<p><strong>ಮೈಸೂರು:</strong> ವಿಶಿಷ್ಟ ಸುವಾಸನೆ ಹೊಂದಿರುವ ‘ಮೈಸೂರು ದುಂಡು ಮಲ್ಲಿಗೆ’ ಬೆಳೆಯುವ ಪ್ರದೇಶವು ಜಿಲ್ಲೆಯಲ್ಲಿ ಕ್ರಮೇಣ ಕ್ಷೀಣಿಸುತ್ತಿದೆ.</p>.<p>ಪ್ರಸ್ತುತ ಅಂದಾಜು 10 ಎಕರೆಯಲ್ಲಷ್ಟೇ ಈ ಪುಷ್ಪ ಕೃಷಿ ಮಾಡಲಾಗುತ್ತಿದೆ. ತಾಲ್ಲೂಕಿನ ಅಲ್ಲಲ್ಲಿ 4, 5 ಅಥವಾ 6 ಗುಂಟೆ ಲೆಕ್ಕದಲ್ಲಿ ರೈತರು ಬೆಳೆಯುತ್ತಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಒಳ್ಳೆಯ ಬೆಲೆ ದೊರೆಯುತ್ತದೆಯಾದರೂ, ಹೂವು ಬಿಡಿಸುವುದು ನಾಜೂಕಿನ ಕೆಲಸವಾದ್ದರಿಂದ ಎಕರೆಗಟ್ಟಲೆ ಬೆಳೆಯಲು ಬೆಳೆಗಾರರು ಮುಂದೆ ಬರುತ್ತಿಲ್ಲ. ಇದರಿಂದ ಇಲ್ಲಿನ ಮಾರುಕಟ್ಟೆಯನ್ನು ತಮಿಳುನಾಡಿನ ಹೂವುಗಳೇ ಆಕ್ರಮಿಸಿವೆ.</p>.<p>ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ಶನಿವಾರ ಕೆ.ಜಿ. ಮಲ್ಲಿಗೆ ಹೂವಿನ ದರ ₹800ರಿಂದ ₹900 ಇತ್ತು. ಹೂವಿನ ವ್ಯಾಪಾರಿಗಳ ಬಳಿ ಸಾಮಾನ್ಯ ದಿನಗಳಲ್ಲಿ ಮೊಳಕ್ಕೆ ₹50 ದರ ಇದ್ದರೆ, ಹಬ್ಬಗಳಿದ್ದಾಗ ₹150ರಿಂದ ₹200ರವರೆಗೂ ಬೆಲೆ ಏರಿಕೆ ಆಗುತ್ತದೆ.</p>.<p>ಸದ್ಯ ಮೈಸೂರು ಭಾಗದಿಂದ ಹೂವು ಬರುತ್ತಿರುವುದು ಕಡಿಮೆ ಪ್ರಮಾಣದಲ್ಲಿದೆ. ಇಲ್ಲಿಗೆ ತಮಿಳುನಾಡಿನ ಮಧುರೈ ಮೊದಲಾದ ಕಡೆಯಿಂದಲೇ ಹೆಚ್ಚು ಬರುತ್ತಿದೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು.</p>.<p><strong>ಕಾರಣ ಏನು?:</strong></p>.<p>ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದು, ರೋಗ ಬಾಧೆ, ಕೊಯ್ಲಿಗೆ ಹೆಚ್ಚಿನ ಜನರ ಅಗತ್ಯ ಕಂಡುಬರುವುದು ಹಾಗೂ ಹರಸಾಹಸಪಟ್ಟು ಮಾರುಕಟ್ಟೆಗೆ ತಂದರೆ ಸೂಕ್ತ ಬೆಲೆ ಸಿಗದಿರುವುದು ಸೇರಿ ಮೊದಲಾದ ಕಾರಣದಿಂದ ಈ ಕೃಷಿ ಮಾಡುವುದರಿಂದ ವಿಮುಖರಾಗುವಂತಾಗಿದೆ ಎನ್ನುತ್ತಾರೆ ರೈತರು.</p>.<p>‘ಬೆಳೆದವರಿಗಿಂತಲೂ ಹೆಚ್ಚಿನ ಲಾಭವನ್ನು ಮಧ್ಯವರ್ತಿಗಳು, ವ್ಯಾಪಾರಿಗಳು ಮಾಡಿಕೊಳ್ಳುತ್ತಾರೆ. ನಮಗೆ ದೊರೆಯುವ ಲಾಭ ಕಡಿಮೆ’ ಎನ್ನುವುದು ಅವರ ಬೇಸರದ ನುಡಿ.