<p><strong>ಮೈಸೂರು:</strong> ಇಲ್ಲಿನ ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ತೆರವುಗೊಳಿಸುತ್ತಿದ್ದಾಗ ಮೇಲ್ಛಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನ ಮೃತದೇಹ ಮಂಗಳವಾರ ತಡರಾತ್ರಿ ಪತ್ತೆಯಾಗಿದೆ. </p><p>ಗೌಸಿಯಾನಗರದ ನಿವಾಸಿ ಸದ್ದಾಂ (32) ಮೃತ ವ್ಯಕ್ತಿ. ವಿಜ್ಞಾನ ಕಾಲೇಜಿಗೆ ಸೇರಿದ 107 ವರ್ಷಗಳ ಹಳೆಯ ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಯೋಜಿಸಲಾಗಿತ್ತು.</p><p>ಸೋಮವಾರದಿಂದ 15 ಕಾರ್ಮಿಕರನ್ನು ಈ ಕೆಲಸಕ್ಕಾಗಿ ನೇಮಿಸಿದ್ದರು. ಅವರು ಮಂಗಳವಾರ ಕಟ್ಟಡದಲ್ಲಿನ ಕಿಟಕಿಗಳನ್ನು ತೆರವುಗೊಳಿಸುತ್ತಿದ್ದರು. ಸಂಜೆ 5ರ ವೇಳೆಗೆ ಎಲ್ಲರೂ ಚಹಾ ಸೇವನೆ ಮಾಡುತ್ತಿದ್ದಾಗ ಸದ್ದಾಂ ಈ ಹಿಂದೆ ಎವಿ (ಆಡಿಯೋ ವಿಶುವಲ್) ಕೊಠಡಿಯಾಗಿದ್ದ ಕೋಣೆಗೆ ತೆರಳಿದ್ದಾಗ ಕಟ್ಟಡ ಒಂದು ಭಾಗದ ಚಾವಣಿ ದಿಢೀರ್ ಕುಸಿದಿತ್ತು.</p><p>ಸದ್ದಾಂ ಪತ್ತೆಗಾಗಿ ಮಂಗಳವಾರ ಸಂಜೆ 5 ರಿಂದ ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು. ಹಿಟಾಚಿ ಮೂಲಕ ಕಾರ್ಯಾಚರಣೆ ನಡೆಸಿದಾಗ ತಡರಾತ್ರಿ 2.30 ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. 'ಹಿಟಾಚಿ ಕಾರ್ಯಾಚರಣೆಯ ವೇಳೆ ದೇಹದ ಎರಡು ಭಾಗವಾಗಿತ್ತು' ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.</p>.ಕೊಪ್ಪಳ ಬಳಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ಒಬ್ಬರ ದುರ್ಮರಣ– ಏಳು ಜನ ಅಸ್ವಸ್ಥ.ಬಿಡದಿ ತ್ಯಾಜ್ಯ ವಿದ್ಯುತ್ ಸ್ಥಾವರ ಅವಘಡ: ಮೃತರ ಸಂಖ್ಯೆ 5ಕ್ಕೆ ಏರಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ತೆರವುಗೊಳಿಸುತ್ತಿದ್ದಾಗ ಮೇಲ್ಛಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನ ಮೃತದೇಹ ಮಂಗಳವಾರ ತಡರಾತ್ರಿ ಪತ್ತೆಯಾಗಿದೆ. </p><p>ಗೌಸಿಯಾನಗರದ ನಿವಾಸಿ ಸದ್ದಾಂ (32) ಮೃತ ವ್ಯಕ್ತಿ. ವಿಜ್ಞಾನ ಕಾಲೇಜಿಗೆ ಸೇರಿದ 107 ವರ್ಷಗಳ ಹಳೆಯ ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಯೋಜಿಸಲಾಗಿತ್ತು.</p><p>ಸೋಮವಾರದಿಂದ 15 ಕಾರ್ಮಿಕರನ್ನು ಈ ಕೆಲಸಕ್ಕಾಗಿ ನೇಮಿಸಿದ್ದರು. ಅವರು ಮಂಗಳವಾರ ಕಟ್ಟಡದಲ್ಲಿನ ಕಿಟಕಿಗಳನ್ನು ತೆರವುಗೊಳಿಸುತ್ತಿದ್ದರು. ಸಂಜೆ 5ರ ವೇಳೆಗೆ ಎಲ್ಲರೂ ಚಹಾ ಸೇವನೆ ಮಾಡುತ್ತಿದ್ದಾಗ ಸದ್ದಾಂ ಈ ಹಿಂದೆ ಎವಿ (ಆಡಿಯೋ ವಿಶುವಲ್) ಕೊಠಡಿಯಾಗಿದ್ದ ಕೋಣೆಗೆ ತೆರಳಿದ್ದಾಗ ಕಟ್ಟಡ ಒಂದು ಭಾಗದ ಚಾವಣಿ ದಿಢೀರ್ ಕುಸಿದಿತ್ತು.</p><p>ಸದ್ದಾಂ ಪತ್ತೆಗಾಗಿ ಮಂಗಳವಾರ ಸಂಜೆ 5 ರಿಂದ ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು. ಹಿಟಾಚಿ ಮೂಲಕ ಕಾರ್ಯಾಚರಣೆ ನಡೆಸಿದಾಗ ತಡರಾತ್ರಿ 2.30 ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. 'ಹಿಟಾಚಿ ಕಾರ್ಯಾಚರಣೆಯ ವೇಳೆ ದೇಹದ ಎರಡು ಭಾಗವಾಗಿತ್ತು' ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.</p>.ಕೊಪ್ಪಳ ಬಳಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ಒಬ್ಬರ ದುರ್ಮರಣ– ಏಳು ಜನ ಅಸ್ವಸ್ಥ.ಬಿಡದಿ ತ್ಯಾಜ್ಯ ವಿದ್ಯುತ್ ಸ್ಥಾವರ ಅವಘಡ: ಮೃತರ ಸಂಖ್ಯೆ 5ಕ್ಕೆ ಏರಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>