<p><strong>ಮೈಸೂರು:</strong> ‘ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂದು ದಶಕದಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಿರುವುದೇ ನರೇಂದ್ರ ಮೋದಿ ಸಾಧನೆ. ಈ ಬಾರಿಯ ಕೇಂದ್ರ ಬಜೆಟ್ ಕೇವಲ ಕಾರ್ಪೋರೇಟ್ ವಲಯದ ಓಲೈಕೆಯ ಬಜೆಟ್’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಟೀಕಿಸಿದರು.</p>.<p>‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್ ₹53.50 ಲಕ್ಷ ಕೊಟಿ ಗಾತ್ರದ್ದಾಗಿದ್ದು, ಕಳೆದ ವರ್ಷಕ್ಕಿಂತ 4 ಲಕ್ಷ ಕೋಟಿಯಷ್ಟು ಬಜೆಟ್ ಗಾತ್ರ ಹೆಚ್ಚಳ ಆಗಿದೆ. 1947ರಿಂದ 2014ರವರೆಗೆ ದೇಶದ ಸಾಲ ಒಟ್ಟು ₹53.2 ಲಕ್ಷ ಕೋಟಿ ಇತ್ತು. ಕಳೆದ 12 ವರ್ಷದಲ್ಲಿ ಇದು ₹218.6 ಲಕ್ಷ ಕೋಟಿಗೆ ಏರಿದೆ. ಇಷ್ಟೆಲ್ಲ ಸಾಲ ಮಾಡಿಯೂ ಎಷ್ಟು ಜನಪರ ಯೋಜನೆಗಳು ಜಾರಿಯಾಗಿವೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.</p>.<p>‘ಕರ್ನಾಟಕಕ್ಕೆ ಈ ಬಾರಿಯ ಬಜೆಟ್ ಕೇವಲ ಖಾಲಿ ಚೆಂಬು, ತೆಂಗಿನ ಚಿಪ್ಪು ಕೊಟ್ಟಿದೆ’ ಎಂದು ಆರೋಪಿಸಿದರು.</p>.<p>‘ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ನಂತರ ನಾವು 2ನೇ ಸ್ಥಾನದಲ್ಲಿದ್ದೇವೆ. ಪ್ರತಿ ವರ್ಷದ ರಾಜ್ಯದಿಂದ 9 ವಿಧವಾದ ತೆರಿಗೆಗಳ ಮೂಲಕ ₹5.26 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ನೀತಿ ಆಯೋಗದ ಪ್ರಯೋಗದ ಪ್ರಕಾರ ಶೇ 41ರಷ್ಟು ಪಾಲನ್ನು ರಾಜ್ಯಕ್ಕೆ ಹಿಂತಿರುಗಿಸಬೇಕು. ₹2 ಲಕ್ಷ ಕೋಟಿ ಕೊಡುವ ಜಾಗದಲ್ಲಿ ₹60 ಸಾವಿರ ಕೋಟಿ ನೀಡುತ್ತಿದ್ದಾರೆ. ಆದರೆ, ಉತ್ತರಪ್ರದೇಶಕ್ಕೆ ₹2.18 ಲಕ್ಷ ಕೋಟಿ ಕೊಟ್ಟಿದ್ದಾರೆ. ವಾರ್ಷಿಕ ₹2.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಮಧ್ಯಪ್ರದೇಶಕ್ಕೆ ₹1.11 ಲಕ್ಷ ಕೋಟಿ ನೀಡುತ್ತಿದ್ದಾರೆ. ಕರ್ನಾಟಕವನ್ನು ಕಡೆಗಣಿಸಲಾಗಿದೆ’ ಎಂದು ದೂರಿದರು.</p>.<p>‘ಬೆಂಗಳೂರಿನಿಂದ ಹೈದರಾಬಾದ್ವರೆಗೆ ಬಿಟ್ಟಿರುವುದು ಬುಲೆಟ್ ಟ್ರೈನ್ ಅಲ್ಲ, ಇದು ಕೇವಲ ಪುಂಗಿ ಊದುವ ವಿಚಾರ. ಈಗಿರುವ ರೈಲಿನ ವೇಗವನ್ನೇ ಹೆಚ್ಚಿಸಿ ಹೈಸ್ಪೀಡ್ ಎಂದು ಬದಲಿಸಲಾಗಿದೆ. ಇದರಿಂದ ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆ ಆಗಬಹುದಷ್ಟೇ’ ಎಂದರು.</p>.