರ ಕಡೆಯ ದಿನ ಮುನ್ನಡೆ ಕೈಚೆಲ್ಲಿ ನಿರಾಸೆ ಅನುಭವಿಸಿದರು.</p>.<p>ಮೈಸೂರಿನ ಹವ್ಯಾಸಿ ಗಾಲ್ಫರ್ ವೀರ್ ಗಣಪತಿ ಚೇತೋಹಾರಿ ಪ್ರದರ್ಶನದ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದ 17 ವರ್ಷ ವಯಸ್ಸಿನ ಈ ಆಟಗಾರ ಟೂರ್ನಿಯ ‘ಉತ್ತಮ ಉತ್ತಮ ಹವ್ಯಾಸಿ ಗಾಲ್ಫರ್’ ಗೌರವಕ್ಕೂ ಪಾತ್ರರಾದರು.</p>.<p>ಮೈಸೂರಿನ ಆಟಗಾರರಾದ ಆರ್ಯನ್ ರೂಪ ಆನಂದ್ 17ನೇ, ಐ.ಎಲ್.ಆಲಾಪ್ 30ನೇ ಹಾಗೂ ಎಂ.ಎಸ್. ಯಶಸ್ ಚಂದ್ರ 36ನೇ ಸ್ಥಾನ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಬೆಂಗಳೂರಿನ ಯುವ ಗಾಲ್ಫರ್ ಶೌರ್ಯ ಬಿನು ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ‘ಮೈಸೂರು ಓಪನ್–2024’ ಗಾಲ್ಫ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p>ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ನಡೆದ ಟೂರ್ನಿಯ ಕಡೆಯ ಎರಡು ದಿನಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ (ಸ್ಕೋರ್: 23 ಅಂಡರ್ 257 ) ಶೌರ್ಯ ₹15 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಅವರು ಈ ವರ್ಷ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. ಫೆಬ್ರುವರಿಯಲ್ಲಿ ಊಟಿಯಲ್ಲಿ ನಡೆದ ಪಿಜಿಟಿಎ ಟೂರ್ನಿಯಲ್ಲೂ ಅವರು ಪ್ರಶಸ್ತಿ ಪಡೆದಿದ್ದರು.</p>.<p>ಪಟ್ನಾದ ಗಾಲ್ಫರ್ ಅಮನ್ ರಾಜ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಆಗಿ ₹10 ಲಕ್ಷ ಬಹುಮಾನ ಗಳಿಸಿದರು. ಮೊದಲ ಎರಡು ದಿನ ಮುನ್ನಡೆಯಲ್ಲಿದ್ದ 29 ವರ್ಷ ವಯಸ್ಸಿನ ಈ ಆಟಗಾರ ಕಡೆಯ ದಿನ ಮುನ್ನಡೆ ಕೈಚೆಲ್ಲಿ ನಿರಾಸೆ ಅನುಭವಿಸಿದರು.</p>.<p>ಮೈಸೂರಿನ ಹವ್ಯಾಸಿ ಗಾಲ್ಫರ್ ವೀರ್ ಗಣಪತಿ ಚೇತೋಹಾರಿ ಪ್ರದರ್ಶನದ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದ 17 ವರ್ಷ ವಯಸ್ಸಿನ ಈ ಆಟಗಾರ ಟೂರ್ನಿಯ ‘ಉತ್ತಮ ಉತ್ತಮ ಹವ್ಯಾಸಿ ಗಾಲ್ಫರ್’ ಗೌರವಕ್ಕೂ ಪಾತ್ರರಾದರು.</p>.<p>ಮೈಸೂರಿನ ಆಟಗಾರರಾದ ಆರ್ಯನ್ ರೂಪ ಆನಂದ್ 17ನೇ, ಐ.ಎಲ್.ಆಲಾಪ್ 30ನೇ ಹಾಗೂ ಎಂ.ಎಸ್. ಯಶಸ್ ಚಂದ್ರ 36ನೇ ಸ್ಥಾನ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>