<p><strong>ಮೈಸೂರು:</strong> ‘ಹೃದಯಾಘಾತ, ಪಾರ್ಶ್ವವಾಯು ಅಥವಾ ಗಂಭೀರ ಅಪಘಾತಗಳಂಥ ತುರ್ತು ಸಂದರ್ಭಗಳಲ್ಲಿ ಮೊದಲ ಕೆಲವು ನಿಮಿಷಗಳಲ್ಲೇ ಸರಿಯಾಗಿ ಚಿಕಿತ್ಸೆ ನೀಡುವುದು ವ್ಯಕ್ತಿಯ ಪ್ರಾಣ ಉಳಿಸುವಲ್ಲಿ ಅತ್ಯಗತ್ಯ’ ಎಂದು ನಗರದ ಮಣಿಪಾಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ಮಕ್ಸೂದ್ ಅಹಮದ್ ಎ.ಆರ್. ತಿಳಿಸಿದರು.</p>.<p>ಆಸ್ಪತ್ರೆಯಿಂದ ‘ತುರ್ತು ಪ್ರತಿಕ್ರಿಯೆ ಮತ್ತು ಮೂಲಭೂತ ಜೀವ ರಕ್ಷಣೆ’ ಕುರಿತು ಈಚೆಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಇಂಥ ಸಂದರ್ಭದಲ್ಲಿ ಹತ್ತಿರದಲ್ಲಿರುವವರು ಸಮಯ ವ್ಯರ್ಥ ಮಾಡದೇ ಕೂಡಲೇ ತುರ್ತು ಸೇವೆಗೆ ಕರೆ ಮಾಡಬೇಕು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಇದರಿಂದ ತೀವ್ರ ಅಂಗವೈಕಲ್ಯ ಮತ್ತು ಓಡಾಡಲು ಸಾಧ್ಯವಾಗದ ಸ್ಥಿತಿಯನ್ನು ತಡೆಯಬಹುದು’ ಎಂದು ವಿವರಿಸಿದರು.</p>.<p>ಹೃದ್ರೋಗ ತಜ್ಞ ಡಾ.ಶರತ್ ಬಾಬು ಎನ್.ಎಂ., ‘ಜನರಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆಯ ಅರಿವಿದ್ದರೆ ತಮ್ಮ ಸಮೀಪದಲ್ಲಿ ನಡೆಯುವ ಹೃದಯಾಘಾತ ಪ್ರಕರಣದ ರೋಗಿಯನ್ನು ಬದುಕಿಸಲು ಸಹಕರಿಸಬಹುದು’ ಎಂದರು.</p>.<p>ತುರ್ತು ಚಿಕಿತ್ಸಾ ತಂಡದವರಾದ ಡಾ.ಸೈಯದ್ ಮುಶೀರುದ್ದೀನ್, ಡಾ.ಗೌತಮ್ ಚಂದ್ರ, ಡಾ.ರಾಯಲ ಸಗುಣ ದತ್ತ ಮತ್ತು ಡಾ.ಅಮೀನಾ ಹುಸ್ನಾ ಅವರು ಪ್ರಥಮ ಚಿಕಿತ್ಸೆ ನೀಡಿ ಹೇಗೆ ಸಹಾಯ ಮಾಡಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. 110ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಹೃದಯಾಘಾತ, ಪಾರ್ಶ್ವವಾಯು ಅಥವಾ ಗಂಭೀರ ಅಪಘಾತಗಳಂಥ ತುರ್ತು ಸಂದರ್ಭಗಳಲ್ಲಿ ಮೊದಲ ಕೆಲವು ನಿಮಿಷಗಳಲ್ಲೇ ಸರಿಯಾಗಿ ಚಿಕಿತ್ಸೆ ನೀಡುವುದು ವ್ಯಕ್ತಿಯ ಪ್ರಾಣ ಉಳಿಸುವಲ್ಲಿ ಅತ್ಯಗತ್ಯ’ ಎಂದು ನಗರದ ಮಣಿಪಾಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ಮಕ್ಸೂದ್ ಅಹಮದ್ ಎ.ಆರ್. ತಿಳಿಸಿದರು.</p>.<p>ಆಸ್ಪತ್ರೆಯಿಂದ ‘ತುರ್ತು ಪ್ರತಿಕ್ರಿಯೆ ಮತ್ತು ಮೂಲಭೂತ ಜೀವ ರಕ್ಷಣೆ’ ಕುರಿತು ಈಚೆಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಇಂಥ ಸಂದರ್ಭದಲ್ಲಿ ಹತ್ತಿರದಲ್ಲಿರುವವರು ಸಮಯ ವ್ಯರ್ಥ ಮಾಡದೇ ಕೂಡಲೇ ತುರ್ತು ಸೇವೆಗೆ ಕರೆ ಮಾಡಬೇಕು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಇದರಿಂದ ತೀವ್ರ ಅಂಗವೈಕಲ್ಯ ಮತ್ತು ಓಡಾಡಲು ಸಾಧ್ಯವಾಗದ ಸ್ಥಿತಿಯನ್ನು ತಡೆಯಬಹುದು’ ಎಂದು ವಿವರಿಸಿದರು.</p>.<p>ಹೃದ್ರೋಗ ತಜ್ಞ ಡಾ.ಶರತ್ ಬಾಬು ಎನ್.ಎಂ., ‘ಜನರಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆಯ ಅರಿವಿದ್ದರೆ ತಮ್ಮ ಸಮೀಪದಲ್ಲಿ ನಡೆಯುವ ಹೃದಯಾಘಾತ ಪ್ರಕರಣದ ರೋಗಿಯನ್ನು ಬದುಕಿಸಲು ಸಹಕರಿಸಬಹುದು’ ಎಂದರು.</p>.<p>ತುರ್ತು ಚಿಕಿತ್ಸಾ ತಂಡದವರಾದ ಡಾ.ಸೈಯದ್ ಮುಶೀರುದ್ದೀನ್, ಡಾ.ಗೌತಮ್ ಚಂದ್ರ, ಡಾ.ರಾಯಲ ಸಗುಣ ದತ್ತ ಮತ್ತು ಡಾ.ಅಮೀನಾ ಹುಸ್ನಾ ಅವರು ಪ್ರಥಮ ಚಿಕಿತ್ಸೆ ನೀಡಿ ಹೇಗೆ ಸಹಾಯ ಮಾಡಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. 110ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>