</p>.<p>ಮೈಸೂರು ಮಲ್ಲಿಗೆ ತಳಿಯ ಸಸಿಗಳು ಕುಕ್ಕರಹಳ್ಳಿ ಕೆರೆಯ ನರ್ಸರಿಯಲ್ಲಿ ಸಿಗುತ್ತವೆ. ಖರ್ಚು ಹೆಚ್ಚು ಎಂಬ ಕಾರಣಕ್ಕೆ ರೈತರು ಖರೀದಿಸಲು ಹಾಗೂ ಬೆಳೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಬೆಳೆಯಲು ಮುಂದೆ ಬರುವವರಿಗೆ ಮಾರ್ಗದರ್ಶನ ನೀಡಲು ಸಿದ್ಧವಿದ್ದೇವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.</p>.<p>‘ನಾನೀಗ ಅರ್ಧ ಎಕರೆಯಲ್ಲಿ ಮೈಸೂರು ಮಲ್ಲಿಗೆ ಬೆಳೆಯುತ್ತಿದ್ದೇನೆ. ಸಸಿ ಮಾಡಿ ತಲಾ ₹30ಕ್ಕೆ ಮಾರುತ್ತಿದ್ದೇನೆ. ಹೂವನ್ನು ದೇವರಾಜ ಮಾರುಕಟ್ಟೆಗೆ ಒಯ್ದು ಮಾರುತ್ತೇನೆ. ತಮಿಳುನಾಡಿನ ಹೂವಿನಲ್ಲಿ ಪರಿಮಳವೇ ಇರುವುದಿಲ್ಲ. ಹೀಗಾಗಿ, ಮೈಸೂರು ಮಲ್ಲಿಗೆಗೆ ಬೆಲೆ ಹೆಚ್ಚಿರುತ್ತದೆ’ ಎಂದು ತಾಲ್ಲೂಕಿನ ಮಾರಗೌಡನಹಳ್ಳಿಯ ರೈತ ಕೃಷ್ಣಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ವಿಶಿಷ್ಟ ಸುವಾಸನೆ ಹೊಂದಿರುವ ‘ಮೈಸೂರು ದುಂಡು ಮಲ್ಲಿಗೆ’ ಬೆಳೆಯುವ ಪ್ರದೇಶವು ಜಿಲ್ಲೆಯಲ್ಲಿ ಕ್ರಮೇಣ ಕ್ಷೀಣಿಸುತ್ತಿದೆ.</p>.<p>ಪ್ರಸ್ತುತ ಅಂದಾಜು 10 ಎಕರೆಯಲ್ಲಷ್ಟೇ ಈ ಪುಷ್ಪ ಕೃಷಿ ಮಾಡಲಾಗುತ್ತಿದೆ. ತಾಲ್ಲೂಕಿನ ಅಲ್ಲಲ್ಲಿ 4, 5 ಅಥವಾ 6 ಗುಂಟೆ ಲೆಕ್ಕದಲ್ಲಿ ರೈತರು ಬೆಳೆಯುತ್ತಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಒಳ್ಳೆಯ ಬೆಲೆ ದೊರೆಯುತ್ತದೆಯಾದರೂ, ಹೂವು ಬಿಡಿಸುವುದು ನಾಜೂಕಿನ ಕೆಲಸವಾದ್ದರಿಂದ ಎಕರೆಗಟ್ಟಲೆ ಬೆಳೆಯಲು ಬೆಳೆಗಾರರು ಮುಂದೆ ಬರುತ್ತಿಲ್ಲ. ಇದರಿಂದ ಇಲ್ಲಿನ ಮಾರುಕಟ್ಟೆಯನ್ನು ತಮಿಳುನಾಡಿನ ಹೂವುಗಳೇ ಆಕ್ರಮಿಸಿವೆ.</p>.<p>ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ಶನಿವಾರ ಕೆ.ಜಿ. ಮಲ್ಲಿಗೆ ಹೂವಿನ ದರ ₹800ರಿಂದ ₹900 ಇತ್ತು. ಹೂವಿನ ವ್ಯಾಪಾರಿಗಳ ಬಳಿ ಸಾಮಾನ್ಯ ದಿನಗಳಲ್ಲಿ ಮೊಳಕ್ಕೆ ₹50 ದರ ಇದ್ದರೆ, ಹಬ್ಬಗಳಿದ್ದಾಗ ₹150ರಿಂದ ₹200ರವರೆಗೂ ಬೆಲೆ ಏರಿಕೆ ಆಗುತ್ತದೆ.</p>.<p>ಸದ್ಯ ಮೈಸೂರು ಭಾಗದಿಂದ ಹೂವು ಬರುತ್ತಿರುವುದು ಕಡಿಮೆ ಪ್ರಮಾಣದಲ್ಲಿದೆ. ಇಲ್ಲಿಗೆ ತಮಿಳುನಾಡಿನ ಮಧುರೈ ಮೊದಲಾದ ಕಡೆಯಿಂದಲೇ ಹೆಚ್ಚು ಬರುತ್ತಿದೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು.</p>.<p><strong>ಕಾರಣ ಏನು?:</strong></p>.<p>ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದು, ರೋಗ ಬಾಧೆ, ಕೊಯ್ಲಿಗೆ ಹೆಚ್ಚಿನ ಜನರ ಅಗತ್ಯ ಕಂಡುಬರುವುದು ಹಾಗೂ ಹರಸಾಹಸಪಟ್ಟು ಮಾರುಕಟ್ಟೆಗೆ ತಂದರೆ ಸೂಕ್ತ ಬೆಲೆ ಸಿಗದಿರುವುದು ಸೇರಿ ಮೊದಲಾದ ಕಾರಣದಿಂದ ಈ ಕೃಷಿ ಮಾಡುವುದರಿಂದ ವಿಮುಖರಾಗುವಂತಾಗಿದೆ ಎನ್ನುತ್ತಾರೆ ರೈತರು.</p>.<p>‘ಬೆಳೆದವರಿಗಿಂತಲೂ ಹೆಚ್ಚಿನ ಲಾಭವನ್ನು ಮಧ್ಯವರ್ತಿಗಳು, ವ್ಯಾಪಾರಿಗಳು ಮಾಡಿಕೊಳ್ಳುತ್ತಾರೆ. ನಮಗೆ ದೊರೆಯುವ ಲಾಭ ಕಡಿಮೆ’ ಎನ್ನುವುದು ಅವರ ಬೇಸರದ ನುಡಿ.</p>.<p>ಮೈಸೂರು ಮಲ್ಲಿಗೆ ತಳಿಯ ಸಸಿಗಳು ಕುಕ್ಕರಹಳ್ಳಿ ಕೆರೆಯ ನರ್ಸರಿಯಲ್ಲಿ ಸಿಗುತ್ತವೆ. ಖರ್ಚು ಹೆಚ್ಚು ಎಂಬ ಕಾರಣಕ್ಕೆ ರೈತರು ಖರೀದಿಸಲು ಹಾಗೂ ಬೆಳೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಬೆಳೆಯಲು ಮುಂದೆ ಬರುವವರಿಗೆ ಮಾರ್ಗದರ್ಶನ ನೀಡಲು ಸಿದ್ಧವಿದ್ದೇವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.</p>.<p>‘ನಾನೀಗ ಅರ್ಧ ಎಕರೆಯಲ್ಲಿ ಮೈಸೂರು ಮಲ್ಲಿಗೆ ಬೆಳೆಯುತ್ತಿದ್ದೇನೆ. ಸಸಿ ಮಾಡಿ ತಲಾ ₹30ಕ್ಕೆ ಮಾರುತ್ತಿದ್ದೇನೆ. ಹೂವನ್ನು ದೇವರಾಜ ಮಾರುಕಟ್ಟೆಗೆ ಒಯ್ದು ಮಾರುತ್ತೇನೆ. ತಮಿಳುನಾಡಿನ ಹೂವಿನಲ್ಲಿ ಪರಿಮಳವೇ ಇರುವುದಿಲ್ಲ. ಹೀಗಾಗಿ, ಮೈಸೂರು ಮಲ್ಲಿಗೆಗೆ ಬೆಲೆ ಹೆಚ್ಚಿರುತ್ತದೆ’ ಎಂದು ತಾಲ್ಲೂಕಿನ ಮಾರಗೌಡನಹಳ್ಳಿಯ ರೈತ ಕೃಷ್ಣಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>