<p>‘ಭ್ರದಾ ಮೇಲ್ದಂಡೆ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ನಯಾಪೈಸೆ ಕೊಡುತ್ತಿಲ್ಲ. ಅನುಮತಿಯನ್ನೂ ಕೊಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘₹2 ಲಕ್ಷ ಕೋಟಿ ಬದಲಿಗೆ ₹63 ಸಾವಿರ ಕೋಟಿ ಕೊಟ್ಟರೂ ಅದನ್ನೇ ಸಾಧನೆ ಎನ್ನುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವರಾಗಿ ರಾಜ್ಯಕ್ಕೆ ಯಾವ ಕಾರ್ಖಾನೆ ತಂದಿದ್ದಿರಿ ಹೇಳಿ?’ ಎಂದು ಪ್ರಶ್ನಿಸಿದರು.</p>.<p>‘ಕೇಂದ್ರದ ಮಲತಾಯಿ ಧೋರಣೆಯನ್ನು ಮೀರಿಯೂ ರಾಜ್ಯ ಸರ್ಕಾರವು ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸುವ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ’ ಎಂದರು.</p>.<p>ಕಾಂಗ್ರೆಸ್ ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ನಜ್ಮಾ ನಾಸೀರ್, ಗೋಪಿ, ಸಯ್ಯದ್ ಅಬ್ರಾರ್, ಕೆ. ಮಹೇಶ್, ಮಹದೇವ್, ಗಿರೀಶ್ ಉಪಸ್ಥಿತರಿದ್ದರು.</p>.<div><blockquote>ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ತನ್ನ ಸಾಧನೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಖಾಸಗಿಯವರು ₹15 ಸಾವಿರ ಕೋಟಿ ಬಂಡವಾಳ ಹೂಡಿದ್ದು ಪ್ರಯಾಣಿಕರು ಪ್ರತಿ ಬಾರಿ ₹1 ಸಾವಿರ ಟೋಲ್ ಕಟ್ಟಬೇಕಿದೆ</blockquote><span class="attribution"> ಎಂ. ಲಕ್ಷ್ಮಣ ಕೆಪಿಸಿಸಿ ವಕ್ತಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂದು ದಶಕದಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಿರುವುದೇ ನರೇಂದ್ರ ಮೋದಿ ಸಾಧನೆ. ಈ ಬಾರಿಯ ಕೇಂದ್ರ ಬಜೆಟ್ ಕೇವಲ ಕಾರ್ಪೋರೇಟ್ ವಲಯದ ಓಲೈಕೆಯ ಬಜೆಟ್’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಟೀಕಿಸಿದರು.</p>.<p>‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್ ₹53.50 ಲಕ್ಷ ಕೊಟಿ ಗಾತ್ರದ್ದಾಗಿದ್ದು, ಕಳೆದ ವರ್ಷಕ್ಕಿಂತ 4 ಲಕ್ಷ ಕೋಟಿಯಷ್ಟು ಬಜೆಟ್ ಗಾತ್ರ ಹೆಚ್ಚಳ ಆಗಿದೆ. 1947ರಿಂದ 2014ರವರೆಗೆ ದೇಶದ ಸಾಲ ಒಟ್ಟು ₹53.2 ಲಕ್ಷ ಕೋಟಿ ಇತ್ತು. ಕಳೆದ 12 ವರ್ಷದಲ್ಲಿ ಇದು ₹218.6 ಲಕ್ಷ ಕೋಟಿಗೆ ಏರಿದೆ. ಇಷ್ಟೆಲ್ಲ ಸಾಲ ಮಾಡಿಯೂ ಎಷ್ಟು ಜನಪರ ಯೋಜನೆಗಳು ಜಾರಿಯಾಗಿವೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.</p>.<p>‘ಕರ್ನಾಟಕಕ್ಕೆ ಈ ಬಾರಿಯ ಬಜೆಟ್ ಕೇವಲ ಖಾಲಿ ಚೆಂಬು, ತೆಂಗಿನ ಚಿಪ್ಪು ಕೊಟ್ಟಿದೆ’ ಎಂದು ಆರೋಪಿಸಿದರು.</p>.