ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು ದಸರಾ | ಪಂಜಿನ ಕವಾಯತು: ಈ ಬಾರಿ ಬೈಕ್‌ ಸ್ಟಂಟ್‌ ಇಲ್ಲ

Published : 19 ಸೆಪ್ಟೆಂಬರ್ 2025, 3:11 IST
Last Updated : 19 ಸೆಪ್ಟೆಂಬರ್ 2025, 3:11 IST
ಫಾಲೋ ಮಾಡಿ
Comments
ಶಂಕರೇ ಗೌಡ
ಶಂಕರೇ ಗೌಡ
ಪಂಜಿನ ಕವಾಯತಿನಲ್ಲಿ ನಡೆಯುತ್ತಿದ್ದ ಬೈಕ್‌ ಸ್ಟಂಟ್‌ ಜನರಿಗೆ ಖುಷಿ ಕೊಡುತ್ತಿತ್ತು.
ಅದು ಏರ್‌ ಶೋನಷ್ಟೇ ಪ್ರಖ್ಯಾತಿ ಪಡೆದಿದೆ. ಹೀಗಾಗಿ ಉಪಸಮಿತಿಯು ಬೈಕ್‌ ಸ್ಟಂಟ್‌ ನಿಲ್ಲಿಸಬಾರದು
ಶಂಕರೇಗೌಡ, ನಿವೃತ್ತ ಎಸ್‌ಪಿ
ಸೀಮಾ ಲಾಟ್ಕರ್
ಸೀಮಾ ಲಾಟ್ಕರ್
ಕಳೆದ ವರ್ಷ ಮಳೆಯಿಂದಾಗಿ ಬೈಕ್‌ ಸ್ಟಂಟ್‌ ಎರಡೂ ಮುಕ್ಕಾಲು ಗಂಟೆ ತಡವಾಯಿತು. ಈ ಬಾರಿಯೂ ಮಳೆ ಬಂದರೆ ಕಷ್ಟವಾಗುತ್ತದೆ. ಕವಾಯತಿನ ಇನ್ನಿತರ ಕಾರ್ಯಕ್ರಮಗಳಿಗೂ ತೊಂದರೆಯಾಗುತ್ತದೆಂದು ‌ರದ್ದುಗೊಳಿಸಲಾಗಿದೆ
ಸೀಮಾ ಲಾಟ್ಕರ್‌ ನಗರ ಪೊಲೀಸ್‌ ಆಯುಕ್ತೆ
1982 ರಲ್ಲಿ ಆರಂಭವಾದ ಸಾಹಸ ಕ್ರೀಡೆ..!
ಬೈಕ್‌ ಸ್ಟಂಟ್‌ ಸಾಹಸ ಕ್ರೀಡೆಯು 1982ರಲ್ಲಿ ಮೈಸೂರು ದಸರಾದ ಪಂಜಿನ ಕವಾಯತಿಗೆ ಪರಿಚಯಿಸಲಾಗಿತ್ತು. ‘1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಪಂಜಿನ ಕವಾಯತು ಆರಂಭಗೊಂಡಿತು. 1953ರಿಂದ ಸರ್ಕಾರ ಅದನ್ನು ಮುಂದುವರೆಸಿತು. 1982ರಲ್ಲಿ ಆಗಿನ ದಕ್ಷಿಣ ವಲಯ ಡಿಐಜಿ ಎಸ್‌ಎನ್‌ಎಸ್‌ ಮೂರ್ತಿ ಹಾಗೂ ಎಸ್‌ಪಿ ರೇವಣ್ಣ ಸಿದ್ದಯ್ಯ ಆಡಳಿತಾವಧಿಯಲ್ಲಿ ಬೈಕ್‌ ಸ್ಟಂಟ್‌ ಸಾಹಸ ಕ್ರೀಡೆಯನ್ನು ಆರಂಭಿಸಲಾಯಿತು’ ಎಂದು ಮೊದಲ ಬಾರಿ ಬೈಕ್‌ ಸ್ಟಂಟ್‌ ನಡೆದಾಗ ವೀಕ್ಷಕ ವಿವರಣೆ ನೀಡಿದ್ದ ನಿವೃತ್ತ ಡಿವೈಎಸ್‌ಪಿ ಜೆ.ಬಿ.ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಮೂಲಕ 43 ವರ್ಷದ ಪರಂಪರೆಯೊಂದು ಕೊನೆಗೊಳ್ಳುವ ಹಂತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT