<p><strong>ಮೈಸೂರು:</strong> ಕೆಎಸ್ಐಸಿಯ ಇಲ್ಲಿನ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ಶನಿವಾರವೂ ದಾಸ್ತಾನು ಕೊರತೆ ಮುಂದುವರೆದಿತ್ತು. ಬಹುತೇಕ ಮಳಿಗೆಗಳಲ್ಲಿ ಕೆಲವೇ ಸೀರೆಗಳು ಲಭ್ಯವಿವೆ. ವಾರಾಂತ್ಯದ ಕಾರಣ ಮಳಿಗೆಯತ್ತ ಧಾವಿಸಿದ ಗ್ರಾಹಕರಿಗೆ ಇಷ್ಟದ ಸೀರೆಗಳು ಸಿಗಲಿಲ್ಲ.</p>.<p>ಈ ನಡುವೆ ಮೈಸೂರಿನ ನೇಯ್ಗೆ ಘಟಕವು ಕಾರ್ಯಾರಂಭಗೊಂಡಿತು. ತಿ.ನರಸೀಪುರದ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಉತ್ಪಾದನಾ ಘಟಕದ ಸಿಬ್ಬಂದಿ ಕೆಲಸ ನಿಲ್ಲಿಸಿದ್ದರಿಂದ ಸೀರೆ ಉತ್ಪಾದನೆ ಸ್ಥಗಿತಗೊಂಡಿತ್ತು. ಮೈಸೂರಿನ ಸೀರೆ ನೇಯ್ಗೆಯ ಘಟಕದ ಸಿಬ್ಬಂದಿಯೂ ಬೆಂಬಲ ನೀಡಿದ್ದರು. </p>.<h2>ನೇಯ್ಗೆ ಆರಂಭ:</h2><h2></h2><p>ಶನಿವಾರ ನೇಯ್ಗೆ ಘಟಕ ಕಾರ್ಯಾರಂಭಗೊಂಡಿದೆ. ‘ವಾರದಿಂದ ಕೆಲಸ ನಿಲ್ಲಿಸಿರುವುದಕ್ಕೆ ಬಣ್ಣಗಳಲ್ಲಿ ನೆನೆಸಿಟ್ಟಿದ್ದ, ಸೀರೆ ತಯಾರಿಸಲು ಬಳಸುವ ರೇಷ್ಮೆ ನೂಲುಗಳು ಹಾಳಾಗುವ ಸಂಭವಿತ್ತು. ಹೀಗಾಗಿ ಕೆಲಸ ಆರಂಭಿಸಿದ್ದೇವೆ’ ಎಂದು ನೌಕರರೊಬ್ಬರು ತಿಳಿಸಿದರು.</p>.<p>‘ತಿ.ನರಸೀಪುರದ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಅಲ್ಲಿನ ಕಾರ್ಮಿಕರು ಕೆಲಸ ಆರಂಭಿಸಿಲ್ಲ. ಸಮಸ್ಯೆ ಮುಂದುವರಿದರೆ, ಮೈಸೂರು ಘಟಕಕ್ಕೆ ಅಲ್ಲಿಂದ ರೇಷ್ಮೆ ನೂಲು ದೊರೆಯದೇ ಉತ್ಪಾದನೆ ಸ್ಥಗಿತಗೊಳ್ಳಲಿದೆ’ ಎಂದರು.</p>.<p>‘ಕುಟುಂಬದಲ್ಲಿ ಕಾರ್ಯಕ್ರಮವಿದ್ದು, ಮೈಸೂರು ರೇಷ್ಮೆ ಸೀರೆಯೇ ಬೇಕೆಂದು ಶಿವಮೊಗ್ಗದಿಂದ ಬಂದಿದ್ದೇವೆ. ಆದರೆ ಹೆಚ್ಚಿನ ಆಯ್ಕೆಗಳೇ ಇಲ್ಲ’ ಎಂದು ಅಶ್ವಿನಿ ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕೆಎಸ್ಐಸಿಯ ಇಲ್ಲಿನ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ಶನಿವಾರವೂ ದಾಸ್ತಾನು ಕೊರತೆ ಮುಂದುವರೆದಿತ್ತು. ಬಹುತೇಕ ಮಳಿಗೆಗಳಲ್ಲಿ ಕೆಲವೇ ಸೀರೆಗಳು ಲಭ್ಯವಿವೆ. ವಾರಾಂತ್ಯದ ಕಾರಣ ಮಳಿಗೆಯತ್ತ ಧಾವಿಸಿದ ಗ್ರಾಹಕರಿಗೆ ಇಷ್ಟದ ಸೀರೆಗಳು ಸಿಗಲಿಲ್ಲ.</p>.<p>ಈ ನಡುವೆ ಮೈಸೂರಿನ ನೇಯ್ಗೆ ಘಟಕವು ಕಾರ್ಯಾರಂಭಗೊಂಡಿತು. ತಿ.ನರಸೀಪುರದ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಉತ್ಪಾದನಾ ಘಟಕದ ಸಿಬ್ಬಂದಿ ಕೆಲಸ ನಿಲ್ಲಿಸಿದ್ದರಿಂದ ಸೀರೆ ಉತ್ಪಾದನೆ ಸ್ಥಗಿತಗೊಂಡಿತ್ತು. ಮೈಸೂರಿನ ಸೀರೆ ನೇಯ್ಗೆಯ ಘಟಕದ ಸಿಬ್ಬಂದಿಯೂ ಬೆಂಬಲ ನೀಡಿದ್ದರು. </p>.<h2>ನೇಯ್ಗೆ ಆರಂಭ:</h2><h2></h2><p>ಶನಿವಾರ ನೇಯ್ಗೆ ಘಟಕ ಕಾರ್ಯಾರಂಭಗೊಂಡಿದೆ. ‘ವಾರದಿಂದ ಕೆಲಸ ನಿಲ್ಲಿಸಿರುವುದಕ್ಕೆ ಬಣ್ಣಗಳಲ್ಲಿ ನೆನೆಸಿಟ್ಟಿದ್ದ, ಸೀರೆ ತಯಾರಿಸಲು ಬಳಸುವ ರೇಷ್ಮೆ ನೂಲುಗಳು ಹಾಳಾಗುವ ಸಂಭವಿತ್ತು. ಹೀಗಾಗಿ ಕೆಲಸ ಆರಂಭಿಸಿದ್ದೇವೆ’ ಎಂದು ನೌಕರರೊಬ್ಬರು ತಿಳಿಸಿದರು.</p>.<p>‘ತಿ.ನರಸೀಪುರದ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಅಲ್ಲಿನ ಕಾರ್ಮಿಕರು ಕೆಲಸ ಆರಂಭಿಸಿಲ್ಲ. ಸಮಸ್ಯೆ ಮುಂದುವರಿದರೆ, ಮೈಸೂರು ಘಟಕಕ್ಕೆ ಅಲ್ಲಿಂದ ರೇಷ್ಮೆ ನೂಲು ದೊರೆಯದೇ ಉತ್ಪಾದನೆ ಸ್ಥಗಿತಗೊಳ್ಳಲಿದೆ’ ಎಂದರು.</p>.<p>‘ಕುಟುಂಬದಲ್ಲಿ ಕಾರ್ಯಕ್ರಮವಿದ್ದು, ಮೈಸೂರು ರೇಷ್ಮೆ ಸೀರೆಯೇ ಬೇಕೆಂದು ಶಿವಮೊಗ್ಗದಿಂದ ಬಂದಿದ್ದೇವೆ. ಆದರೆ ಹೆಚ್ಚಿನ ಆಯ್ಕೆಗಳೇ ಇಲ್ಲ’ ಎಂದು ಅಶ್ವಿನಿ ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>