<p>‘ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ನಂತರ ನಾವು 2ನೇ ಸ್ಥಾನದಲ್ಲಿದ್ದೇವೆ. ಪ್ರತಿ ವರ್ಷದ ರಾಜ್ಯದಿಂದ 9 ವಿಧವಾದ ತೆರಿಗೆಗಳ ಮೂಲಕ ₹5.26 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ನೀತಿ ಆಯೋಗದ ಪ್ರಯೋಗದ ಪ್ರಕಾರ ಶೇ 41ರಷ್ಟು ಪಾಲನ್ನು ರಾಜ್ಯಕ್ಕೆ ಹಿಂತಿರುಗಿಸಬೇಕು. ₹2 ಲಕ್ಷ ಕೋಟಿ ಕೊಡುವ ಜಾಗದಲ್ಲಿ ₹60 ಸಾವಿರ ಕೋಟಿ ನೀಡುತ್ತಿದ್ದಾರೆ. ಆದರೆ, ಉತ್ತರಪ್ರದೇಶಕ್ಕೆ ₹2.18 ಲಕ್ಷ ಕೋಟಿ ಕೊಟ್ಟಿದ್ದಾರೆ. ವಾರ್ಷಿಕ ₹2.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಮಧ್ಯಪ್ರದೇಶಕ್ಕೆ ₹1.11 ಲಕ್ಷ ಕೋಟಿ ನೀಡುತ್ತಿದ್ದಾರೆ. ಕರ್ನಾಟಕವನ್ನು ಕಡೆಗಣಿಸಲಾಗಿದೆ’ ಎಂದು ದೂರಿದರು.</p>.<p>‘ಬೆಂಗಳೂರಿನಿಂದ ಹೈದರಾಬಾದ್ವರೆಗೆ ಬಿಟ್ಟಿರುವುದು ಬುಲೆಟ್ ಟ್ರೈನ್ ಅಲ್ಲ, ಇದು ಕೇವಲ ಪುಂಗಿ ಊದುವ ವಿಚಾರ. ಈಗಿರುವ ರೈಲಿನ ವೇಗವನ್ನೇ ಹೆಚ್ಚಿಸಿ ಹೈಸ್ಪೀಡ್ ಎಂದು ಬದಲಿಸಲಾಗಿದೆ. ಇದರಿಂದ ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆ ಆಗಬಹುದಷ್ಟೇ’ ಎಂದರು.</p>.<p>‘ಭ್ರದಾ ಮೇಲ್ದಂಡೆ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ನಯಾಪೈಸೆ ಕೊಡುತ್ತಿಲ್ಲ. ಅನುಮತಿಯನ್ನೂ ಕೊಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘₹2 ಲಕ್ಷ ಕೋಟಿ ಬದಲಿಗೆ ₹63 ಸಾವಿರ ಕೋಟಿ ಕೊಟ್ಟರೂ ಅದನ್ನೇ ಸಾಧನೆ ಎನ್ನುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವರಾಗಿ ರಾಜ್ಯಕ್ಕೆ ಯಾವ ಕಾರ್ಖಾನೆ ತಂದಿದ್ದಿರಿ ಹೇಳಿ?’ ಎಂದು ಪ್ರಶ್ನಿಸಿದರು.</p>.<p>‘ಕೇಂದ್ರದ ಮಲತಾಯಿ ಧೋರಣೆಯನ್ನು ಮೀರಿಯೂ ರಾಜ್ಯ ಸರ್ಕಾರವು ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸುವ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ’ ಎಂದರು.</p>.<p>ಕಾಂಗ್ರೆಸ್ ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ನಜ್ಮಾ ನಾಸೀರ್, ಗೋಪಿ, ಸಯ್ಯದ್ ಅಬ್ರಾರ್, ಕೆ. ಮಹೇಶ್, ಮಹದೇವ್, ಗಿರೀಶ್ ಉಪಸ್ಥಿತರಿದ್ದರು.</p>.<div><blockquote>ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ತನ್ನ ಸಾಧನೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಖಾಸಗಿಯವರು ₹15 ಸಾವಿರ ಕೋಟಿ ಬಂಡವಾಳ ಹೂಡಿದ್ದು ಪ್ರಯಾಣಿಕರು ಪ್ರತಿ ಬಾರಿ ₹1 ಸಾವಿರ ಟೋಲ್ ಕಟ್ಟಬೇಕಿದೆ</blockquote><span class="attribution"> ಎಂ. ಲಕ್ಷ್ಮಣ ಕೆಪಿಸಿಸಿ ವಕ್ತಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>